Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ನುಡಿ‘ಕಟ್ಟು’

ನುಡಿ‘ಕಟ್ಟು’

ಜಗದಗಲ

18 April 2023 8:55 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ನುಡಿ‘ಕಟ್ಟು’
ಜಗದಗಲ

ದಕ್ಷಿಣ ಈಜಿಪ್ಟ್‌ನ ನುಬಿಯಾದಲ್ಲಿ ಈಗ ನುಬಿಯನ್ ಭಾಷೆಯೇ ಇಲ್ಲವಾಗಿದೆ. ಅದನ್ನು ಉಳಿಸಬೇಕೆಂಬ ಹಂಬಲದಿಂದ ಹೊಸ ತಲೆಮಾರಿನ ಕೆಲವರು ಶ್ರಮಿಸುತ್ತಿದ್ದಾರೆ. ಜಿಹಾದ್ ಅಶ್ರಫ್ ತನ್ನ ಕುಟುಂಬದಲ್ಲಿ ನುಬಿಯನ್ ಭಾಷೆಯನ್ನು ಅರ್ಥಮಾಡಿಕೊಳ್ಳದೆ ಬೆಳೆದವರು. ತಮ್ಮ ಕುಟುಂಬದವರಲ್ಲಿ ಯಾರೂ ನನ್ನೊಂದಿಗೆ ಮನೆಯಲ್ಲಿ ನುಬಿಯನ್ ಮಾತನಾಡಲೇ ಇಲ್ಲ ಎನ್ನುತ್ತಾರೆ ಅವರು.

ಕೇವಲ ಎರಡು ತಲೆಮಾರುಗಳಲ್ಲಿ ಈ ಪ್ರದೇಶದ ಎಲ್ಲೆಡೆ ನುಬಿಯನ್ ಭಾಷೆ ಬಹುತೇಕ ಕಣ್ಮರೆಯಾಯಿತು. ಹಳ್ಳಿಯಲ್ಲಿ ನೈಲ್ ನದಿಯ ದಡದಲ್ಲಿರುವ ಖರ್ಜೂರ ಬೆಳೆವ ರೈತಸಮುದಾಯದ ಸುಮಾರು ೬೧ ಅಥವಾ ೬೨ ವರ್ಷ ವಯಸ್ಸಿನವರೇ ಈ ಭಾಷೆ ಮಾತನಾಡುವ ಅತಿ ಕಿರಿಯರು. ಭಾಷೆ ಅಳಿವಿನಂಚಿನಲ್ಲಿದೆ ಎನ್ನುತ್ತಾರೆ ಜಿಹಾದ್.

ಈಜಿಪ್ಟ್‌ನಾದ್ಯಂತ ಇದೇ ಸ್ಥಿತಿಯಿದ್ದು, ಇದನ್ನು ಬದಲಿಸಬೇಕೆಂಬುದು ಆಕೆಯ ಆಸೆ. ಕಳೆದ ವರ್ಷ, ಅವರು ಭಾಷೆ ಕಲಿಯಲು ಯುವಜನರನ್ನು ಉತ್ತೇಜಿಸುವುದಕ್ಕಾಗಿ ಆನ್‌ಲೈನ್ ಸೇವೆ ‘ನೋಬಿಗ್ ಕೊರೊ’ (ನುಬಿಯನ್ ಕಲಿಯಿರಿ) ಪ್ರಾರಂಭಿಸಲು ನೆರವಾದರು. ಇತ್ತೀಚಿನ ವರ್ಷಗಳಲ್ಲಿ ದೇಶ ಮತ್ತು ವಿದೇಶದಲ್ಲಿರುವ ಯುವ ನುಬಿಯನ್ನರನ್ನು ತಲುಪಲು ಮತ್ತು ಭಾಷೆ, ಸಂಸ್ಕೃತಿ ಅಳಿಯದಂತೆ ನೋಡಿಕೊಳ್ಳಲು ಇದು ಹಲವಾರು ನೆಲೆಯಲ್ಲಿ ನೆರವಾಗುತ್ತಿದೆ.

