ಕಲಬುರಗಿ: ರಾಹುಲ್ ಭಾಷಣ ಕೇಳಲು ಮಳೆಯಲ್ಲೇ ಕಾದು ನಿಂತ ಜನ

ಕಲಬುರಗಿ: ಜಿಲ್ಲೆಯ ಜೇರ್ವಗಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದ ಆರಂಭದಲ್ಲೇ ಭಾರೀ ಮಳೆ ಸುರಿದಿದೆ. ಆದರೆ, ಗುಡುಗು ಮಳೆಯ ಮಧ್ಯೆಯೂ ಜನರು ರಾಹುಲ್ ಗಾಂಧಿ ಭಾಷಣಕ್ಕಾಗಿ ಕಾದು ನಿಂತಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಳಗ್ಗೆ ನಿಗದಿತ ಸಮಯದಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಬರಲಾಗಲಿಲ್ಲ. ಮಂಗಳೂರಿನಿಂದ ಬೆಳಗ್ಗೆ 12 ಗಂಟೆಗೆ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಆದರೆ ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಜೇವರ್ಗಿ ಬರಬೇಕೆಂದರೆ ಮೋಡ ಕವಿದು ಸಾಧ್ಯವಾಗಲಿಲ್ಲಿ. ಇದೇ ವೇಳೆ ಜೇವರ್ಗಿ ಯಲ್ಲಿ ಭಾರಿ ಮಳೆ ಬೀಳಲಾರಂಭಿಸಿದೆ. ಪ್ರಯುಕ್ತ ಅವರನ್ನು ರಸ್ತೆ ಮೂಲಕ ಕರೆ ತರಯವ ಯತ್ನ ನಡೆದಿದೆ.
ಸುರಿವ ಮಳೆಯಲ್ಲಿ ಕಾಯುತ್ತಿರುವ ಜನರನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಡಾ.ಅಜಯಸಿಂಗ್ ಮಾತನಾಡಿ, ಮಳೆ ಒಳ್ಳೆಯ ಸಂಕೇತ. ರೈತರಿಗೆ ಸುಭ ಸೂಚನೆ. ಇದರೊಂದಿಗೆ ರಾಜ್ಯವನ್ನಾಳಿದ ಭ್ರಷ್ಟ ಸರಕಾರವನ್ನು ಕಿತ್ತೊಗೆಯಲು ವೇದಿಕೆಯೂ ಆಗಲಿದೆ. ಇದೇ ವೇಳೆ ಬಿ.ಆರ್.ಪಾಟೀಲ, ಡಾ.ಶರಣಪ್ರಕಾಶ ಪಾಟೀಳ, ಕನೀಜ್ ಫಾತಿಮಾ, ಎಂ.ವೈ.ಪಾಟೀಲ, ಸುಭಾಷ್ ರಾಠೋಡ್, ತಿಪ್ಪಣ್ಣಪ್ಪ ಕಮಕನೂರು ಮಾತನಾಡಿದರು.
.jpeg)







