Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸರಕಾರವು ಕೇವಲ ಒಂದು ಸಮುದಾಯಕ್ಕಾಗಿ ಕೆಲಸ...

ಸರಕಾರವು ಕೇವಲ ಒಂದು ಸಮುದಾಯಕ್ಕಾಗಿ ಕೆಲಸ ಮಾಡಿದೆ ಎನ್ನಲು ಯಾವುದೇ ಪುರಾವೆಯಿಲ್ಲ: ಇಎಸಿ ಅಧ್ಯಯನ ವರದಿ

21 April 2023 6:28 PM IST
share
ಸರಕಾರವು ಕೇವಲ ಒಂದು ಸಮುದಾಯಕ್ಕಾಗಿ ಕೆಲಸ ಮಾಡಿದೆ ಎನ್ನಲು ಯಾವುದೇ ಪುರಾವೆಯಿಲ್ಲ: ಇಎಸಿ ಅಧ್ಯಯನ ವರದಿ

ಹೊಸದಿಲ್ಲಿ: ಸರಕಾರವು ಕೇವಲ ಒಂದು ಸಮುದಾಯಕ್ಕಾಗಿ ಕೆಲಸ ಮಾಡಿದೆ ಮತ್ತು ಒಂದು ಧಾರ್ಮಿಕ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳನ್ನು ಆಧರಿಸಿ ಕುಟುಂಬಗಳ ನಡುವೆ ತಾರತಮ್ಯವೆಸಗಿದೆ ಎನ್ನಲು ಯಾವುದೇ ಪುರಾವೆಯಿಲ್ಲ ಎಂದು ಪ್ರಧಾನಿ ಮಂತ್ರಿಗಳಿಗೆ ಆರ್ಥಿಕ ಸಲಹಾ ಮಂಡಳಿ (ಇಎಸಿ)ಯು ಹೇಳಿದೆ.

ಕೆಲವು ಸಂದರ್ಭಗಳಲ್ಲಿ ಅಲ್ಪಸಂಖ್ಯಾತರು ವಿದ್ಯುತ್ ಮತ್ತು ಬ್ಯಾಂಕ್ ಖಾತೆಗಳ ಸೌಲಭ್ಯ ಯೋಜನೆಗಳ ಮೂಲಕ ಬಹುಸಂಖ್ಯಾತರಿಗಿಂತ ಹೆಚ್ಚಿನ ಲಾಭಗಳನ್ನು ಪಡೆದುಕೊಂಡಿದ್ದಾರೆ  ಎಂದು ಇಎಸಿ ಮಂಡಿಸಿರುವ ಪ್ರಬಂಧವು ಹೇಳಿದೆ.

ಶಮಿಕಾ ರಾವು ಅವರು ಬರೆದಿರುವ ‘ಆಚರಣೆಯಲ್ಲಿರುವ ಜಾತ್ಯತೀತ ಪ್ರಜಾಪ್ರಭುತ್ವ:ಭಾರತದಲ್ಲಿ ಸೌಕರ್ಯ ಯೋಜನೆಗಳ ವಸ್ತುನಿಷ್ಠ ಮೌಲ್ಯಮಾಪನ ’ಶೀರ್ಷಿಕೆಯ ವರದಿಯು,2015-16 ಮತ್ತು 2019-21ರಲ್ಲಿ ನಡೆಸಲಾಗಿದ್ದ ನಾಲ್ಕು ಮತ್ತು ಐದನೇ ಸುತ್ತುಗಳ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳ ದತ್ತಾಂಶಗಳನ್ನು ವಿಶ್ಲೇಷಿಸಿದೆ.

