Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 2ನೇ ತರಗತಿವರೆಗೆ ಪರೀಕ್ಷೆ ಬೇಡ:...

2ನೇ ತರಗತಿವರೆಗೆ ಪರೀಕ್ಷೆ ಬೇಡ: ರಾಷ್ಷ್ರೀಯ ಪಠ್ಯಕ್ರಮ ಕಾರ್ಯಚೌಕಟ್ಟಿನ ಕರಡು ಪೂರ್ವ ಆವೃತ್ತಿ ಪ್ರಕಟ

7 April 2023 11:34 PM IST
share
2ನೇ ತರಗತಿವರೆಗೆ ಪರೀಕ್ಷೆ ಬೇಡ: ರಾಷ್ಷ್ರೀಯ  ಪಠ್ಯಕ್ರಮ ಕಾರ್ಯಚೌಕಟ್ಟಿನ  ಕರಡು ಪೂರ್ವ ಆವೃತ್ತಿ ಪ್ರಕಟ

► 3ನೇ ತರಗತಿಯಿಂದ ಲಿಖಿತ ಪರೀಕ್ಷೆಗಳ ಆರಂಭ

► 10ನೇ ತರಗತಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಗಳು

► 10, 12ನೇ ತರಗತಿಗಳಿಗೆ ಎರಡು ಮಂಡಳಿ ಪರೀಕ್ಷೆಗಳು

ಹೊಸದಿಲ್ಲಿ, ಎ.7: ಕೇಂದ್ರ ಶಿಕ್ಷಣ ಸಚಿವಾಲಯವು ಗುರುವಾರ ಶಾಲಾ ಶಿಕ್ಷಣಕ್ಕಾಗಿನ ಪಠ್ಯಕ್ರಮ ಕಾರ್ಯಚೌಕಟ್ಟಿನ ಕರಡು ಪೂರ್ವ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಆ ಬಗ್ಗೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ತಜ್ಞರು, ವಿದ್ವಾಂಸರು ಹಾಗೂ ವೃತ್ತಿಪರರಿಂದ ಅಭಿಪ್ರಾಯ, ಸಲಹೆಗಳನ್ನು ಕೋರಿದೆ.

10 ಹಾಗೂ 12ನೇ ತರಗತಿಗಳಿಗೆ ಎರಡು ಮಂಡಳಿ ಪರೀಕ್ಷೆಗಳು, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯವಿಷಯಗಳನ್ನು ಎಂಟು ಪಠ್ಯಕ್ಷೇತ್ರಗಳಾಗಿ ವಿಭಜನೆ ಹಾಗೂ ಉನ್ನತ ಪ್ರೌಢ ಶಿಕ್ಷಣದಲ್ಲಿ ವಿಜ್ಞಾನ, ಕಲೆ ಅಥವಾ ಮಾನವಿಕ ಹಾಗೂ ವಾಣಿಜ್ಯ ಶಿಕ್ಷಣ ವಿಷಯಗಳನ್ನು ಕಲಿಯಲು ಅವಕಾಶ ಇವು ಗುರುವಾರ ಬಿಡುಗಡೆಗೊಳಿಸಲಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್) ಕರಡಿನಲ್ಲಿ ಸೂಚಿಸಲಾದ ಪ್ರಮುಖ ಸಂರಚನಾತ್ಮಕ ಬದಲಾವಣೆಗಳಾಗಿವೆ.

3ರಿಂದ 8 ವರ್ಷದರೆಗಿನ ಮಕ್ಕಳಿಗೆ ಕಲಿಕೆಯು ಆಟಗಳನ್ನು ಆಧರಿಸಲಿದ್ದು, ಪಠ್ಯಪುಸ್ತಕಗಳಿಂದ ಮುಕ್ತವಾಗಿರಲಿದೆ.

