ಕಥೊಲಿಕ್ ಸಭಾ ಉಡುಪಿ ಅಧ್ಯಕ್ಷರಾಗಿ ಸಂತೋಷ್ ಕರ್ನೆಲಿಯೋ ಆಯ್ಕೆ

ಉಡುಪಿ, ಎ.16: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2023-24ರ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಕರ್ನೆಲಿಯೋ ಸಂತೆಕಟ್ಟೆ ಕಲ್ಯಾಣಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ರವಿವಾರ ಜರಗಿದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಚುನಾವಣಾಧಿ ಕಾರಿಯಾಗಿ ಪದಾಧಿಕಾರಿಗಳ ಆಯ್ಕೆಯನ್ನು ನೆರವೇರಿಸಿದರು.
ಆಧ್ಯಾತ್ಮಿಕ ನಿರ್ದೇಶಕರಾಗಿ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷರಾಗಿ ಮೇರಿ ಡಿಸೋಜ ಉದ್ಯವಾರ, ಕಾರ್ಯದರ್ಶಿ ಯಾಗಿ ಒಲಿವಿಯಾ ಡಿಮೆಲ್ಲೊ ಕಾರ್ಕಳ, ಕೋಶಾಧಿಕಾರಿಯಾಗಿ ಜೆರಾಲ್ಡ್ ರೊಡ್ರಿಗಸ್ ಶಿರ್ವ ಆಯ್ಕೆಯಾದರು.
ನಿಯೋಜಿತ ಅಧ್ಯಕ್ಷರಾಗಿ ರೊನಾಲ್ಡ್ ಡಿಆಲ್ಮೇಡಾ ಉದ್ಯಾವರ, ಉಪಾಧ್ಯಕ್ಷರಾಗಿ ಸೊಲೊಮನ್ ಆಲ್ವಾರಿಸ್ ಕಾರ್ಕಳ, ಸಹಕಾರ್ಯದರ್ಶಿ ಯಾಗಿ ಸೆವ್ರಿನ್ ಡಿಸೋಜ ಶಿರ್ವ, ಸಹ ಕೋಶಾಧಿಕಾರಿಯಾಗಿ ಲೆಸ್ಲಿ ಕರ್ನೆಲಿಯೋ ಉಡುಪ, ಆಂತರಿಕ ಲೆಕ್ಕ ಪರಿಶೋಧಕರಾಗಿ ಗ್ರೇವಿನ್ ಪಾಸನ್ನ ಕುಂದಾಪುರ ಅವರನ್ನು ಆರಿಸಲಾಯಿತು. ಚುನಾವಣೆಯ ಬಳಿಕ ಪದಾಧಿಕಾರಿ ಗಳ ಪದಪ್ರದಾನ ಕಾರ್ಯಕ್ರಮ ಜರುಗಿತು.





