ಕಾಂಗ್ರೆಸ್ ರಾಷ್ಟ್ರ ಧ್ವಜ, ಸಂವಿಧಾನದ ಪರವಿರುವ ಪಕ್ಷ: ಬಿಕೆ ಹರಿಪ್ರಸಾದ್
ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಕಾರ್ಕಳ: ಕಾಂಗ್ರೆಸ್ ಪಕ್ಷ ರಾಷ್ಟ್ರ ಧ್ವಜ, ಸಂವಿಧಾನದ ಪರವಿರುವ ಪಕ್ಷ ಎಂದು ರಾಜ್ಯ ಸಭಾ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದರು.
ಅವರು ಮಂಜುನಾಥ್ ಪೈ ಸಭಾಭವನದಲ್ಲಿ ಗುರುವಾರ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ 27 ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿರುವುದೇ ಬಿಜೆಪಿ ಸಾಧನೆಯಾಗಿದೆ. ಪ್ರಜಾಪ್ರಭುತ್ವದ, ಸಂವಿಧಾನದ ವಿರುದ್ಧವಾಗಿರುವವರು ದೇಶದ್ರೋಹಿಗಳು, 62 ವರ್ಷಗಳಿಂದ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದವರು ದೇಶಪ್ರೇಮದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದರು.
ಸುಳ್ಳು ಬಿಜೆಪಿಯವರ ಮನೆ ದೇವರು, 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದವರು ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಪಟ್ಟ ಸಿಗಬೇಕಾದರೆ 2,500 ಕೋಟಿ ಹೈಕಮಾಂಡ್ ಗೆ ಕೊಡಬೇಕು, ಸಚಿವರಾಗ ಬೇಕಾದರೆ 100 ಕೋಟಿ ಕೊಡಬೇಕೆಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳುತ್ತಾರೆ ಎಂದರೆ, ಭ್ರಷ್ಟಾಚಾರ ಮಾಡುವವರು ಯಾರು ಎಂದು ಬಿಜೆಪಿಯವರು ಉತ್ತರಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿಯವರೇ ಜಾತಿಧರ್ಮದ ಹೆಸರಿನಲ್ಲಿ ಬಡವರ ಮಕ್ಕಳನ್ನು ಕೊಲೆ ಮಾಡಬೇಡಿ, ತಾಕತ್ತಿದ್ದರೆ ನಿಮ್ಮ ಮಕ್ಕಳನ್ನು ಗಲಭೆಗಳಿಗೆ ಕಳಿಸಿ ಎಂದು ಹರಿಪ್ರಸಾದ್ ಸವಾಲು ಹಾಕಿದರು.
ರಾಜ್ಯದ ವಿಜಯಬ್ಯಾಂಕ್ , ಸಿಂಡಿಕೇಟ್ ಬ್ಯಾಂಕ್ ಕಳೆದುಕೊಂಡಾಗ ನಮ್ಮ ಚುನಾಯಿತ ಪ್ರತಿನಿಧಿಗಳು ಯಾಕೆ ಪ್ರಶ್ನಿಸಿಲ್ಲ .ಕೊಡಗು ಭೂ ಕುಸಿತ, ಪ್ರವಾಹ, ಕೋವಿಡ್ ಸಮಯದಲ್ಲಿ ಮೃತಪಟ್ಟವರನ್ನು ಒಮ್ಮೆಯು ಪ್ರಧಾನಿ ನೆನಪಿಸಲಿಲ್ಲ, ಪರಿಹಾರ ನೀಡಲಿಲ್ಲ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಯಾಕೆ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದರು.
