ದೈಹಿಕ ಶ್ರಮದ ಕಾರ್ಮಿಕರಿಲ್ಲದಿದ್ದರೆ ಬೌದ್ಧಿಕ ಕೂಲಿಗಳ ಮಾನವ ಹಕ್ಕುಗಳೇ ನಾಶ: ಪ್ರೊ.ಫಣಿರಾಜ್
ಉಡುಪಿಯಲ್ಲಿ ಮೇ ದಿನಾಚರಣೆ ಪ್ರಯುಕ್ತ ಕಾರ್ಮಿಕರ ಮೆರವಣಿಗೆ

ಉಡುಪಿ: ಇವತ್ತು ದೈಹಿಕ ಶ್ರಮದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಂಡರೆ ಬೌದ್ಧಿಕ ಶ್ರಮಿಕರು ಜೀತದಾಳುಗಳಾಗಿ ದಿನಕ್ಕೆ 12-16 ಗಂಟೆಗಳ ಕಾಲ ಬಂಡವಾಳಶಾಹಿಗಳಿಗಾಗಿ ದುಡಿದು ಬದುಕುವ ಪರಿಸ್ಥಿತಿ ಬರುತ್ತದೆ. ದೈಹಿಕ ಶ್ರಮದ ಕಾರ್ಮಿಕರು ಇಲ್ಲದಿದ್ದರೆ ಬೌದ್ಧಿಕ ಕೂಲಿಗಳ ಮಾನವ ಹಕ್ಕುಗಳೇ ನಾಶವಾಗುತ್ತದೆ ಎಂದು ಚಿಂತಕ, ಪ್ರಾಧ್ಯಾಪಕ ಕೆ.ಫಣಿರಾಜ್ ಹೇಳಿದ್ದಾರೆ.
ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಿಐಟಿಯು ಉಡುಪಿ ಜಿಲ್ಲಾ ಇದರ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಸೋಮವಾರ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
1920ರಲ್ಲಿ ಭಾರತದಲ್ಲಿ ಪ್ರಥಮ ಮೇ ದಿನಾಚರಣೆಯನ್ನು ಆಚರಿಸ ಲಾಯಿತು. ಕೇರಳದಲ್ಲಿ ಜಾಗೃತ ಸಂಘಟನೆ ಯಿಂದಾಗಿ ಕ್ರೂರ ನಿಯಮದ ವಿರುದ್ಧ ಹೋರಾಡಲು ಸಾಧ್ಯವಾಯಿತು. ಕಾರ್ಮಿಕರ ವರ್ಗದ ಸಂಘಟಿತ ಹೋರಾ ಟದ ಚರಿತ್ರೆಯನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ. ಕೇರಳ ದಲ್ಲಿ ನಡೆದ ಕಾರ್ಮಿಕರ ಹೋರಾಟದಲ್ಲಿ ಕೇವಲ ಒಂದು ಧರ್ಮದವರು ಮಾತ್ರ ಇರಲಿಲ್ಲ. ಎಲ್ಲ ಧರ್ಮದವರು ಸೇರಿ ಐಕ್ಯ ಹೋರಾಟ ಮಾಡಿದ ಪರಿಣಾಮ ಕಾರ್ಮಿಕ ