Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಹೆನ್ನಾಬೈಲ್ ನಲ್ಲಿ ಸಂಭ್ರಮದ ಈದುಲ್...

ಹೆನ್ನಾಬೈಲ್ ನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

25 April 2023 9:24 AM IST
share
ಹೆನ್ನಾಬೈಲ್ ನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಕುಂದಾಪುರ: ಹೆನ್ನಾಬೈಲ್ ನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಿಸಲಾಯಿತು. ಇಲ್ಲಿನ ಮೊಹಿದ್ದೀನ್ ಜುಮಾ ಮಸೀದಿಯ ಧರ್ಮಗುರು ಷಾ ಆಲಂ ರಿಝ್ವಿ ನೇತೃತ್ವದಲ್ಲಿ ಈದುಲ್ ಫಿತರ್ ನಮಾಝ್ ನಿರ್ವಹಿಸಲಾಯಿತು.

ಈ ಸಂದರ್ಭ ಈದ್ ಸಂದೇಶ ನೀಡಿದ ಷಾ ಆಲಂ ರಿಝ್ವಿ, "ಸೌಹಾರ್ದ ಮನಸ್ಥಿತಿಯು ಸುಸಂಸ್ಕೃತ ಕೌಟುಂಬಿಕ ಹಿನ್ನಲೆ ಮತ್ತು ಸದೃಢ ಶಿಕ್ಷಣದಿಂದಾಗಿ ಮೂಡುತ್ತದೆ. ಸೌಹಾರ್ದ ಇಲ್ಲದ ಜಾಗದಲ್ಲಿ ಇಂತಹ ಹಿನ್ನಲೆ ಮತ್ತು ಶಿಕ್ಷಣಗಳಿರುವುದಿಲ್ಲ. ಸಂಘರ್ಷ ಎಲ್ಲದರಲ್ಲೂ ಇದೆ. ಆದರೆ ಸೌಹಾರ್ದವು ಪ್ರಜ್ಞೆಯ ಪ್ರಭಾಮಂಡಲ ಮತ್ತು ಪ್ರಬುದ್ಧತೆಯ ಪಾರಮ್ಯದಲ್ಲಿರುವ ವ್ಯಕ್ತಿತ್ವದಿಂದ ಮಾತ್ರ ಸಾಧಿಸಲು ಸಾಧ್ಯ'' ಎಂದು ಹೇಳಿದರು.

''ಭೂಮಿಯ ಮೇಲೆ ಮನುಷ್ಯ ಹುಟ್ಟಿದಂದಿನಿಂದ ಪರಸ್ಪರ ಸಂಘರ್ಷಿಸುತ್ತಲೇ ಬಂದಿದ್ದಾನೆ. ಕಾಲಕಾಲಕ್ಕೆ ಸಂಘರ್ಷವು ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರಣಗಳ ಮೇಲೆ ನಿರಂತರವಾಗಿ ನಡೆದುಬಂದಿದೆ ಮಾತ್ರವಲ್ಲ, ಮುಂದೆಯೂ ನಡೆಯುತ್ತದೆ. ನಮ್ಮೊಳಗಿನ ಮನಸ್ಸೂ ಕೂಡ ಆಗಾಗ ತನ್ನೊಳಗೇ ಸಂಘರ್ಷವನ್ನು ಕಾಣುತ್ತದೆ'' ಎಂದವರು ತಿಳಿಸಿದರು.

''ಸದ್ಯದ ಜಗತ್ತಿನಲ್ಲಿ ಸಂಘರ್ಷ ಸರ್ವವ್ಯಾಪಿಯಾಗಿದೆ. ರಮಝಾನ್ ಉಪವಾಸವು ಉಪವಾಸಿಗನ ಅಂತಃಶಕ್ತಿ ಮತ್ತು ಅಂತಃಸತ್ವವನ್ನು ವರ್ಧಿಸುವುದರ ಮೂಲಕ ಸಂಘರ್ಷಮಯ ಜಗತ್ತಿನಲ್ಲಿ ಸಂಯಮ ಸೌಹಾರ್ದದಿಂದ ಬದುಕುವ ಪಾಠವನ್ನು ಕಲಿಸುತ್ತದೆ. ವ್ರತಾಚರಣೆಯ ಉದ್ದೇಶ ಬರೀ ಉಪವಾಸವಲ್ಲ. ದಮನ ಶೋಷಣೆ ಅಪಮಾನಗಳ ವಿರುದ್ಧ ಸಂಯಮದಿಂದ ಶಾಂತಿ ಮಾರ್ಗದಿಂದ ಪ್ರತಿಕ್ರಿಯಿಸಲು ಕಲಿಸುವ ಒಂದು ಪ್ರಾಯೋಗಿಕ ವೇದಿಕೆಯೂ ಆಗಿದೆ. ಒಂದು ತಿಂಗಳ ಕಠಿಣ ಉಪವಾಸ ವೃತ ಮುಗಿಸಿ ಹಬ್ಬದ ಸಂಭ್ರಮವನ್ನು ಆಚರಿಸುವ ಹೊತ್ತಿನಲ್ಲಿ, ಜಗತ್ತಿನ ಹಸಿದ ಹೊಟ್ಟೆಗಳ ಬಗ್ಗೆ, ವಯೋವೃದ್ಧ ಜೀವಗಳ ಬಗ್ಗೆ, ಧರ್ಮ, ಜಾತಿ, ವರ್ಣಗಳ ಕಾರಣದಿಂದ ಶೋಷಣೆ- ದಮನಿತರ ಬಗ್ಗೆಯೂ ಪ್ರತಿಯೊಬ್ಬ ಮುಸ್ಲಿಮನ ಮನಸ್ಸು ಮಿಡಿಯಬೇಕು. ಅಂತಹ ಭಾವನೆ ಇದ್ದರೆ ಮಾತ್ರ ಪ್ರಾರ್ಥನೆಯ ಪ್ರತಿಫಲವನ್ನು ಸೃಷ್ಟಿಕರ್ತ ನೀಡುವನು" ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಹಸನ್ ಸಾಹೇಬ್, ಮಾಜಿ ಅಧ್ಯಕ್ಷ ಸೈಯದ್ ಅಬ್ಬಾಸ್ , ಹಯಾತ್  ಬಾಷಾ, ಅಬ್ಬಾಸ್ ಅಲಿ, ಇಬ್ರಾಹೀಂ ಸಯ್ಯದ್, ಅಶ್ಫಾಕ್ ಸಾಬ್ಜನ್, ಆದಂ ಸಾಹೇಬ್, ಅಮಾನ್ ಜಮಾಲ್, ಶಬ್ಬೀರ್ ಸಾಹೇಬ್, ಸೈಯದ್ ರಫೀಕ್, ಸೈಯದ್ ಆರಿಫ್, ಬಾವಾ ಸಾಹೇಬ್, ಅಲ್ತಾಫ್ ಅಲಿ, ಅರ್ಷದ್ ಅಬ್ಬಾಸ್, ರಿಹಾನ್ ಆಹ್ಮದ್, ಮುಹಮ್ಮದ್ ರಫೀಕ್, ಸಲೀಮ್ ಮೌಲಾಲಿ ಮುಂತಾದವರು ಉಪಸ್ಥಿತರಿದ್ದರು.

share
Next Story
X