Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಗರಿಷ್ಟ ಮಟ್ಟ ತಲುಪಿದ ಹಸಿರುಮನೆ ಅನಿಲ...

ಗರಿಷ್ಟ ಮಟ್ಟ ತಲುಪಿದ ಹಸಿರುಮನೆ ಅನಿಲ ಸಾಂದ್ರತೆ: ವಿಶ್ವಸಂಸ್ಥೆ ಎಚ್ಚರಿಕೆ

24 April 2023 12:15 AM IST
share
ಗರಿಷ್ಟ ಮಟ್ಟ ತಲುಪಿದ ಹಸಿರುಮನೆ ಅನಿಲ ಸಾಂದ್ರತೆ: ವಿಶ್ವಸಂಸ್ಥೆ ಎಚ್ಚರಿಕೆ

ಜಿನೆವಾ, ಎ.23: ಹಸಿರುಮನೆ ಅನಿಲ ಸಾಂದ್ರತೆಯು 2021ರಲ್ಲಿ ಹೊಸ ಎತ್ತರಕ್ಕೆ ಏರಿದೆ. ಕಾರ್ಬನ್ ಡೈಆಕ್ಸೈಡ್‌ನ ಸಾಂದ್ರತೆಯು ಜಾಗತಿಕವಾಗಿ ಪ್ರತೀ ಮಿಲಿಯನ್‌ಗೆ 415.7 ಪ್ರಮಾಣಕ್ಕೆ ಅಥವಾ ಕೈಗಾರಿಕಾ ಪೂರ್ವ ಮಟ್ಟ(1750)ದ 149%ದಷ್ಟು ಮಟ್ಟಕ್ಕೆ ತಲುಪಿದ್ದರೆ, ಮಿಥೇನ್ ಪ್ರಮಾಣ 262%ಕ್ಕೆ, ನಿಟ್ರಸ್ ಆಕ್ಸೈಡ್‌ನ ಮಟ್ಟ 124%ಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ ವಿಶ್ವಹವಾಮಾನ ಸಂಸ್ಥೆಯ ವರದಿ ಹೇಳಿದೆ.

ಹವಾಮಾನ ಬದಲಾವಣೆ ಸೂಚಕಗಳು ಮತ್ತೊಮ್ಮೆ ಗರಿಷ್ಟ ಮಟ್ಟಕ್ಕೆ ತಲುಪಿದ್ದು  ಕಳೆದ ವರ್ಷ ವಿಶ್ವದ ಹಿಮನದಿಗಳು ನಾಟಕೀಯ ವೇಗದಲ್ಲಿ ಕರಗಿದವು ಮತ್ತು ಅವುಗಳನ್ನು ಉಳಿಸುವುದು ಸಾಧ್ಯವೇ ಇಲ್ಲ ಎಂಬ ಹಂತ ತಲುಪಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ   ಶುಕ್ರವಾರ ವರದಿ ಮಾಡಿದೆ.

ಅಂಟಾರ್ಕ್ಟಿಕ್ ಸಮುದ್ರ ಮಂಜುಗಡ್ಡೆಯು ದಾಖಲೆಯ ಕನಿಷ್ಟ ಮಟ್ಟಕ್ಕೆ ಕುಸಿದಿದೆ ಹಾಗೂ ಕೆಲವು ಯುರೋಪಿಯನ್ ಹಿಮನದಿಗಳ ಕರಗುವಿಕೆಯೂ ತೀವ್ರಗೊಂಡಿದೆ. ಸಮುದ್ರದ ಮಟ್ಟಗಳೂ ದಾಖಲೆಯ ಮಟ್ಟಕ್ಕೇರಿದ್ದು 2013ರಿಂದ 2022ರ ಅವಧಿಯಲ್ಲಿ ಪ್ರತೀವರ್ಷ ಸರಾಸರಿ 4.62 ಮಿಲಿಮೀಟರ್‌ನಷ್ಟು ಏರಿಕೆಯಾಗಿದೆ. 1993ರಿಂದ 2002ರವರೆಗಿನ ಅವಧಿಗೆ ಹೋಲಿಸಿದರೆ ಏರಿಕೆ ದರ ದುಪ್ಪಟ್ಟಾಗಿದೆ ಎಂದು ವಿಶ್ವಹವಾಮಾನ ಸಂಸ್ಥೆಯ ವಾರ್ಷಿಕ ಹವಾಮಾನ ಪರಿಶೀಲನೆಯ ವರದಿ ಹೇಳಿದೆ.

