ದ.ಕ.ಜಿಲ್ಲೆ: 15 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಮಂಗಳೂರು, ಎ.17: ದ.ಕ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಒಬ್ಬರು ಮಹಿಳೆಯ ಸಹಿತ 15 ಅಭ್ಯರ್ಥಿಗಳಿಂದ 23 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 29 ನಾಮಪತ್ರಗಳು ಸಲ್ಲಿಕೆಯಾಗಿವೆ.
ಬೆಳ್ತಂಗಡಿ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದ ಆದಿತ್ಯ ನಾರಾಯಣ ಕೊಲ್ಲಾಜೆ, ಬಿಜೆಪಿಯ ಹರೀಶ್ ಪೂಂಜಾ ಎರಡು ನಾಮಪತ್ರಗಳು, ಕಾಂಗ್ರೆಸ್ನ ರಕ್ಷಿತ್ ಶಿವರಾಂ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಮೂಡುಬಿದರೆ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ವಿಜಯನಾಥ ವಿಠ್ಠಲ್ ಶೆಟ್ಟಿ, ಎಸ್ಡಿಪಿಐ ಪಕ್ಷದ ಅಲ್ಫಾನ್ಸೋ ಫ್ರಾಂಕೋ, ಕಾಂಗ್ರೆಸ್ನ ಮಿಥುನ್ ಎಂ. ರೈ ಮೂರು ನಾಮಪತ್ರಗಳು, ಕರ್ನಾಟಕ ರಾಷ್ಟ್ರ ಸಮಿತಿಯ ದಯಾನಂದ್ ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಜನರಲ್ ಪಾರ್ಟಿಯಿಂದ ಪ್ರಶಾಂತ, ಮಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ವೇದವ್ಯಾಸ್ ಕಾಮತ್ 4 ನಾಮಪತ್ರಗಳು, ಮಂಗಳೂರು ಕ್ಷೇತ್ರದಿಂದ ಬಿಜೆಪಿಯ ಸತೀಶ್ ಕುಂಪಲ, ಎಸ್ಡಿಪಿಐ ಪಕ್ಷದ ಮುಹಮ್ಮದ್ ರಿಯಾಝ್ ನಾಮಪತ್ರ ಸಲ್ಲಿಸಿದ್ದಾರೆ.
ಬಂಟ್ವಾಳ ಕ್ಷೇತ್ರದಿಂದ ಎಸ್ಡಿಪಿಐ ಪಕ್ಷದ ಎಂ. ಇಲ್ಯಾಸ್ ಮತ್ತು ಅಬ್ದುಲ್ ಮಜೀದ್ ಖಾನ್, ಪುತ್ತೂರು ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಬಿ.ಕೆ. ವಿಶು ಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಸುಳ್ಯ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ರಮೇಶ್ ಬಿ. ನಾಮಪತ್ರ ಸಲ್ಲಿಸಿದ್ದಾರೆ.