Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರೈತ ಹಕ್ಕೊತ್ತಾಯಗಳು: ಬಾಕಿ ವಗೈರೆಗಳು

ರೈತ ಹಕ್ಕೊತ್ತಾಯಗಳು: ಬಾಕಿ ವಗೈರೆಗಳು

ಕೆ.ಪಿ. ಸುರೇಶಕೆ.ಪಿ. ಸುರೇಶ28 April 2023 12:54 PM IST
share
ರೈತ ಹಕ್ಕೊತ್ತಾಯಗಳು: ಬಾಕಿ ವಗೈರೆಗಳು

ಈ ಹಕ್ಕೊತ್ತಾಯದ ಪಟ್ಟಿ ರೈತ ಸಂಘಗಳ predictable ಬೇಡಿಕೆಗಳ ಪಟ್ಟಿಯೇ ಸರಿ. ಹೊಸ ಸವಾಲುಗಳ ಅರಿವಾಗಲೀ ನತದೃಷ್ಟರ ಪರವಾದ ಬೇಡಿಕೆಗಳಾಗಲೀ ಮಾಯವಾಗಿರುವುದು ಈ ಸಂಘಟನೆಗಳ ಬೌದ್ಧಿಕ ಮಿತಿಯನ್ನು ತೋರಿಸುತ್ತದೆ.

ಬೆಂಗಳೂರಿನಲ್ಲಿ ನಡೆದ ಕಿಸಾನ್ ಸಂಯಕ್ತ ಮೋರ್ಚಾದ ಸಮಾಲೋಚನಾ/ ಸಂವಾದ ಪಂಚಾಯತ್‌ನಲ್ಲಿ ರೈತರ ಹಕ್ಕೊತ್ತಾಯಗಳು ಬಿಡುಗಡೆಗೊಂಡವು. ಈ ಹಕ್ಕೊತ್ತಾಯಗಳ ಫೋಕಸ್‌ನಲ್ಲಿ ಮಳೆ ಆಶ್ರಿತ ಸಣ್ಣ ರೈತರು, ಕೃಷಿ ಕೂಲಿಕಾರರು, ಆದಿವಾಸಿಗಳ ಅರಣ್ಯ ಹಕ್ಕು ಹಾಗೂ ಉದ್ಯೋಗ ಖಾತರಿ ಯೋಜನೆಯ ಆಶಯಗಳ ಬಗ್ಗೆ ಹೆಚ್ಚೇನೂ ಇರಲಿಲ್ಲ. ಇದು ಅನಿರೀಕ್ಷಿತ ಅಲ್ಲವೆನಿಸುತ್ತದೆ.

ಬಹುತೇಕ ನಮ್ಮ ರೈತ ಸಂಘಗಳ ಹೊಕ್ಕುಳ ಬಳ್ಳಿ ಇರುವುದು ದೊಡ್ಡ/ನೀರಾವರಿ/ವ್ಯಾಪಾರಿ ಬೆಳೆಗಳಲ್ಲಿ. ಆದ್ದರಿಂದಲೇ ಈ ಬೇಡಿಕೆಗಳ ಪಟ್ಟಿಯಲ್ಲಿ ಈ ಛಾಯೆ ಢಾಳಾಗಿ ಕಾಣಿಸುತ್ತದೆ.

ಬೆಲೆ ಕುಸಿದಾಗ ಸರಕಾರ ಮಧ್ಯಪ್ರವೇಶ ಮಾಡಬೇಕು ಎನ್ನುವ ಪಟ್ಟಿಯ ಬೆಳೆಗಳು ಇದನ್ನು ಸೂಚಿಸುತ್ತವೆ. ಜೊತೆಗೆ ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಬಗ್ಗೆಯೂ ಹಕ್ಕೊತ್ತಾಯವಿದೆ.

ಈ ವೈರುಧ್ಯಗಳ ಬಗ್ಗೆ ಯಾರೂ ಚರ್ಚಿಸಲಿಲ್ಲ. ಚರ್ಚಿಸಲು ಸಮಯಾವಕಾಶವೂ ಇರಲಿಲ್ಲ.  ಈ ಬಗ್ಗೆ ಈ ಮೋರ್ಚಾದ ಭಾಗವಾದ ಸಂಘಟನೆಗಳು ಚರ್ಚಿಸಿದ್ದವೋ ಗೊತ್ತಿಲ್ಲ.