ಕಾನೂನು ಅನುವಾದ ಅಧ್ಯಯನಿಸಲು ಕೈರೋಗೆ ಹೋಗಿದ್ದ ಜಿಹಾದ್, ಅಲ್ಲಿ ನುಬಿಯನ್ ತರಗತಿಗಳನ್ನು ತೆಗೆದುಕೊಳ್ಳತೊಡಗಿದರು. ಚಿಕ್ಕ ವಯಸ್ಸಿನಿಂದಲೂ ಭಾಷೆಯತ್ತ ಆಕರ್ಷಿತರಾಗಿರುವ ಅವರಿಗೆ ಈ ಕೋರ್ಸ್ ವೇಳೆ, ನುಬಿಯನ್ ಪೋಷಕರಿಗೆ ಜನಿಸಿದ್ದರೂ ಆ ಭಾಷೆಯನ್ನು ಕಲಿಯದ ಮತ್ತಿಬ್ಬರು ಸ್ನೇಹಿತರಾದರು. ಮೂವರೂ ತರಗತಿಯಲ್ಲಿ ಕಲಿತದ್ದನ್ನು ಅಧ್ಯಯನ ಮಾಡಲು ವಾರದ ಸ್ಟಡಿ ಗ್ರೂಪ್ ಶುರುಮಾಡಿದರು. ನುಬಿಯನ್ ಹಾಡುಗಳನ್ನು ಹಾಡಲು ಅಭ್ಯಾಸ ಮಾಡುವುದು, ತಿಳಿದಿಲ್ಲದ ಪದಗಳನ್ನು ಚರ್ಚಿಸುವುದು, ಅದನ್ನೆಲ್ಲ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದು ನಡೆಯಿತು. ಕಲಿತ ಮತ್ತು ಇಷ್ಟಪಡುವ ವಿಷಯಗಳನ್ನು ಇತರ ಯುವ ನುಬಿಯನ್ನರೊಂದಿಗೆ ಹಂಚಿಕೊಳ್ಳಲು ಅದೊಂದು ಮಾರ್ಗ ಎನ್ನುತ್ತಾರೆ ಜಿಹಾದ್. ನುಬಿಯನ್ ಪರಂಪರೆಯಿಂದ ದೂರವಾಗಿರುವ ಅನೇಕರು ಇದ್ದಾರೆ ಎಂಬುದು ಬಹುಬೇಗ ಅವರ ಅರಿವಿಗೆ ಬಂತು.

ಈಜಿಪ್ಟ್‌ನಲ್ಲಿ ಎಷ್ಟು ನುಬಿಯನ್ನರು ವಾಸಿಸುತ್ತಿದ್ದಾರೆ ಎಂಬುದರ ಕುರಿತು ಯಾವುದೇ ಅಂಕಿಅಂಶಗಳಿಲ್ಲ. ಆದರೆ ಸುಮಾರು ೩ರಿಂದ ೫೦ ಲಕ್ಷದವರೆಗೆ ಇರಬಹುದು ಎಂಬುದು ಒಂದು ಅಂದಾಜು. ದೇಶಾದ್ಯಂತ ನುಬಿಯನ್ನರು ಹರಡಿದ್ದಾರೆ. ೧೯೬೦ರ ದಶಕದಲ್ಲಿ ಅಣೆಕಟ್ಟಿನ ನಿರ್ಮಾಣದಿಂದ ಹಳೇ ನುಬಿಯಾದ ಹೆಚ್ಚಿನ ಭಾಗ ನಾಶವಾಯಿತು. ಅಣೆಕಟ್ಟಿನಿಂದ ಮುಳುಗಡೆಯಾದ ಪ್ರದೇಶದಿಂದ ಅಂದು ಸ್ಥಳಾಂತರಗೊಂಡವರು ಸುಮಾರು ಒಂದೂವರೆ ಲಕ್ಷ ಮಂದಿ. ಎಲ್ಲರೂ ಹೆಚ್ಚಾಗಿ ಕೈರೋ, ಅಲೆಕ್ಸಾಂಡ್ರಿಯಾ ಅಥವಾ ಮರುಭೂಮಿಯಲ್ಲಿನ ಉದ್ದೇಶಿತ ವಸತಿ ಸೌಕರ್ಯಗಳಿಗೆ ಹೋಗಬೇಕಾಯಿತು. ಹಾಗೆ ಜನ ಊರುಬಿಡಬೇಕಾದ ಅಂದಿನ ಸ್ಥಿತಿಯನ್ನು ಕಣ್ಣಾರೆ ಕಂಡಿರುವ ೭೩ ವರ್ಷದ ಶಿಕ್ಷಕ ಸೋಭಿ, ನೀರಿನಲ್ಲಿ ಸಕ್ಕರೆ ಕರಗಿದ ಹಾಗೆ ನುಬಿಯನ್ನರು ಕರಗಿಹೋದರು ಎಂದು ಹೇಳುತ್ತಾರೆ.

