Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಮುದ್ರದ ತಳದಲ್ಲಿ 100 ದಿನ ಕಳೆಯಲಿರುವ...

ಸಮುದ್ರದ ತಳದಲ್ಲಿ 100 ದಿನ ಕಳೆಯಲಿರುವ ಅಮೆರಿಕಾ ಪ್ರಾಧ್ಯಾಪಕ: ಕಾರಣವೇನು ಗೊತ್ತೇ?

5 April 2023 8:05 PM IST
share
ಸಮುದ್ರದ ತಳದಲ್ಲಿ 100 ದಿನ ಕಳೆಯಲಿರುವ ಅಮೆರಿಕಾ ಪ್ರಾಧ್ಯಾಪಕ: ಕಾರಣವೇನು ಗೊತ್ತೇ?

ವಾಷಿಂಗ್ಟನ್: ನೀರಿನೊಳಗೆ ಒಂದು ಪುಟ್ಟ ಪೆಟ್ಟಿಗೆಯಲ್ಲಿ ಸಿಲುಕಿ ಹಾಕಿಕೊಳ್ಳುವುದನ್ನು ದುಸ್ವಪ್ನದಂತೆ ಭಾವಿಸುವ ಹಲವು ಮಂದಿಯ ಪಟ್ಟಿ ದೊರೆಯಲು ಸಾಧ್ಯವಿದೆ. ಆದರೆ, ಅಮೆರಿಕಾದ ಓರ್ವ ಪ್ರಾಧ್ಯಾಪಕರು ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡುತ್ತಿದ್ದಾರೆ. ಅಮೆರಿಕಾದ ಮಾಜಿ ಮುಳುಗು ಪಟು ಹಾಗೂ ಜೈವಿಕ ವೈದ್ಯಕೀಯ ಎಂಜಿನಿಯರಿಂಗ್‍ನಲ್ಲಿ ತಜ್ಞರಾಗಿರುವ ಜೋ ಡಿಟುರಿ, ಮಾರ್ಚ್ 1ರಿಂದ ಫ್ಲೋರಿಡಾ ಕೀಸ್ ಸಾಗರದ ತಳದಲ್ಲಿ 55 ಚದರ ಮೀಟರ್ ವಿಸ್ತೀರ್ಣ ಹಾಗೂ 30 ಅಡಿಯಷ್ಟು ಆಳದಲ್ಲಿ ಜೀವಿಸುತ್ತಿದ್ದು, ಅಲ್ಲೇ ನೂರು ದಿನಗಳ ಕಾಲ ಜೀವಿಸುವ ಯೋಜನೆ ಹೊಂದಿದ್ದಾರೆ. 

ಒಂದು ವೇಳೆ ಅವರು ಇದರಲ್ಲಿ ಯಶಸ್ವಿಯಾದರೆ, ಸಾಗರದ ತಳದಲ್ಲಿ ಹೆಚ್ಚು ಸಮಯ ಕಳೆದ ಈವರೆಗಿನ ದಾಖಲೆಯನ್ನು ಮುರಿಯಲಿದ್ದಾರೆ ಎಂದು hindustantimes.com ವರದಿ ಮಾಡಿದೆ. 

ಸಮುದ್ರ ಮಟ್ಟಕ್ಕೆ ಹೋಲಿಸಿದರೆ ಸಮುದ್ರದ ತಳದಲ್ಲಿ ಮುನುಷ್ಯನ ದೇಹದ ಮೇಲಾಗುವ ಹೆಚ್ಚು ವಾಯು ಒತ್ತಡವಾದ ಭಾರಿ ಬೇರಿಯಂ ಲೋಹದ ಒತ್ತಡ ಪರಿಣಾಮದ ಕುರಿತು ಡಿಟುರಿ ಸಂಶೋಧನೆ ನಡೆಸಲಿದ್ದಾರೆ. ಹೆಚ್ಚು ಒತ್ತಡವಿರುವ ವಾತಾವರಣದಲ್ಲಿ ಜೀವಿಸುವುದರಿಂದ ತನ್ನ ಆರೋಗ್ಯದ ಮೇಲೆ ಯಾವ ಬಗೆಯ ಪರಿಣಾಮವಾಗಲಿದೆ ಎಂದು ಪರೀಕ್ಷಿಸಲು ಈ ಸಮಯ ಬಳಕೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ಹೊಂದಿದ್ದಾರೆ. 

