ಕರ್ಣಾಟಕ ಬ್ಯಾಂಕಿನ ಮಹಾಬಲೇಶ್ವರ ಎಂ.ಎಸ್.ಗೆ ಅಭಿನಂದನೆ

ಉಡುಪಿ: ಯಕ್ಷಗಾನ ಕಲಾರಂಗದ ವತಿಯಿಂದ ಇತ್ತೀಚೆಗೆ ನಿವೃತ್ತ ರಾದ ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರ ಅಭಿನಂದನಾ ಸಮಾರಂಭವು ಉಡುಪಿಯ ಪೇಜಾವರ ಮಠದ ರಾಮ ವಿಠಲ ಸಭಾಭವನದಲ್ಲಿ ಮಂಗಳವಾರ ಜರಗಿತು.
ಮಹಾಬಲೇಶ್ವರ ಅವರನ್ನು ಸನ್ಮಾನಿಸಿದ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಕರ್ಣಾಟಕ ಬ್ಯಾಂಕ್ ಕರಾವಳಿ ಭಾಗದ ನಮಗೆ ಅತ್ಯಂತ ಹೆಮ್ಮೆಯ ವಿತ್ತೀಯ ಸಂಸ್ಥೆಯಾಗಿದೆ. ಮಹಾಬಲೇಶ್ವರ ಕರ್ಣಾಟಕ ಬ್ಯಾಂಕ್ಗೆ ದೊಡ್ಡಶಕ್ತಿಯಾಗಿದ್ದರು. ಬ್ಯಾಂಕಿನಿಂದ ನಿವೃತ್ತರಾದ ಮೇಲೆ ಅವರನ್ನು ಅಭಿನಂದಿಸುತ್ತಿರುವುದು ಅವರು ಬ್ಯಾಂಕಿನ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗೆ ನಿದರ್ಶನ. ಕರ್ಣಾಟಕ ಬ್ಯಾಂಕ್ ಸಮಾಜಸ್ನೇಹಿ, ಗ್ರಾಹಕಸ್ನೇಹಿಯಾಗಿ ವ್ಯವಹರಿಸುತ್ತ ಬಂದಿದೆಂದು ಹೇಳಿದರು.
ಗೃಹ ನಿರ್ಮಾಣದ ಫಲಾನುಭವಿ ಪ್ರಿಯಲಕ್ಷ್ಮೀ ಅನಿಸಿಕೆ ಹಂಚಿಕೊಂಡರು. ಅಧ್ಯಕ್ಷತೆಯನ್ನು ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ಹರಿಯಪ್ಪಕೋಟ್ಯಾನ್ ಶುಭಾಶಂಸನೆಗೈದರು. ಕರ್ಣಾಟಕ ಬ್ಯಾಂಕ್ನ ಎಜಿಎಂ ಬಿ.ರಾಜಗೋಪಾಲ್, ಅನ್ನಪೂರ್ಣಾ ಮಹಾಬಲೇಶ್ವರ್, ಸಂಸ್ಥೆಯ ಉಪಾಧ್ಯಕ್ಷರು ಗಳಾದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ ಹಾಗೂ ವಿ.ಜಿ. ಶೆಟ್ಟಿ ಹಾಗೂ ಕೆ.ಸದಾಶಿವ ರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನ ಹೊಂದಿದ ಯಕ್ಷಗಾನ ಕಲಾವಿದ ಜಗದೀಶ ನಲ್ಕ ಹಾಗೂ ಗುರುವಪ್ಪ ಬಾಯಾರು ಕುಟುಂಬದವರಿಗೆ ಸಾಂತ್ವನ ನಿಧಿಯಿಂದ ಅನುಕ್ರಮವಾಗಿ 75,000ರೂ. ಹಾಗೂ 50,000ರೂ. ನೆರವು ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಅಭಿನಂದನ ಪತ್ರ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸಾವಿಕವಾಗಿ ಮಾತನಾಡಿ, ಕಾರ್ಯ ಕ್ರಮ ನಿರೂಪಿಸಿ ದರು. ಜತೆ ಕಾರ್ಯದರ್ಶಿ ಎಚ್.ಎನ್.ಶೃಂಗೇಶ್ವರ ಸಹಕರಿಸಿದರು.