Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅಲ್-ಅಖ್ಸಾ ಮಸೀದಿ ಮೇಲೆ ನಡೆದ...

ಅಲ್-ಅಖ್ಸಾ ಮಸೀದಿ ಮೇಲೆ ನಡೆದ ಆಕ್ರಮಣಕ್ಕೆ ಇಸ್ರೇಲ್ ಹೊಣೆಯಾಗಬೇಕು:ಆರ್ ಸಿಜೆಎ ಆಗ್ರಹ

30 March 2023 10:22 PM IST
share
ಅಲ್-ಅಖ್ಸಾ ಮಸೀದಿ ಮೇಲೆ ನಡೆದ ಆಕ್ರಮಣಕ್ಕೆ ಇಸ್ರೇಲ್ ಹೊಣೆಯಾಗಬೇಕು:ಆರ್ ಸಿಜೆಎ ಆಗ್ರಹ

ಜೆರುಸಲೇಂ, ಮಾ.30: ಅಲ್-ಅಖ್ಸಾ ಮಸೀದಿಯ ಮೇಲೆ ನಡೆದಿರುವ ಆಕ್ರಮಣಕ್ಕೆ ಇಸ್ರೇಲ್ ಜವಾಬ್ದಾರನಾಗಬೇಕು ಎಂದು `ರಾಯಲ್ ಕಮಿಟಿ ಫಾರ್ ಜೆರುಸಲೇಂ ಅಫೇರ್ಸ್( ಆರ್ ಸಿಜೆಎ)'ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಕನ್ನಾನ್ ಆಗ್ರಹಿಸಿದ್ದಾರೆ.

ಇಸ್ರೇಲ್‍ನ ಕಾರ್ಯನೀತಿಯು ಅದರ ತೀವ್ರ ಬಲಪಂಥೀಯ ಸರಕಾರದ ನೈಜಮುಖವನ್ನು ಅನಾವರಣಗೊಳಿಸಿದೆ. ಆದ್ದರಿಂದ ಫೆಲೆಸ್ತೀನ್ ಜನರನ್ನು, ಆರಾಧನೆಯ ಹಕ್ಕುಗಳು, ಸ್ವಯಂ ನಿರ್ಣಯದ ಹಕ್ಕುಗಳನ್ನು ಸಂರಕ್ಷಿಸಲು ಅಂತರಾಷ್ಟ್ರೀಯ ಮಧ್ಯಸ್ಥಿಕೆಯ ಅಗತ್ಯವಿದೆ ಎಂದು ಸಮಿತಿ ಕರೆ ನೀಡಿದೆ.

ಮಸೀದಿಗೆ  ಪ್ರತೀದಿನ ನಡೆಯುವ ದಾಳಿಯು ಜೆರುಸಲೇಂ ಮತ್ತು ಆಕ್ರಮಿತ ಫೆಲೆಸ್ತೀನ್‍ನಲ್ಲಿ ಇಸ್ರೇಲ್‍ನ ಹೆಚ್ಚುತ್ತಿರುವ ಆಕ್ರಮಣದ ಒಂದು ಭಾಗವಾಗಿದೆ. ಇಸ್ರೇಲ್‍ನ ನಾಯಕತ್ವ, ಕಾರ್ಯಕ್ರಮ ಹಾಗೂ ಮೈತ್ರಿಗಳು ಅಲ್-ಅಖ್ಸಾ ಮಸೀದಿಯನ್ನು ವಿಭಜಿಸುವ ಗುರಿಯನ್ನು ಹೊಂದಿದೆ. ಇಸ್ರೇಲ್‍ನ ಕಾರ್ಯನೀತಿ ಕಟ್ಟಾ ಬಲಪಂಥೀಯ ಸರಕಾರದ ನೈಜ ಮುಖದ ಅನಾವರಣವಾಗಿದೆ ಎಂದು ಕನ್ನಾನ್ ಪ್ರತಿಪಾದಿಸಿದ್ದಾರೆ.