ಈ ಹಕ್ಕೊತ್ತಾಯ ಅಂಚಿಗೆ ಸರಿಸಿರುವ ವಿಷಯಗಳು ಯಾಕೆ ಮುಖ್ಯ ಅನ್ನುವುದನ್ನು ಕೊಂಚ ಚರ್ಚಿಸಬೇಕಿದೆ.

► ಕರ್ನಾಟಕದ ಶೇ.೬೦ರಷ್ಟು ಕೃಷಿ ಮಳೆ ಆಶ್ರಿತ ಕೃಷಿಯ ಹಂಗಿನಲ್ಲಿದೆ. ಕರ್ನಾಟಕದ ಬಹುತೇಕ ರೈತರು ಸಣ್ಣ /ಅತಿ ಸಣ್ಣ ರೈತರಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಸಣ್ಣ /ಅತಿ ಸಣ್ಣ ರೈತರು ತಮ್ಮ ಹೆಚ್ಚಿನ ಆದಾಯವನ್ನು ಕೂಲಿ ಮೂಲಕ ಪಡೆಯುತ್ತಿದ್ದಾರೆ. ಅಂದರೆ ಈ ರೈತರು ಕೃಷಿ ಕೂಲಿಕಾರರಾಗಿಯೂ ಬದಲಾಗಿದ್ದಾರೆ. ಈ ರೈತರು/ಕೂಲಿಕಾರರಿಗೆ ಕೃಷಿಯಾಚೆ ಆದಾಯ ಮೂಲಗಳ ಖಚಿತತೆ ಇಲ್ಲ. ಈ ಗ್ರಾಮ ಭಾರತದ ಸಂಕಟ ಕಣ್ಣಿಗೆ ಹಿಡಿಯುವಂತಿದೆ. ಇವರ ಸಂಕಟ ಪರಿಹಾರವಾಗುವವರೆಗೂ ಗ್ರಾಮ ಭಾರತಕ್ಕೂ ಕೃಷಿ ಲೋಕಕ್ಕೂ ಬಿಡುಗಡೆ ಇಲ್ಲ.

► ಅರಣ್ಯ ಹಕ್ಕು ಎಂಬುದು ಆದಿವಾಸಿಗಳಿಗೆ ಬಹುಮುಖ್ಯ. ಬಗರ್ ಹುಕುಂ ಬಗ್ಗೆ ಮಾತಾಡುವ ರೈತ ಮುಖಂಡರು ಈ ನತದೃಷ್ಟರ ಬಗ್ಗೆ ಬಾಯುಪಚಾರದ ಒಕ್ಕಣೆ ಬಿಟ್ಟರೆ ಹೆಚ್ಚಿನ ಕಾಳಜಿ ತೋರಿಲ್ಲ. ಆದಿವಾಸಿಗಳ ಸಮುದಾಯ ಹಕ್ಕು ಬೇರೆ. ಅರಣ್ಯದಲ್ಲಿರುವ ಆದಿವಾಸಿಯೇತರರ ಬೇಡಿಕೆಗಳು ಬೇರೆ. ಈ ದೇಶದ ಮೂಲನಿವಾಸಿಗಳ ಕೈಯಿಂದ ಅರಣ್ಯವನ್ನು ಕಸಿದುಕೊಂಡು ಅವರನ್ನೇ ಅನ್ಯರು ಎಂಬಂತೆ ನೋಡುವ ನೀತಿ ಧೋರಣೆ ಖಾಯಂ ಆಗಿದೆ. ಖಾಸಗಿ ಆಸ್ತಿ ಹಕ್ಕಿಲ್ಲದ ಸಾಮುದಾಯಿಕ ಹಕ್ಕು ಮಾತ್ರ ಇರುವ ಈ ಆದಿವಾಸಿಗಳ ಹಕ್ಕುಗಳು ನಮ್ಮ ಆದ್ಯತೆಯೂ ಆಗಬೇಕು. ಮನುಷ್ಯ ಸಂಘರ್ಷ ತಾರಕಕ್ಕೇರಿರುವ ಕರ್ನಾಟಕದಲ್ಲಿ ಕಾಡಿನ ಮಕ್ಕಳ ದುಸ್ಥಿತಿ ಇನ್ನೂ ದಯನೀಯವಾಗಿಯೇ ಇದೆ.

