‘ಮೈ ಮಣಿಪಾಲ್’ ವರ್ಣ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಉಡುಪಿ, ಎ.28: ಪ್ರಕೃತಿಯೊಂದಿಗೆ ನಗರ ಭೂ ಸದೃಶಗಳನ್ನು ಸದಾ ಸ್ಮರಣೆಯಲ್ಲಿ ಇಡುವಂತೆ ಮಾಡುವ ಅದ್ಭುತ ಶಕ್ತಿ ಕಲಾವಿದರಲ್ಲಿದೆ. ಅದು ಹೆಚ್ಚು ಪಸರಿಸುವಂತಾಗಬೇಕೆಂದು ಮಾಹೆಯ ಸಹ ಕುಲಾಧಿಪತಿ ಡಾ.ಕಾರ್ಕಳ ಶರತ್ ಕುಮಾರ್ ಹೇಳಿದ್ದಾರೆ. ಉಡುಪಿ ಕುಂಜಿಬೆಟ್ಟುವಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾದ ಮಣಿಪಾಲ ಕೆಎಂಸಿಯ ಎಂಡಿ ವೈದ್ಯಕೀಯ ವಿದ್ಯಾರ್ಥಿ ಡಾ.ಸಾಲ್ವ್ಯ ಎಸ್. ರಾಜ್ ಅವರ ಮಣಿಪಾಲ ಕುರಿತ ‘ಮೈ ಮಣಿಪಾಲ್’ ಜಲವರ್ಣ ಕಲಾಕೃತಿ ಗಳ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ ‘ಮೈ ಮಣಿಪಾಲ’ ಸ್ಟಿಕ್ಕರ್ಗಳನ್ನು ಹಾಗೂ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ರವಿರಾಜ್ ಆಚಾರ್ಯ ವಿಶೇಷ ಕಾರ್ಡ್ಗಳನ್ನು ಅನಾವರಣಗೊಳಿಸಿದರು. ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ.ಕಿರಣ್ ಆಚಾರ್ಯ ಸ್ವಾಗತಿಸಿದರು. ಕಲಾವಿದೆ ಡಾ.ಸಾಲ್ವ್ಯ ಎಸ್.ರಾಜ್ ವಂದಿಸಿದರು. ಪ್ರದರ್ಶನವು ಎ.29ರಿಂದ ಮೇ 1ರವರೆಗೆ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಕಲಾಸಕ್ತರ ವೀಕ್ಷಣೆಗೆ ವ್ಯವಸ್ಥೆ ಗೊಳಿಸಲಾಗಿದೆ.
Next Story