ತಳಮಟ್ಟದ ಶೇ.20ರಷ್ಟು ಕುಟುಂಬಗಳ ಮೇಲೆ ಅಧ್ಯಯನವು ಗಮನವನ್ನು ಕೇಂದ್ರೀಕರಿಸಿತ್ತು ಮತ್ತು ಧರ್ಮದ ಆಧಾರದಲ್ಲಿ ಸ್ಪಷ್ಟ ಭೌಗೋಳಿಕತೆಗಳನ್ನು ರಚಿಸಲು 2011ರ ಜನಗಣತಿಯ ಅಂಕಿಸಂಖ್ಯೆಗಳನ್ನು ಬಳಸಿಕೊಂಡಿತ್ತು. 2015-16 ಮತ್ತು 2019-21ರಲ್ಲಿ 1.20 ಕೋ.ಗೂ ಅಧಿಕ ಕುಟುಂಬಗಳ ರಾಷ್ಟ್ರೀಯ ಪ್ರಾತಿನಿಧಿಕ ಮಾದರಿಯನ್ನು  ಆಧರಿಸಿ ಸರಕಾರವು ಕೇವಲ ಒಂದು ಸಮುದಾಯ (ಹಿಂದು ಬಹುಸಂಖ್ಯಾಕ)ಕ್ಕಾಗಿ ಕೆಲಸ ಮಾಡಿದೆ ಮತ್ತು ಒಂದು ಧಾರ್ಮಿಕ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳನ್ನು ಆಧರಿಸಿ ಕುಟುಂಬಗಳ ನಡುವೆ ತಾರತಮ್ಯವೆಸಗಿದೆ ಎನ್ನಲು ಯಾವುದೇ ಪುರಾವೆ ಕಂಡು ಬಂದಿಲ್ಲ ಎಂದು ಪ್ರಬಂಧವು ಹೇಳಿದೆ.

ವಿದ್ಯುತ್, ಬ್ಯಾಂಕ್ ಖಾತೆ, ಮೊಬೈಲ್ಗಳು ಮತ್ತು ಶೌಚಾಲಯ  ಸೌಕರ್ಯಗಳ ಕುರಿತಂತೆ ಎಲ್ಲ ಧರ್ಮಗಳು ಮತ್ತು ಗುಂಪುಗಳು ವ್ಯಾಪಕ ಲಾಭಗಳನ್ನು ಪಡೆದುಕೊಂಡಿವೆ. ವಾಸ್ತವದಲ್ಲಿ ಕೆಲವು ಸಂದರ್ಭಗಳಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರಿಗಿಂತ ಹೆಚ್ಚಿನ ಲಾಭಗಳನ್ನು ಪಡೆದಿದ್ದಾರೆ ಎಂದು ಪ್ರಬಂಧವು ಹೇಳಿದೆಯಾದರೂ,ಮನೆಗಳಿಗೆ ಎಲ್ಪಿಜಿ ಮತ್ತು ನೀರಿನ ಸಂಪರ್ಕದಂತಹ ಸೌಲಭ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ ವಿವಿಧ ಧರ್ಮಗಳು ಮತ್ತು ಸಾಮಾಜಿಕ ಗುಂಪುಗಳಿಗೆ ಸೇರಿದ ಶೇ.20ರಷ್ಟು ಬಡ ಕುಟುಂಬಗಳ ಏಳಿಗೆಗಾಗಿ ಸರಕಾರವು ಇನ್ನಷ್ಟು ಶ್ರಮಿಸುವುದು ಅಗತ್ಯವಾಗಿದೆ ಎಂದಿದೆ.

ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಪ್ರಬಂಧವು,2015-16ರಲ್ಲಿ ಶೇ.20ರಷ್ಟು ಅತ್ಯಂತ ಬಡ ಕುಟುಂಬಗಳ ಶೇ.74ರಷ್ಟು ಕುಟುಂಬಗಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದವು ಮತ್ತು ಇದು 2019-21ರಲ್ಲಿ ಶೇ.93ಕ್ಕೆ ಏರಿಕೆಯಾಗಿದೆ ಎಂದು ಬೆಟ್ಟು ಮಾಡಿದೆ.

