Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...!

ಓ ಮೆಣಸೇ...!

ಪಿ.ಎ. ರೈಪಿ.ಎ. ರೈ23 April 2023 7:00 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಓ ಮೆಣಸೇ...!

ನನ್ನ ಸಂಪೂರ್ಣ ಬದುಕನ್ನು ಬಿಜೆಪಿ ಹಾಗೂ ನರೇಂದ್ರ ಮೋದಿಯವರಿಗೆ ಮೀಸಲಿಟ್ಟಿದ್ದೇನೆ -ಯಡಿಯೂರಪ್ಪ, ಮಾಜಿ ಸಿಎಂ 
ಈಗ ಅವರಿಗೆ ನಿಮ್ಮ ಅಗತ್ಯ ಇದ್ದರೆ ತಾನೇ ಅವರು ಈ ನಿಮ್ಮ ಹೇಳಿಕೆಗೆ ಕಿವಿ ಕೊಡುವುದು?

----------------------------
 
ಬಿಜೆಪಿಯಲ್ಲಿ ವೇಸ್ಟ್ ಬಾಡಿಗಳನ್ನು, ಕಸ ಕಡ್ಡಿಗಳನ್ನು ತೆಗೆಯಲು ಪ್ರಧಾನಿ ಮೋದಿ ಪ್ರಯತ್ನ ಮಾಡಿದ್ದಾರೆ. -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಆ ಬಳಿಕ ಅವರು, ಕಸಕಡ್ಡಿಯನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲವನ್ನೂ ಪಕ್ಷದಿಂದ ದೂರ ಓಡಿಸಿದ್ದಾರೆಂಬ ಸುದ್ದಿ ಇದೆಯಲ್ಲಾ?

---------------------------- 

ಯಾರೇ ಆದರೂ ತಾಯಿ(ಬಿಜೆಪಿ)ಗೆ ಒದ್ದು ಹೋಗುವುದು ಸರಿಯಲ್ಲ -ಈಶ್ವರಪ್ಪ, ಮಾಜಿ ಸಚಿವ
  ಪ್ರತಿದಿನ ಹಲವು ಬಾರಿ ಸತ್ಯದ ತಲೆಗೆ ಒದ್ದು ರೂಢಿಯಾದವರು ತಾಯಿಗೆ ಒದ್ದರೆ ಅಚ್ಚರಿ ಏನಿದೆ?
----------------------------
  
ನಾನು ಅಂಬೇಡ್ಕರ್‌ವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ -ಬಸವರಾಜ ಬೊಮ್ಮಾಯಿ, ಸಿಎಂ
 ನೀವು ಅವಕಾಶವಾದಿ ಎಂದೊಪ್ಪಿಕೊಳ್ಳಿ-ಉಳಿದೆಲ್ಲ ವಾದಗಳು ಅದರೊಳಗೆ ಅಡಗಿವೆ.
----------------------------
  ನಾನೇ ಕಟ್ಟಿದ ಮನೆಯಿಂದ ನನ್ನನ್ನು ಹೊರ ಹಾಕಿದ್ದು ತುಂಬಾ ನೋವು ತಂದಿದೆ -ಜಗದೀಶ್ ಶೆಟ್ಟರ್, ಮಾಜಿ ಸಿಎಂ
 ನೀವೀಗ ಆ ಮನೆಯನ್ನು ಕಟ್ಟಿದ್ದೇಕೆ ಎಂದು ಪಶ್ಚಾತ್ತಾಪ ಪಡಬೇಕೇ ಹೊರತು ಅಲ್ಲಿಂದ ನಿಮ್ಮನ್ನು ಹೊರದಬ್ಬಿದ ಬಗ್ಗೆ ರೋದಿಸಬಾರದು.
----------------------------
  
ಕೇಜ್ರಿವಾಲ್ ‘ಶ್ರೀ ಕೃಷ್ಣ’, ಬಿಜೆಪಿ ‘ಕಂಸ’ -ರಾಘವ್ ಛಡ್ಡಾ, ಆಪ್ ನಾಯಕ
ಆದರೂ ಏಕಲವ್ಯನ ಬಗ್ಗೆ ಅವರ ನಡುವೆ ಯಾವುದೇ ಭಿನ್ನಮತವಿಲ್ಲ.