► ಉದ್ಯೋಗ ಖಾತರಿಯನ್ನೇ ನೋಡಿ: ತೋಟಗಾರಿಕೆಗೆ ಪ್ರೋತ್ಸಾಹ ನೀಡಲು ಸಾವಿರಾರು ರೂಪಾಯಿಗಳ ಸಹಾಯ ಇಲ್ಲಿದೆ. ಆದರೆ ಈ ತೋಟಗಾರಿಕೆಗೆ ಬದಲಾಗುವುದೆಂದರೆ ಬೋರ್‌ವೆಲ್ ಹೊಂದುವುದೇ ಆಗಿದೆ. ಈ ಬೋರ್‌ವೆಲ್ ಭಾಗ್ಯ ಇಲ್ಲದ ನತದೃಷ್ಟರು ಮತ್ತು ತೋಟಗಾರಿಕೆಯ ಭಾಗ್ಯ ಪಡೆದವರ ನಡುವಿನ ಕಂದರವನ್ನು ಸರಕಾರವೇ ಹೆಚ್ಚಿಸುತ್ತಿದೆ. ಮಳೆ ಆಶ್ರಿತ ರೈತರ ಬೇಸಾಯಕ್ಕೆ ಕನಿಷ್ಠ ಸಹಾಯವೂ ಇಲ್ಲ. ಏನಿಲ್ಲವೆಂದರೂ ಹತ್ತಿಪ್ಪತ್ತು ದಿನಗಳ  ಉದ್ಯೋಗ ಖಾತರಿ ದಿನಗಳನ್ನು ಈ ರೈತರಿಗೆ ನೀಡಿದರೂ ಮಳೆ ಆಶ್ರಿತ ಕೃಷಿ ಕೊಂಚ ಉಸಿರಾಡಬಹುದು.

ಇವೆಲ್ಲಾ ಒಳಗಿನ ಅನುಕಂಪದಿಂದ ಹುಟ್ಟಬೇಕೇ ಹೊರತು, ಹೇಳಿ ಕೊಟ್ಟು ಬರುವಂಥದ್ದಲ್ಲ.

► ಇನ್ನು  ಕರ್ನಾಟಕದ ಇತ್ತೀಚೆಗಿನ ಪರಮ ಪರಿಸರ ಮತ್ತು ಆರ್ಥಿಕ ಫ್ರಾಡ್ ಆಗಿರುವ ಎತ್ತಿನ ಹೊಳೆ ಯೋಜನೆ ಬಗ್ಗೆಯೂ ಅಷ್ಟೇ. ಈ ಯೋಜನೆಯ ಭ್ರಷ್ಟಾಚಾರ ಮತ್ತು ನೀರಿನ ಲಭ್ಯತೆಯ ಕಣ್ಕಟ್ಟು ಗೊತ್ತೇ ಇಲ್ಲದಂತೆ ನಮ್ಮ ರೈತ ನಾಯಕರು ವರ್ತಿಸಿದರೆ ಹೇಗೆ? ಮೇಕೆ ದಾಟು ಇದಕ್ಕಿಂತಲೂ ವಿಪರೀತದ್ದು. ಇದರ ಪರಿಸರ ಪರಿಣಾಮ ಗಮನಿಸಿದರೆ ಈ ಯೋಜನೆ ಹೇಗೆ ಸಾಧು ಎಂಬುದು ಅರ್ಥವಾಗುತ್ತಿಲ್ಲ.

► ಕನಿಷ್ಠ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಈ ಕಾವೇರಿಯ ದುಪ್ಪಟ್ಟು ನೀರು ನಮ್ಮ ಪಾಲಿಗಿದ್ದರೂ ಅದು ಕುಂಟುತ್ತಾ ಸಾಗಿದೆ. ಒಂದು ಲಕ್ಷ ಎಕರೆಯಷ್ಟು ಜಮೀನು ಮುಳುಗಡೆಯಾಗಬಹುದಾದ ಈ ವಿಸ್ತರಣೆಯಲ್ಲಿ ಮುಳುಗಡೆಯಾಗುವ ರೈತರಿಗೆ ದೊರಕುವ ಪರಿಹಾರದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅನುದಾನವಂತೂ ಅಷ್ಟಕ್ಕಷ್ಟೇ. ಇದು ಆದ್ಯತೆಯಾಗಬೇಕಲ್ಲವೇ.

