ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು

ಶಂಕರನಾರಾಯಣ, ಎ.11: ಪೈಪ್ ಸರಿ ಮಾಡಲು ಹೊಳೆಗೆ ಇಳಿದ ವ್ಯಕ್ತಿ ಯೊಬ್ಬರು ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಎ.10ರಂದು ರಾತ್ರಿ ಹೆಂಗವಳ್ಳಿ ಗ್ರಾಮದ ಬಾತಾಳಿ ತಡ್ಕಲ್ಜೆಡ್ಡು ಎಂಬಲ್ಲಿ ನಡೆದಿದೆ.
ಮೃತರನ್ನು ಬಾತಾಳಿ ತಡ್ಕಲ್ಜೆಡ್ಡು ನಿವಾಸಿ ಶೀನ ಪೂಜಾರಿ(63) ಎಂದು ಗುರುತಿಸಲಾಗಿದೆ.
ಇವರು ಅಡಿಕೆ ತೋಟಕ್ಕೆ ನೀರು ಬಿಡಲು ಹೋಗಿದ್ದು, ನೀರು ಬಾರದೇ ಕಾರಣ ಇವರು ಹೊಳೆಯಲ್ಲಿದ್ದ ಪೈಪ್ ಸರಿ ಮಾಡಲು ಇಳಿದರು. ಅಲ್ಲಿ ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದ ಅವರು ಮುಳುಗಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story