----------------------------
  ಡಬಲ್ ಇಂಜಿನ್ ಸರಕಾರದ ಬಗ್ಗೆ ರಾಜ್ಯದ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ -ನಳಿನ್ ಕುಮಾರ್ ಕಟೀಲು, ಸಂಸದ
ರೈಲಿಗೆ ಕೆಲವು ಚಕ್ರಗಳೂ ಇದ್ದಿದ್ದರೆ ಚೆನ್ನಾಗಿತ್ತು ಎಂಬುದು ಅವರ ಅನಿಸಿಕೆ.

---------------------------- 
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಜ್ಜನರ ಸಂಗ ತೊರೆದು ದುರ್ಜನರ ಸಂಗಡ ಸೇರಿದ್ದಾರೆ -ಬಸವರಾಜ ಬೊಮ್ಮಾಯಿ, ಸಿಎಂ
 

ತಾನು ನಲ್ವತ್ತು ಪರ್ಸೆಂಟ್ ಬಿಟ್ಟು ಕಡಿಮೆ ಪರ್ಸೆಂಟ್ ಪಕ್ಷಕ್ಕೆ ಹೋಗುತ್ತಿರುವುದು ತನ್ನ ತ್ಯಾಗ ಎಂದು ಅವರು ಹೇಳಿಕೊಳ್ಳುತ್ತಿದ್ದಾರಂತೆ.

----------------------------
 ಕುಟುಂಬ ರಾಜಕಾರಣವು ಈ ದೇಶ ಹಾಗೂ ರಾಜ್ಯಕ್ಕೆ ಅಂಟಿರುವ ಶಾಪ -ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
 ನೀವು ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರು ರಾಜಕೀಯ ಬಿಟ್ಟು ದೂರ ಹಿಮಾಲಯದಲ್ಲಿ ತಪೋನಿರತರಾಗಿರುವುದಕ್ಕೆ ಇದುವೇ ಕಾರಣವೇ?
----------------------------
ಮುಂದೊಂದು ದಿನ ಆರೆಸ್ಸೆಸ್ಸೇ ಒಂದು ಸಮಾಜವಾಗಿ ರೂಪುಗೊಳ್ಳಲಿದೆ. ಆಗ ಪ್ರತ್ಯೇಕ ಆರೆಸ್ಸೆಸ್ ಅಗತ್ಯ ಇರುವುದಿಲ್ಲ -ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ
  ಪೂರ್ಣ ಪ್ರಮಾಣದ ಹುಚ್ಚಾಸ್ಪತ್ರೆ ಇದ್ದರೆ, ಇತರ ಆಸ್ಪತ್ರೆಗಳಲ್ಲಿ ಹುಚ್ಚರಿಗಾಗಿ ಪ್ರತ್ಯೇಕ ವಿಭಾಗದ ಅಗತ್ಯವಿರುವುದಿಲ್ಲ.

----------------------------
  
ಬಿಜೆಪಿ ಜಾತಿ ಆಧಾರಿತ ಪಕ್ಷ ಅಲ್ಲವೇ ಅಲ್ಲ -ಸುನೀಲ್ ಕುಮಾರ್, ಸಚಿವ
 ಜಾತಿಗಳನ್ನು ಮೀರಿದ ಜನಾಂಗವಾದವೇ ಆ ಪಕ್ಷದ ತಳಹದಿ.
----------------------------

ಬದಲಾವಣೆ ಕಾಲದ ಅಗತ್ಯ -ಶೋಭಾ ಕರಂದ್ಲಾಜೆ, ಸಚಿವೆ
 ನೀವು ಪರೋಕ್ಷವಾಗಿ, ಬಿಜೆಪಿ ಸಾಕು, ಕಾಂಗ್ರೆಸ್ ಬೇಕು ಅನ್ನುತ್ತಿಲ್ಲ ತಾನೇ?
----------------------------
  
ಒಂದು ವೇಳೆ ನಾನು ಭ್ರಷ್ಟ ಎಂದಾದಲ್ಲಿ, ಜಗತ್ತಿನ ಯಾವ ವ್ಯಕ್ತಿಯೂ ಪ್ರಾಮಾಣಿಕ ಅಲ್ಲ -ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ 
ಅಂದರೆ, ನೀವು ಪ್ರಾಮಾಣಿಕ ಎಂದು ಒಪ್ಪಿಕೊಳ್ಳುವವರು, ಜಗತ್ತಿನ ಯಾವ ವ್ಯಕ್ತಿಯೂ ಭ್ರಷ್ಟನಲ್ಲ ಎಂದು ನಂಬಬೇಕೆ?