೧೯೬೦ ಮತ್ತು ೧೯೭೦ರ ದಶಕದಲ್ಲಿ ಹೆಚ್ಚಿನ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ, ನುಬಿಯನ್ ಭಾಷೆ ಮರೆಯಾಗುತ್ತಿರುವುದು ಸೋಭಿ ಗಮನಕ್ಕೆ ಬಂತು. ಯಾವುದೇ ಈಜಿಪ್ಟಿನ ಶಾಲೆ ಅಥವಾ ವಿಶ್ವವಿದ್ಯಾನಿಲಯ ಇಂದು ನುಬಿಯನ್ ಭಾಷೆಯನ್ನು ಕಲಿಸುತ್ತಿಲ್ಲ. ನಾವು ಬಡ ದೇಶದಲ್ಲಿದ್ದೇವೆ ಎನ್ನುವ ಅವರು, ಕೆಲಸ ಸಿಗುತ್ತದೆ ಎಂದರೆ ಮಾತ್ರವೇ ಜನರು ನುಬಿಯನ್ ಕಲಿಯಬಲ್ಲರು ಎನ್ನುತ್ತಾರೆ. ನುಬಿಯನ್ ಹಾಡುಗಳನ್ನು ಅನುವಾದಿಸುವ, ಜಾನಪದ ಕಥೆಗಳು ಮತ್ತು ನುಡಿಗಟ್ಟುಗಳನ್ನು ಸಂಯೋಜಿಸುವ ಅವರು, ಎಂದಾದರೊಂದು ದಿನ ಅದು ಯಾರ ಉಪಯೋಗಕ್ಕಾ ದರೂ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹಾಡುಗಳ ಮೂಲಕ ನುಬಿಯನ್ ಕಲಿಸಲು ಬಯಸುವವರಲ್ಲಿ ಸೋಭಿ ಕೂಡ ಒಬ್ಬರು. ಜನರಿಗೆ ಹಾಡುಗಳು ತಿಳಿದಿವೆ, ಆದರೆ ಅರ್ಥ ಗೊತ್ತಿಲ್ಲ ಎನ್ನುತ್ತಾರೆ ಅವರು. ದಿನನಿತ್ಯದ ಸಂಭಾಷಣೆಯಿಂದ ಭಾಷೆ ಹೋಗಿದ್ದರೂ, ಅದು ನುಬಿಯನ್ ಸಂಗೀತದ ಮೂಲಕ ಉಳಿದುಕೊಂಡಿದೆ. ಶಾಸ್ತ್ರೀಯ ಮತ್ತು ಸಮಕಾಲೀನ ನುಬಿಯನ್ ಕಲಾವಿದರು ದಕ್ಷಿಣ ಈಜಿಪ್ಟ್ ನಲ್ಲಿ ಜನಪ್ರಿಯರಾಗಿದ್ದಾರೆ. ಅದರ ಸಾಂಪ್ರದಾಯಿಕ ವಾದ್ಯಗಳು ಮತ್ತು ಲಯಗಳ ಕಾರಣದಿಂದಾಗಿ ಅದಕ್ಕೊಂದು ವಿಭಿನ್ನತೆಯಿದೆ ಎನ್ನಲಾಗುತ್ತದೆ.

ಮಕ್ಕಳಿಗೆ ಭಾಷೆ ಕಲಿಸುವ ಮತ್ತೊಂದು ಬಗೆಯೆಂದರೆ ನುಬಿ ಅಪ್ಲಿಕೇಶನ್. ಇದನ್ನು ಕಂಪ್ಯೂಟರ್ ಪ್ರೋಗ್ರಾಮರ್ ಮೊಮೆನ್ ತಲೋಶ್ ಸ್ಥಾಪಿಸಿದ್ದಾರೆ. ಬಾಲ್ಯದಲ್ಲಿ ಅಲೆಕ್ಸಾಂಡ್ರಿಯಾಕ್ಕೆ ತೆರಳಿದ ನಂತರ ತಲೋಶ್ ಪೋಷಕರು ಭಾಷೆಯನ್ನು ಮರೆತಿದ್ದರು. ತಲೋಶ್ ನುಬಿಯನ್ ಕಲಿಸಲು ತೊಡಗಿಸಿಕೊಂಡರು. ನುಬಿಯನ್ ಅಸ್ಮಿತೆ ನುಬಿಯನ್ ಸಂಪ್ರದಾಯಗಳ ಬಗ್ಗೆ ಚಿಂತಿಸುವಾಗ ಭಾಷೆಯೂ ಅಗತ್ಯ ಎನ್ನುತ್ತಾರೆ ಅವರು. ೨೦೧೭ರಲ್ಲಿ ಅಪ್ಲಿಕೇಶನ್ ಪ್ರಾರಂಭಿಸಿದ ಅವರು, ನುಬಿಯನ್ ಮಾತನಾಡುವವರನ್ನು ಹುಡುಕಿಕೊಂಡು ಟುನೀಶಿಯಾ, ಸುಡಾನ್ ಮತ್ತು ಕೀನ್ಯಾ ಸೇರಿದಂತೆ ಹಲವಾರು ದೇಶಗಳಿಗೆ ಪ್ರಯಾಣಿಸಿದ್ದಾರೆ.

ಅಳಿಯುತ್ತಿರುವ ಭಾಷೆಯೊಂದನ್ನು ಉಳಿಸುವ ಇಂಥದೊಂದು ಹೋರಾಟದಲ್ಲಿ ಯುವ ಪೀಳಿಗೆ ಹೀಗೆ ಶ್ರದ್ಧೆ ತೋರುತ್ತಿದೆ ಎಂಬುದೇ ಬೆರಗುಗೊಳಿಸುವ ಸಂಗತಿ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X