ಮಮತಾ ಗಟ್ಟಿ ಮಾತನಾಡಿ ಕಾಂಗ್ರೇಸ್ ಪಕ್ಷಕ್ಕೆ ತನ್ನದೆ ಆದ ಇತಿಹಾಸ ವಿದೆ. ಎಲ್ಲ ಧರ್ಮವನ್ನು ಗೌರವಿಸುವ ಪಕ್ಷವಾಗಿದೆ ಎಂದು ಹೇಳಿದರು. ಸುದೀರ್ ಕುಮಾರ್ ಮುರೋಳಿ ಮಾತನಾಡಿ ಸುನೀಲ್ ಕುಮಾರ್ ಹಾಗು ನಳಿನ್ ಕುಮಾರ್ ಬಿತ್ತಿದ ಮತೀಯ ಭಾವನೆಗಳನ್ನು ಕೆರಳಿಸಿದ ಪರಿಣಾಮವೇ ಪ್ರವೀಣ್ ಕುಮಾರ್ ಹತ್ಯೆಯಾಗಿದೆ. ಸುನೀಲ್ ಕುಮಾರ್ ಅವರ ಬೆನಾಮಿ ಹಗರಣಗಳ ಬಗ್ಗೆ ಮುತಾಲಿಕ್ ಅವರೆ ಹೊರಗೆಡವುತಿದ್ದಾರೆ ಅದೆಲ್ಲವೂ ಗುರು ಶಿಷ್ಯ ರ ನಡುವಿನ ಕಾಳಗ ಎಂದರು. ಎಂಎಲ್ಸಿ ಮಂಜುನಾಥ್ ಭಂಡಾರಿ ಮಾತನಾಡಿದರು.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶುಭದರಾವ್ ಪ್ರಸ್ತಾವಿತ ಮಾತನಾಡಿ ಸರಕಾರದ ಸಿಮೆಂಟ್ ಹಗರಣ , ಆಹಾರ ಕಿಟ್ ಹಗರಣವನ್ನುವನ್ನು ಹೊರಗೆಡವುಬೇಕು ಎಂದರು. ಭ್ರಷ್ಟಾಚಾರ ಮುಕ್ತ ಹಾಗೂ ಸೌಹಾರ್ದ ಸಮಾಜಕ್ಕಾಗಿ ಉದಯ್ ಕುಮಾರ್ ಶೆಟ್ಟಿ ಯವರನ್ನು ಬೆಂಬಲಿಸಿ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ತರಲು ಶ್ರಮಿಸಿ , ಕಾರ್ಕಳ ಆದರ್ಶ ಕಾರ್ಕಳ ವಾಗಿ ಬದಲಾಯಿಸುವುದೆ ನಮ್ಮ ಗುರಿ ಎಂದರು.
ಸಭೆಯಲ್ಲಿ ಪ್ರಭಾಕರ್ ಬಂಗೇರ, ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಭಾಕರ್ ಬಂಗೇರ , ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರ್ , ಮಮತಾಗಟ್ಟಿ , ಜಿಲ್ಲಾ ಪ್ರಚಾರ ಸಮಿತಿ ಹರಿಶ್ ಕಿಣಿ ,ಚಂದ್ರಶೇಖರ ಬಾಯಿರಿ, ಮೊಯಿದಿನಬ್ಬ, ದಿವಾಕರ್, ಸುಪ್ರಿತ್ ಶೆಟ್ಟಿ,ನವಿನ್ ಅಡ್ಯಂತಾಯ , ಹೆಬ್ರಿ ಪ್ರವೀಣ್ ಬಲ್ಲಾಳ್, ಜಾರ್ಜ್ ಕಾಸ್ಟಲಿನೊ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಜನಿ ಹೆಬ್ಬಾರ್, ಅನಿತಾ ಡಿಸೋಜ, ದೀಪಕ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಆನಂದ ಪೂಜಾರಿ, ಚಂದ್ರಹಾಸ ಸುವರ್ಣ, ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಜಿಲ್ಲಾ ಮಾಧ್ಯಮ ವಕ್ತಾರ ಬಿಪಿನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ರಮ್ಯ ಸುಧೀಂದ್ರ ಹಾಗೂ ಶಿವಕುಮಾರ್ ಬಳಗದಿಂದ ದೇಶಭಕ್ತಿ ಗೀತೆ ಹಾಡಲಾಯಿತು.