----------------------------
  
ಜೆಡಿಎಸ್ ಕಥೆ ಮುಗಿದೇ ಹೋಯಿತು ಎನ್ನುವವರಿಗೆ ಈಗ ಅದರ ಶಕ್ತಿ ಏನು ಎಂಬುದು ಅರ್ಥವಾಗುತ್ತಿದೆ -ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
 ಉತ್ತರಕ್ರಿಯೆ ಬಹಳ ಸಕ್ರಿಯವಾಗಿ ನಡೆಯುತ್ತಿರುವುದು ಎದ್ದು ಕಾಣುತ್ತಿದೆ.

----------------------------
  
ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್‌ರಂತಹವರು ಪಕ್ಷ ಬಿಟ್ಟು ಹೋಗುವುದರಿಂದ ಬಿಜೆಪಿ ಸ್ವಚ್ಛವಾಗುತ್ತದೆ -ರಮೇಶ್ ಜಾರಕಿಹೊಳಿ, ಶಾಸಕ
 ನೀವು ಪಕ್ಷ ತೊರೆದಾಗ ಕಾಂಗ್ರೆಸ್ ಕೂಡ ಇದನ್ನೇ ಹೇಳಿತ್ತು.

----------------------------
  
ನಾನು ಬಿಜೆಪಿಗೆ ಹೋಗುವುದಿಲ್ಲ ಎಂಬುದನ್ನು ಬೇಕಿದ್ದರೆ ಸ್ಟಾಂಪ್ ಪೇಪರ್‌ನಲ್ಲಿ ಬರೆದು ಕೊಡುತ್ತೇನೆ -ಅಜಿತ್ ಪವಾರ್, ಎನ್‌ಸಿಪಿ ನಾಯಕ

ಹಾಗೆಂದು ನೀವು ಹಣೆಯಲ್ಲಿ ಕೆತ್ತಿಸಿಕೊಂಡರೂ ಜನ ನಂಬುವುದಿಲ್ಲ-ಏನು ಮಾಡೋಣ.

----------------------------
ಯಾವುದೇ ಮಾಫಿಯಾ ಡಾನ್ ಅಥವಾ ಅಪರಾಧಿ ಉತ್ತರ ಪ್ರದೇಶದಲ್ಲಿ ಉದ್ಯಮಿಗಳಿಗೆ ಬೆದರಿಕೆ ಹಾಕುವಂತಿಲ್ಲ, ಅವರಿಂದ ಹಣ ವಸೂಲು ಮಾಡುವಂತಿಲ್ಲ -ಯೋಗಿ ಆದಿತ್ಯನಾಥ್, ಉ.ಪ್ರ. ಸಿಎಂ 
ಅಪರಾಧ ಕೃತ್ಯಗಳನ್ನು ಮಾಡುವುದಕ್ಕೆ ಮತ್ತು ಎಲ್ಲರಿಂದ ಹಣ ದೋಚುವುದಕ್ಕೆಂದೇ ಒಂದು ಕ್ರಿಮಿನಲ್ ಸರಕಾರವಿರುವ ರಾಜ್ಯದಲ್ಲಿ ಚಿಲ್ಲರೆ ಮಾಫಿಯಾಗಳ ಅಗತ್ಯವೇ ಎಲ್ಲಿದೆ?