ಇಸ್ರೇಲ್ ನಿಜಕ್ಕೂ ಶಾಂತಿಯನ್ನು ಬಯಸುವುದಾದರೆ ತಕ್ಷಣ ತಾನು ನಡೆಸುತ್ತಿರುವ ಉಲ್ಲಂಘನೆಗಳನ್ನು ಅಂತ್ಯಗೊಳಿಸಬೇಕು, ಫೆಲೆಸ್ತೀನ್‍ಗೆ ಸಂಬಂಧಿಸಿದ ಎಲ್ಲಾ ಅಂತರಾಷ್ಟ್ರೀಯ ನಿರ್ಣಯಗಳಿಗೆ ಬದ್ಧವಾಗಿರಬೇಕು ಮತ್ತು ಜೆರುಸಲೇಂನ ಚಾರಿತ್ರಿಕ ಸ್ಥಿತಿಗತಿಯನ್ನು ವಿರೂಪಗೊಳಿಸುವ ಪ್ರಯತ್ನವನ್ನು ಕೈಬಿಡಬೇಕು. ಜೋರ್ಡಾನ್ ನಿರ್ವಹಿಸುತ್ತಿರುವ, ಜೆರುಸಲೇಂನಲ್ಲಿರುವ  `ಇಸ್ಲಾಮಿಕ್ ಎಂಡೋಮೆಂಟ್ಸ್ ಡಿಪಾರ್ಟ್‍ಮೆಂಟ್' (ಇಸ್ಲಾಮಿಕ್ ದತ್ತಿ ಇಲಾಖೆ) ಅಲ್-ಅಖ್ಸ ಮಸೀದಿಯ ವ್ಯವಹಾರಗಳನ್ನು ನಿರ್ವಹಿಸಲು ವಿಶೇಷ ಅಧಿಕಾರವನ್ನು ಹೊಂದಿರುವ  ಏಕೈಕ ಸಂಸ್ಥೆಯಾಗಿದೆ. ಜೆರುಸಲೇಂನಲ್ಲಿರುವ ಇಸ್ಲಾಮಿಕ್ ಮತ್ತು ಕ್ರಿಶ್ಚಿಯನ್ ಪವಿತ್ರಸ್ಥಳಗಳ ಐತಿಹಾಸಿಕ ಪಾಲಕನಾಗಿ ಜೋರ್ಡಾನ್ ಮುಂದುವರಿಯಲಿದೆ ಮತ್ತು ಫೆಲೆಸ್ತೀನ್ ಹಾಗೂ ಜೆರುಸಲೇಂಗೆ ತನ್ನ ದೃಢ ಬೆಂಬಲವನ್ನು ಮುಂದುವರಿಸಲಿದೆ ಎಂದು ಅಬ್ದುಲ್ಲಾ ಕನ್ನಾನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸಮುದಾಯದ ಖಂಡನೆ

2022ರ ಎಪ್ರಿಲ್‍ನಲ್ಲಿ ಜೆರುಸಲೇಂನ ಓಲ್ಡ್‍ಸಿಟಿಯಲ್ಲಿರುವ ಅಲ್‍ಅಖ್ಸ ಮಸೀದಿಯಲ್ಲಿ ಫೆಲೆಸ್ತೀನೀಯರು ಹಾಗೂ ಇಸ್ರೇಲ್ ಭದ್ರತಾ ಪಡೆಯ ಮಧ್ಯೆ ಘರ್ಷಣೆ ಭುಗಿಲೆದ್ದಿತ್ತು. ಮಸೀದಿಯೊಳಗೆ ನುಗ್ಗಿದ  ಪೊಲೀಸರತ್ತ ಫೆಲೆಸ್ತೀನೀಯರು ಕಲ್ಲು ಮತ್ತು ಇಟ್ಟಿಗೆಯಿಂದ ದಾಳಿ ನಡೆಸಿದರು ಎಂದು ಆರೋಪಿಸಿದ್ದ ಇಸ್ರೇಲ್ ಪೊಲೀಸರು ಸ್ಟನ್ ಗ್ರೆನೇಡ್ ಸಿಡಿಸಿದರಲ್ಲದೆ, ಲಾಠಿಚಾರ್ಜ್ ನಡೆಸಿ ಅಶ್ರುವಾಯು ಪ್ರಯೋಗಿಸಿದಾಗ 4 ಮಹಿಳೆಯರು, 27 ಮಕ್ಕಳ ಸಹಿತ ಸುಮಾರು 160 ಫೆಲೆಸ್ತೀನೀಯರು ಗಾಯಗೊಂಡಿದ್ದರು ಎಂದು ಮಾಧ್ಯಮಗಳ ವರದಿ ಹೇಳಿದೆ.

ಇಸ್ರೇಲ್ ಪೊಲೀಸರು ಅನಗತ್ಯ ಬಲಪ್ರಯೋಗಿಸಿದ್ದಾರೆ ಎಂದು ಅಂತರಾಷ್ಟ್ರೀಯ ಸಮುದಾಯದಿಂದ  ಖಂಡನೆ ವ್ಯಕ್ತವಾಗಿತ್ತು. 

share
Next Story
X