ಒಟ್ಟಾರೆಯಾಗಿ ಶೇ.73ರಷ್ಟು ಗಣನೀಯ ಗುರಿ ಸಾಧನೆಯಾಗಿದ್ದರೆ, ಧರ್ಮಗಳ ಪೈಕಿ ಮುಸ್ಲಿಮ್ ಸಮುದಾಯವು ಅಂದಾಜು ಶೇ.77ರಷ್ಟು ಗುರಿ ಸಾಧನೆಯೊಂದಿಗೆ ಅತ್ಯಂತ ಹೆಚ್ಚಿನ ಲಾಭವನ್ನು ಪಡೆದಿದೆ ಎಂದು ಪ್ರಬಂಧವು ತಿಳಿಸಿದೆ.

ವಿವಿಧ ಸಾಮಾಜಿಕ ಗುಂಪುಗಳ ಪೈಕಿ ಅತ್ಯಂತ ಹೆಚ್ಚಿನ ಗುರಿಸಾಧನೆ ಒಬಿಸಿ (ಶೇ.75) ಮತ್ತು ಎಸ್ಸಿ/ಎಸ್ಟಿ (ಶೇ.70ಕ್ಕೂ ಅಧಿಕ) ಸಮುದಾಯಗಳಲ್ಲಿ ಕಂಡುಬಂದಿದೆ. 2015-16ರಲ್ಲಿ ಶೇ.20ರಷ್ಟು ಅತ್ಯಂತ ಬಡ ಕುಟುಂಬಗಳ ಶೇ.53ರಷ್ಟು ಕುಟುಂಬಗಳು ವಿದ್ಯುತ್ ಸೌಲಭ್ಯವನ್ನು ಹೊಂದಿದ್ದವು ಮತ್ತು ಇದು 2019-21ರಲ್ಲಿ ಶೇ.85ಕ್ಕೆ ಏರಿಕೆಯಾಗಿದೆ ಎಂದಿರುವ ಪ್ರಬಂಧವು,ಎಲ್ಲ ಧಾರ್ಮಿಕ ಗುಂಪುಗಳಲ್ಲಿ ಗಣನೀಯ ಲಾಭಗಳನ್ನು ನಾವು ಗಮನಿಸಿದ್ದೇವಾದರೂ ಗುರಿಸಾಧನೆಯಲ್ಲಿ ಅತ್ಯಂತ ಗಣನೀಯ ಸುಧಾರಣೆಯು (ಶೇ.71) ಶೇ.20ರಷ್ಟು ಅತ್ಯಂತ ಬಡ ಮುಸ್ಲಿಮ್ ಕುಟುಂಬಗಳಲ್ಲಿ ಕಂಡು ಬಂದಿದೆ ಎಂದು ಒತ್ತಿ ಹೇಳಿದೆ.

ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಧಾರ್ಮಿಕ ಅಥವಾ ಸಾಮಾಜಿಕ ಗುಂಪುಗಳ ವಿರುದ್ಧ ತಾರತಮ್ಯದ ಯಾವುದೇ ಪುರಾವೆ ಕಂಡು ಬಂದಿಲ್ಲ ಮತ್ತು ಭಾರತದ ಪ್ರಜಾಪ್ರಭುತ್ವವು ಸದೃಢವಾಗಿದೆ ಎಂದು ಪ್ರತಿಪಾದಿಸಿರುವ ಪ್ರಬಂಧವು,ಎಲ್ಲರನ್ನೂ ಒಳಗೊಂಡ ಸಮಾಜವನ್ನು ಖಚಿತಪಡಿಸಲು ಸರಕಾರವು ಶೇ.20ರಷ್ಟು ಅತ್ಯಂತ ಬಡ ಕುಟುಂಬಗಳ ಏಳಿಗೆಯ ಮೇಲೆ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸಬೇಕು ಎಂದು ತಿಳಿಸಿದೆ.

share
Next Story
X