----------------------------
 ಪಕ್ಷ ನನಗೆ ಶಾಸಕ, ಸಚಿವ ಸ್ಥಾನ ನೀಡಿದೆ. ಅದೇ ರೀತಿ ನೋವನ್ನೂ ಕೊಟ್ಟಿದೆ -ರಾಮದಾಸ್, ಶಾಸಕ
  ಆ ಪಕ್ಷವು ದೇಶ ಮತ್ತು ಸಮಾಜಕ್ಕೆ ಕೊಟ್ಟ ನೋವಿಗೆ ಹೋಲಿಸಿದರೆ ನನಗೆ ಕೊಟ್ಟ ನೋವು ಸಣ್ಣದು ಎಂದುಕೊಂಡು ಸಮಾಧಾನ ಪಟ್ಟುಕೊಳ್ಳಿ.

----------------------------  
ಅಮುಲ್ ಯಾರ ಮೇಲೆ ಕೂಡಾ ಸವಾರಿ ಮಾಡುವ ಉದ್ದೇಶ ಹೊಂದಿಲ್ಲ. ಆದ್ದರಿಂದ ಅದರ ಉತ್ಪನ್ನವನ್ನು ಬಹಿಷ್ಕರಿಸಬೇಡಿ -ನರೇಂದ್ರ ಮೋದಿ, ಪ್ರಧಾನಿ 
ಹೀಗೆ ಹೇಳಿಯೇ ಕರ್ನಾಟಕದ ಬ್ಯಾಂಕುಗಳ ಕತೆ ಮುಗಿಸಿದಿರಿ.

----------------------------
  ನನ್ನ ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಎನ್ನುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುತ್ತೇನೆ -ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ
 ಅಲ್ಲಿರುವ ನಿಮ್ಮ ಖಾಯಂ ರೂಮ್‌ನಲ್ಲಿ ಅಷ್ಟೊಂದು ಮಂದಿಗೆ ಜಾಗ ಎಲ್ಲಿದೆ?
----------------------------
  ಪ್ರಧಾನಿ ಮೋದಿ ನೇತೃತ್ವದ ಸರಕಾರ ಕೇವಲ 9 ವರ್ಷದಲ್ಲಿ 74 ವಿಮಾನ ನಿಲ್ದಾಣ ನಿರ್ಮಿಸಿ ದಾಖಲೆಯ ಸಾಧನೆ ಮಾಡಿದೆ -ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
 ದೇಶದ ಬಡವರ ಉದ್ಧಾರಕ್ಕೆ ಇದಕ್ಕಿಂತ ದೊಡ್ಡ ಕ್ರಮ ಏನಿರಲು ಸಾಧ್ಯ?
----------------------------
 ಕೆಲವರು ಗೋರಿಗೆ ಹೋಗುವವರೆಗೂ ಹಾಲಿ ಶಾಸಕನಾಗಿಯೇ ಇರಲು ಬಯಸುತ್ತಾರೆ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
 ಇನ್ನೊಬ್ಬರನ್ನು ಗೋರಿಗೆ ಕಳುಹಿಸಿ ಹಾಲಿ ಶಾಸಕರಾಗಿರಲು ಬಯಸುವವರ ಬಗ್ಗೆ ಎಚ್ಚರಿಕೆ ಬೇಕು.

----------------------------
 ತಮಿಳುನಾಡಿನ ರಾಜಕೀಯ ಕರ್ನಾಟಕಕ್ಕಿಂತ ಭಿನ್ನ -ಅಣ್ಣಾಮಲೈ, ತ.ನಾ. ಬಿಜೆಪಿ ಅಧ್ಯಕ್ಷ
 ತಮಿಳುನಾಡಿನಲ್ಲಿ ಸಿಂಗಂ ಎಂದು ಕರೆಸಿಕೊಳ್ಳುವುದು ಅಷ್ಟು ಸುಲಭವಿಲ್ಲ ಅಲ್ಲವೇ?
----------------------------
 
ನಾನು ಆಕಸ್ಮಿಕ ಪ್ರಧಾನಿ ಅಲ್ಲ -ದೇವೇಗೌಡ, ಮಾಜಿ ಪ್ರಧಾನಿ
ಆಕಸ್ಮಿಕ ಮಾಜಿ ಪ್ರಧಾನಿ ಎಂದು ಕರೆಯಬಹುದೇ?

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಪಿ.ಎ. ರೈ
ಪಿ.ಎ. ರೈ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X