ಆಸಕ್ತಿಕರ ಸಂಗತಿಯೆಂದರೆ, ಡಿಟುರಿಯ ಸಾಹಸವು ಜಲಾಂತರ್ಗಾಮಿ ನೌಕೆಯಲ್ಲಿ ವಾಸಿಸುವುದಕ್ಕಿಂತ ತೀರಾ ವಿಭಿನ್ನವಾಗಿರಲಿದೆ. ಸಮುದ್ರ ಮಟ್ಟದ ಒತ್ತಡದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ನಿರ್ವಹಿಸುವಾಗ ಅವನ್ನು ಸಂಪೂರ್ಣವಾಗಿ ಮುಚ್ಚಿ ಮುಳುಗಿಸಲಾಗಿರುತ್ತದೆ. ಇದರರ್ಥ ಜಲಾಂತರ್ಗಾಮಿ ನೌಕೆಯು ನೂರಾರು ಮೀಟರ್ ಆಳದಲ್ಲಿ ಮುಳುಗಿದ್ದಾಗಲೂ ಒತ್ತಡದಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡು ಬರುವುದಿಲ್ಲ. 

ಆದರೆ, ದಿಟುರಿ ವಾಸಿಸಲಿರುವ ಸಮುದ್ರದಡಿಯ ಒಣ ವಾಸ ಸ್ಥಳ ಹಾಗೂ ಸಮುದ್ರದ ನಡುವೆ ಜಲಂತಾರ್ಗಾಮಿ ನೌಕೆಗಳಲ್ಲಿರುವಂತೆ ಯಾವುದೇ ಘನ ಕವಚ ಅಥವಾ ಗಾಳಿ ನಿರೋಧಕಗಳು ಇರುವುದಿಲ್ಲ. ಇದು ಭರ್ತಿ ನೀರು ತುಂಬಿರುವ ಒಂದು ಲೋಟವನ್ನು ಕೆಳಕ್ಕೆ ಬಗ್ಗಿಸಿದಾಗ ಪೂರ್ಣಪ್ರಮಾಣದ ನೀರು ತೊಟ್ಟಿಗೆ ಹರಿದು ಹೋದಂತೆ. ದಿಟುರಿ ವಾಸ ಸ್ಥಳದಲ್ಲಿ ಆಗಲೂ ಒಂದು ಪ್ರಮಾಣದ ಗಾಳಿ ಇರಲಿದ್ದು, ಕೋಣೆಯಲ್ಲಿ ಸಮುದ್ರದಿಂದ ಹರಿದು ಬರುವ ನೀರು ತುಂಬಿರಲಿದೆ.

ಇದರರ್ಥ, ದಿಟುರಿ ವಾಸ ಸ್ಥಳದ ಸುತ್ತಲಿನ ಗಾಳಿಯನ್ನು ಸಮುದ್ರದ ತೂಕವು ಹೀರಿಕೊಳ್ಳಲಿದ್ದು, ಅವರ ಸುತ್ತ ಗಾಳಿ ಒತ್ತಡವನ್ನು ಹೆಚ್ಚಿಸಲಿದೆ. 30 ಅಡಿ ಆಳದ ಸಮುದ್ರದಲ್ಲಿನ ಅವರ ವಾಸ ಸ್ಥಳದಲ್ಲಿನ ಗಾಳಿ ಒತ್ತಡವು ಅವರು ನೆಲದ ಮೇಲಿದ್ದಾಗಿನ ಗಾಳಿ ಒತ್ತಡಕ್ಕಿಂತ ದುಪ್ಪಟ್ಟಾಗಿರುತ್ತದೆ. ಈ ಸಂದರ್ಭದಲ್ಲಿ ಭಾರಿ ಬೇರಿಯಂ ಲೋಹದ ಒತ್ತಡವು ಮನುಷ್ಯನ ದೇಹದ ಮೇಲೆ ಯಾವ ಬಗೆಯ ಪರಿಣಾಮವನ್ನುಂಟು ಮಾಡುತ್ತದೆ ಎಂಬ ಕುರಿತು ತುಸು ಸಂಶೋಧನೆ ನಡೆಯಲಿದೆ. 