 2ನೇ ತರಗತಿಯವರೆಗೆ ಯಾವುದೇ ಪರೀಕ್ಷೆಗಳನ್ನು ನಡೆಸದಿರುವುದು ಹಾಗೂ ಮೂರನೇ ತರಗತಿಯಲ್ಲಿ ಲಿಖಿತ ಪರೀಕ್ಷೆಯನ್ನು ಜಾರಿಗೊಳಿಸವುದು ಹಾಗೂ ನಂತರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ವೌಲ್ಯಮಾಪನವನ್ನು ಹೆಚ್ಚು ಗಂಭೀರತೆಯೊಂದಿಗೆ ನಡೆಸುವುದನ್ನು ಕರಡಿನಲ್ಲಿ ಪ್ರಸ್ತಾವಿಸಲಾಗಿದೆ.

ನೂತನ ಶಿಕ್ಷಣ ನೀತಿಯಲ್ಲಿ ಸೂಚಿಸಿರುವಂತೆ 10 ಹಾಗೂ 12ನೇ ತರಗತಿಗಳಿಗೆ ಎರಡು ಬೋರ್ಡ್ ಪರೀಕ್ಷೆಗಳನ್ನು ಎನ್‌ಸಿಎಫ್ ವ್ಯವಸ್ಥೆಯಡಿ ಮರುಜಾರಿಗೊಳಿಸಲಾಗುವುದು. ಆದರೆ ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆಯನ್ನು ತೋರಲು ಸಾಕಷ್ಟು ಸಮಯಾವಕಾಶಗಳು ವಿದ್ಯಾರ್ಥಿಗಳಿಗೆ ದೊರೆಯವುದನ್ನು ಖಾತರಿಪಡಿಸಲಾಗುವುದು ಎಂದು ಎನ್‌ಎಫ್‌ಪಿ ಕರಡು ತಿಳಿಸಿದೆ.

10ನೇ ತರಗತಿ ವಿದ್ಯಾರ್ಥಿಗಳಿಗೆ ಮಾನವಿಕ ಶಾಸ್ತ್ರ, ಗಣಿತ ಹಾಗೂ ಎಣಿಕೆ (ಕಂಪ್ಯೂಟಿಂಗ್),ವೃತ್ತಿಪರ ಶಿಕ್ಷಣ, ದೈಹಿಕ ಶಿಕ್ಷಣ, ಕಲಾ ಶಿಕ್ಷಣ, ಸಮಾಜವಿಜ್ಞಾನ ಹಾಗೂ ಅಂತರ್‌ಶಾಸ್ತ್ರೀಯ (ಇಂಟರ್‌ಡಿಸಿಪ್ಲಿನರಿ) ವಿಷಯಗಳನ್ನು ಅವಧಿಯ ಕೊನೆಯಲ್ಲಿ ಸೂಚಿಸಲಾಗುವುದು.

11 ಹಾಗೂ 12ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ಕನಿಷ್ಠ ಮೂರು ಪಠ್ಯ ಕ್ಷೇತ್ರಗಳಲ್ಲಿ ಪಠ್ಯವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ಪ್ರತಿಯೊಂದು ಪಠ್ಯವಿಭಾಗದಲ್ಲಿಯೂ ನಾಲ್ಕು ಕೋರ್ಸ್‌ಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ಪಠ್ಯಗಳಲ್ಲಿ ಭಾರತೀಯ ವೌಲ್ಯಗಳನ್ನು ಒಳಪಡಿಸುವುದು ಈ ಕರಡಿನ ಮುಖ್ಯಭಾಗವಾಗಿದೆ. ‘‘ಭಾರತದಲ್ಲಿ ಆಳವಾಗಿ ಬೇರೂರಿರುವ ವೌಲ್ಯಗಳು ಹಾಗೂ ಭಾಷೆಗಳ ಕಲಿಕೆ ಹಾಗೂ ತತ್ವಗಳನ್ನು ಪಠ್ಯಗಳಲ್ಲಿ ಅಳವಡಿಸಲು ಹೆಚ್ಚಿನ ಒತ್ತು ನೀಡಲಾಗುವದು.

