ಅತೀಕ್ ಅಹ್ಮದ್ನ ವಕೀಲರ ನಿವಾಸದ ಹೊರಗೆ ಕಚ್ಚಾ ಬಾಂಬ್ ಎಸೆದ ದುಷ್ಕರ್ಮಿಗಳು

ಪ್ರಯಾಗ್ರಾಜ್, ಎ. 18: ಹತ ಭೂಗತ ಪಾತಕಿ ಅತಿಕ್ ಅಹ್ಮದ್ ಅವರ ವಕೀಲರಲ್ಲಿ ಓರ್ವರ ಪ್ರಯಾಗ್ರಾಜ್ನಲ್ಲಿರುವ ನಿವಾಸದ ಹೊರಗೆ ದುಷ್ಕರ್ಮಿಗಳು ಕಚ್ಚಾ ಬಾಂಬ್ ಎಸೆದ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಂಗಳವಾರ ನಡೆದಿದೆ.
ಈ ಪ್ರದೇಶದಲ್ಲಿ ಉದ್ವಿಗ್ನತ ಸೃಷ್ಟಿಸುವ ಉದ್ದೇಶದಿಂದ ಬಾಂಬ್ ಎಸೆಯಲಾಗಿದೆ. ಆದರೆ, ಈ ದಾಳಿಯಿಂದ ಯಾರಿಗೂ ಗಾಯಗಳಾಗಿಲ್ಲ. ಕೂಡಲೇ ಕರ್ನಲ್ಗಂಜ್ನ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story