ಭೂಮಿಯ ಮೇಲೆ ಹಸಿರುಮನೆ ಅನಿಲ ಹೊರಸೂಸುವಿಕೆಯ 90%ದಷ್ಟು ಶಾಖ ಸಂಗ್ರಹಗೊಂಡಿರುವ ಸಾಗರಗಳಲ್ಲಿ ದಾಖಲೆ ಮಟ್ಟದ ಗರಿಷ್ಟ ಉಷ್ಣತೆ ದಾಖಲಾಗಿದೆ. 2015ರ ಪ್ಯಾರಿಸ್ ಒಪ್ಪಂದದಂತೆ ದೇಶಗಳು ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಶಿಯಸ್‌ಗೂ ಕಡಿಮೆ ಮಟ್ಟಕ್ಕೆ, ಸಾಧ್ಯವಾದರೆ 1.5 ಡಿಗ್ರಿ ಸೆಲ್ಶಿಯಸ್‌ಗೆ ನಿಯಂತ್ರಿಸಲು ಒಪ್ಪಿದ್ದವು ಎಂದು ವರದಿ ಹೇಳಿದೆ.

ಈ ಅಂಕಿಅಂಶ 2022ರಲ್ಲೂ ಏರಿಕೆಯಾಗಲಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಉಂಟಾಗುವ ಹವಾಮಾನ ವೈಪರೀತ್ಯವು, ತಾಪಮಾನ ತಗ್ಗಿಸುವಿಕೆಯಲ್ಲಿ ನಾವು ಯಶಸ್ವಿಯಾಗದಿದ್ದರೆ 2060ರವರೆಗೂ ಮುಂದುವರಿಯಬಹುದು ಎಂದು ವಿಶ್ವ ಹವಾಮಾನ ಸಂಸ್ಥೆ ಮುಖ್ಯಸ್ಥ ಪೀಟರ್ ತಲಾಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ನಮ್ಮ ಬಹಳಷ್ಟು ಪರ್ವತ ಹಿಮನದಿಗಳು ಕಣ್ಮರೆಯಾಗುತ್ತಿವೆ ಮತ್ತು ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆಗೊಳಿಸದಿದ್ದರೆ ಅಂಟಾರ್ಕ್ಟಿಟ್ ಮತ್ತು ಗ್ರೀನ್‌ಲ್ಯಾಂಡ್ ಹಿಮನದಿಗಳ ಕುಗ್ಗುವಿಕೆ ದೀರ್ಘಾವಧಿಯವರೆಗೆ ಮುಂದುವರಿಯುತ್ತದೆ ಎಂದವರು ಹೇಳಿದ್ದಾರೆ.

ಆದರೆ ವರದಿಯಲ್ಲಿನ ಕೆಲವು ಕೆಟ್ಟ ಸುದ್ಧಿಗಳ ಹೊರತಾಗಿಯೂ ಆಶಾವಾದಕ್ಕೆ ಕಾರಣಗಳಿವೆ. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ವಿಧಾನಗಳು ಹೆಚ್ಚು ಕೈಗೆಟಕುವಂತಿವೆ. ಹಸಿರುಶಕ್ತಿಯು ಪಳೆಯುಳಿಕೆ ಇಂಧನಗಳಿಗಿಂತ ಹೆಚ್ಚು ಅಗ್ಗವಾಗುತ್ತಿದೆ ಮತ್ತು ವಿಶ್ವವು ಉತ್ತಮ ತಗ್ಗಿಸುವಿಕೆ(ತಾಪಮಾನ) ವಿಧಾನವನ್ನು ಅಭಿವೃದ್ಧಿಪಡಿಸುತ್ತಿದೆ. ನಮ್ಮ ಭೂಮಿ 3ರಿಂದ 5 ಡಿಗ್ರಿಯಷ್ಟು ತಾಪಮಾನದತ್ತ ಹೊರಳಲಿದೆ ಎಂದು 2014ರಲ್ಲಿ ಅಂದಾಜು ಮಾಡಲಾಗಿತ್ತು. ಆದರೆ ಈಗ ಇದು 2.5ರಿಂದ 3 ಡಿಗ್ರಿಯ ಮಟ್ಟಕ್ಕೆ ಇಳಿದಿದೆ. ಇನ್ನಷ್ಟು ಪ್ರಯತ್ನಿಸಿದರೆ ನಾವು 1.5 ಡಿಗ್ರಿಯ ಮಟ್ಟ ತಲುಪಲು ಸಾಧ್ಯವಾಗಲಿದೆ. ಇದು ಮಾನವಕುಲದ ಕಲ್ಯಾಣ, ಜೀವಗೋಳ ಮತ್ತು ಜಾಗತಿಕ ಆರ್ಥಿಕತೆಗೆ ಉತ್ತಮವಾಗಿದೆ  ಎಂದು ತಲಾಸ್ ಹೇಳಿದ್ದಾರೆ.

share
Next Story
X