ಆದರೆ, ಡಿಟುರಿ ನೀರಿನೊಳಗಿನ ವಾಸ ಸ್ಥಳದಲ್ಲಿ ಜೀವಿಸುವಾಗ ಅವರು ದೈಹಿಕ ಬದಲಾವಣೆಗಳನ್ನೂ ಅನುಭವಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಡಿಟುರಿಯವರ ವಾಸ ಸ್ಥಳವು ಜಲಾಂತರ್ಗಾಮಿ ನೌಕೆಗಿಂತ ವಿಭಿನ್ನವಾಗಿದ್ದರೂ, ಅವರು ಅಲ್ಲಿ ಕಳೆಯಲಿರುವ ಸಮಯವು ಹಲವು ಜಲಾಂತಾರ್ಗಾಮಿ ನೌಕೆಯ ಸಿಬ್ಬಂದಿಗಳು ಕಳೆಯುವ ಸಮಯಕ್ಕಿಂತ ಸಂಪೂರ್ಣ ಭಿನ್ನವಾಗಿರುವುದಿಲ್ಲ. ಸಮುದ್ರದಡಿಯಲ್ಲಿನ ಜಲಾಂತಾರ್ಗಾಮಿ ನೌಕೆಗಳಲ್ಲಿ ಕೆಲವು ತಿಂಗಳು ಕಳೆದರೂ ದೀರ್ಘಕಾಲೀನ ಪರಿಣಾಮಗಳನ್ನು ತಡೆಯುವ ಕ್ರಮಗಳ ಹೊರತಾಗಿಯೂ ಅವರೆಲ್ಲ ದೀರ್ಘಕಾಲೀನ ಪರಿಣಾಮಗಳಿಗೆ ತುತ್ತಾಗುವುದು ಸಂಶೋಧನೆಗಳಿಂದ ದೃಢಪಟ್ಟಿದೆ. 

ಕೊನೆಗೂ ದಿಟುರಿಯ ಮೇಲೆ ಭಾರಿ ಬೇರಿಯಂ ಲೋಹದ ಒತ್ತಡದಿಂದ ಆಗುವ ದೀರ್ಘಕಾಲೀನ ಪರಿಣಾಮಗಳು ಏನಾಗಿರುತ್ತದೆ ಎಂಬುದೇ ಬಹುದೊಡ್ಡ ಪ್ರಶ್ನೆಯಾಗುವುದು ನಿಶ್ಚಿತ. ಅಲ್ಪಕಾಲೀನ ಭಾರಿ ಬೇರಿಯಂ ಲೋಹಗಳ ಒತ್ತಡಕ್ಕೆ ತೆರೆದುಕೊಳ್ಳುವುದರಿಂದ ಗಾಯ ಮಾಗುವಿಕೆಯ ಮೇಲೆ ಸಕಾರಾತ್ಮಕ ಪರಿಣಾಮವುಂಟಾಗುತ್ತದೆ ಎಂಬ ಸಂಗತಿಯನ್ನು ಈವರೆಗಿನ ಅಧ್ಯಯನಗಳು ದೃಢಪಡಿಸಿವೆ. ಇದು ಮಾನಸಿಕ ಸವಾಲು ಹಾಗೂ ಮಾನಸಿಕ ಸಾಧ್ಯತೆಯ ಸವಾಲು ಎರಡೂ ಆಗುವ ಸಾಧ್ಯತೆ ಇದೆ. ಡಿಟುರಿ ಏಕಾಂಗಿಯಾಗಿದ್ದು, ಅವರ ಮೇಲಿನ ಪ್ರಯೋಗದ ದತ್ತಾಂಶದಿಂದ ಜೈವಿಕ ವೈದ್ಯಕೀಯ ಕ್ಷೇತ್ರಕ್ಕೆ ಈಗಲೂ ಉಪಯೋಗವಾಗಲಿದೆ ಎಂದು ಹೇಳಲಾಗಿದೆ.

share
Next Story
X