ಪ್ರಧಾನಿ ಮೋದಿ ಚುನಾವಣಾ ಪ್ರಚಾರ: ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ರಸ್ತೆ ವ್ಯವಸ್ಥೆ

ಬೆಂಗಳೂರು, ಎ. 28: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಎ.30ರಂದು ಕೋಲಾರ ಜಿಲ್ಲೆಗೆ ಆಗಮಿಸುತ್ತಿದ್ದು, ಬಿಜೆಪಿ ಸಮಾವೇಶದಲ್ಲಿ ಬೆಳಗ್ಗೆ 11:30ರಿಂದ 12:30ರ ವರಿಗೆ ಕೋಲಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75ರ ಪಕ್ಕದಲ್ಲಿರುವ ಕೆಂದಟ್ಟಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಹಲವಾರು ಕಡೆಯಿಂದ ಜನರು ವಾಹನಗಳಲ್ಲಿ ಬರುವುದರಿಂದ ವಾಹನ ದಟ್ಟಣೆ ಉಂಟಾಗಲಿದೆ. ಹೀಗಾಗಿ ಬೆಂಗಳೂರು ಕಡೆಯಿಂದ ಮುಳಬಾಗಿಲು ಕಡೆಗೆ ಬರುವ-ಹೋಗುವಂತಹ ವಾಹನಗಳಿಗೆ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಿದೆ.
ಬೆಂಗಳೂರು ಮುಖಾಂತರ ಬರುವಂತಹ ವಾಹನಗಳು ಬೆಳ್ಳೂರು ಗ್ರಾಮದ ಕಡೆಯಿಂದ ನರಸಾಪುರ ವೇಮಗಲ್, ಕೋಲಾರ ನಗರ, ಟಮಕ ಮಾರ್ಗವಾಗಿ ಮುಳಬಾಗಿಲಿಗೆ, ಮುಳಬಾಗಿಲು ಮುಖಾಂತರ ಬೆಂಗಳೂರಿಗೆ ಹೋಗುವಂತಹ ವಾಹನಗಳು ಕೋಲಾರ ನಗರದ ಹೊರವಲಯದ ಪವನ್ ಕಾಲೇಜು ಸರ್ವೀಸ್ ರಸ್ತೆ ಮುಖಾಂತರ ಅಮ್ಮೆರಹಳ್ಳಿ ಗ್ರಾಮ, ವಕ್ಕಲೇರಿ ಗ್ರಾಮ ದೊಡ್ಡಶಿವಾರದ ಕಡೆಯಿಂದ ನರಸಾಪುರ ಹೆದ್ದಾರಿ ಮಾರ್ಗವಾಗಿ ಹೋಗಲು ಸೂಚನೆ ನೀಡಲಾಗಿದೆ.
Next Story