► ನಮ್ಮ ಅಕಾಲ ಮಳೆ, ಬರ, ಎಲ್ಲವೂ ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿದೆ ಎಂಬುದನ್ನು ಪದೇ ಪದೇ ವಿಜ್ಞಾನಿಗಳು ಎಚ್ಚರಿಸುತ್ತಿದ್ದರೂ ಈ ಸರಕಾರ ರೂಪಾಯಿಗೆ ಒಂದಾಣೆ ಸನ್ನದ್ಧತೆಯನ್ನೂ ತೋರಿಲ್ಲ. ಸರಕಾರಕ್ಕಿರುವ ಅವಜ್ಞೆ ಮಾಮೂಲಿ. ರೈತ ನಾಯಕರಿಗಾದರೂ ಈ ಎಚ್ಚರ ಬೇಕಲ್ಲವೇ.

ಪ್ರೊಫೆಸರ್ ದೃಷ್ಟಾರ ಅನ್ನಿಸಿಕೊಳ್ಳೋದು ಈ ಕಾರಣಕ್ಕೆ. ತನ್ನ ಕಾಲದ ಎಲ್ಲಾ ಅಪಾಯಗಳನ್ನೂ ಗ್ರಹಿಸಿ ಸ್ಪಂದಿಸಿ ಪ್ರತಿಕ್ರಿಯಿಸುವ ಶಕ್ತಿ ಅವರಿಗಿತ್ತು.

ಈ ಹಕ್ಕೊತ್ತಾಯದ ಪಟ್ಟಿ ರೈತ ಸಂಘಗಳ predictable ಬೇಡಿಕೆಗಳ ಪಟ್ಟಿಯೇ ಸರಿ. ಹೊಸ ಸವಾಲುಗಳ ಅರಿವಾಗಲೀ ನತದೃಷ್ಟರ ಪರವಾದ ಬೇಡಿಕೆಗಳಾಗಲೀ ಮಾಯವಾಗಿರುವುದು ಈ ಸಂಘಟನೆಗಳ ಬೌದ್ಧಿಕ ಮಿತಿಯನ್ನು ತೋರಿಸುತ್ತದೆ.

ಮೂಲತಃ ಇಂತಹ ಹಕ್ಕೊತ್ತಾಯಗಳು ಚಾಲ್ತಿಯಲ್ಲಿರುವ ಆತ್ಮಹತ್ಯಾಕಾರಿ ನೀತಿಗಳ ಅನುಮೋದನೆಯ ಮೂಲಕವೇ ಹುಟ್ಟಿದರೆ ದೂರಗಾಮಿ, ಸುಸ್ಥಿರ ಪರ್ಯಾಯಗಳನ್ನು ಮುಂದಿಡುವವರು ಯಾರು? ಸರಕಾರೀ ಯಂತ್ರ, ಯೋಜನಾ ಪರಿಣಿತರು, ಕೃಷಿ ವಿಜ್ಞಾನಿಗಳು ಈ ಕಾಣ್ಕೆ ಹೊಂದಿಲ್ಲ. ಆದ್ದರಿಂದಲೇ ರೈತಾಪಿಯೇ ಈ ದಾರಿಯನ್ನು ತೋರಬೇಕು.

ಇದರ ಕರ್ಣ ಧಾರತ್ವ ವಹಿಸಿದ್ದ ರಾಷ್ಟ್ರ ಮಟ್ಟದ ನಾಯಕರೂ ಈ ತಕ್ಷಣದ ಅವಾಸ್ತವಿಕ ಬೇಡಿಕೆಗಳಿಂದಾಚೆ ಚಿಂತನೆ ನಡೆಸುತ್ತಿರುವ ಪುರಾವೆ ಇಲ್ಲಿ ಕಾಣಿಸುತ್ತಿಲ್ಲ.

ದಿಲ್ಲಿಯ ರೈತ ಹೋರಾಟದ ಬಗ್ಗೆ ಕೃತಜ್ಞತೆ ಇರುವಾಗಲೂ ಕರ್ನಾಟಕದ ಮುಖೇನ ಗ್ರಾಮ ಭಾರತ/+ ಕೃಷಿ ಲೋಕದ ಸುಸ್ಥಿರತೆಯ ಹೊಸ ಹೆಜ್ಜೆ, ಹೊಸ ಹಾದಿಗಳ ಬಗ್ಗೆ ಚರ್ಚಿಸಬೇಕಲ್ಲವೇ?

share
ಕೆ.ಪಿ. ಸುರೇಶ
ಕೆ.ಪಿ. ಸುರೇಶ
Next Story
X