ನೈತಿಕ ಅಭಿವೃದ್ಧಿ: ಪಂಚಕೋಶ ವಿಕಾಸ ಅಥವಾ ಐದು ಆಯಾಮದ ಅಭಿವೃದ್ಧಿಯ ಮೂಲಕ ಮಗುವಿನ ನೈತಿಕ ಬೆಳವಣಿಗೆಯನ್ನು ಸಾಧಿಸುವ ಬಗ್ಗೆ ಕರಡು ಗಮನಹರಿಸಿದೆ.

ಕಲಾ ಶಿಕ್ಷಣವು ಸಂಗೀತ, ನೃತ್ಯ, ರಂಗಕಲೆ, ಶಿಲ್ಪಶಾಸ್ತ್ರ, ಚಿತ್ರಕಲೆ, ಸೆಟ್ ವಿನ್ಯಾಸ, ಚಿತ್ರಕತೆ ಬರಹಗಳನ್ನು ಒಳಗೊಂಡಿರುತ್ತವೆ. ಅಂತರ್‌ಶಿಸ್ತೀಯ ಕ್ಷೇತ್ರಗಳು ಪರಂಪರೆಗಳು ಹಾಗೂ ಭಾರತೀಯ ಜ್ಞಾನವ್ಯವಸ್ಥೆಯ ಅಧ್ಯಯನವನ್ನು ಒಳಗೊಂಡಿರುತ್ತದೆ.

2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಮುಂದುವರಿದ ಭಾಗವಾಗಿ ನಾಲ್ಕು ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು (ಎನ್‌ಸಿಎಫ್) ಗಳ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಶಾಲಾ ಶಿಕ್ಷಣಕ್ಕಾಗಿನ ಎನ್‌ಸಿಎಫ್, ಆರಂಭಿಕ ಬಾಲ್ಯಾವಸ್ಥೆಗಾಗಿನ ಪಾಲನೆ ಹಾಗೂ ಶಿಕ್ಷಣ, ಶಾಲಾ ಶಿಕ್ಷಣಕ್ಕಾಗಿನ ಎನ್‌ಸಿಎಫ್ ಹಾಗೂ ವಯಸ್ಕ ಶಿಕ್ಷಣಕ್ಕಾಗಿನ ಎನ್‌ಸಿಎಫ್‌ಗಳ ಅಭಿವೃದ್ಧಿಗೆ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ಎನ್‌ಸಿಎಫ್‌ಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಕೆ.ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಚಾಲನಾ ಸಮಿತಿಯನ್ನು ಸ್ಥಾಪಿಸಲಾಗಿತ್ತು. ಎನ್‌ಸಿಎಫ್‌ನ ಕರಡು ರಚನೆಗೆ ಮುನ್ನ ವಿವಿಧ ಸಚಿವಾಲಯಗಳು, ಧಾರ್ಮಿಕ ಸಂಘಟನೆಗಳು, ನಾಗರಿಕ ಸಂಘಟನೆಗಳು, ಎನ್‌ಜಿಒಗಳು ಹಾಗೂ ವಿಶ್ವವಿದ್ಯಾನಿಲಯಗಳ ಜೊತೆ 500ಕ್ಕೂ ಜಿಲ್ಲಾ ಮಟ್ಟದ ಸಮಾ ಲೋಚನೆಗಳನ್ನು ಹಾಗೂ 50ಕ್ಕೂ ಅಧಿಕ ಸಮಾಲೋಚನೆಗಳನ್ನು ನಡೆಸ ಲಾಗಿತ್ತು. 8 ಸಾವಿರಕ್ಕೂ ಅಧಿಕ ವಿಭಿನ್ನ ಭಾಗಿದಾರರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ ಮೊಬೈಲ್ ಆ್ಯಪ್ ಮೂಲಕ 1.50 ಲಕ್ಷಕ್ಕೂ ಅಧಿಕ ಮಂದಿಯ ಸಮೀಕ್ಷೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿತ್ತು.

share
Next Story
X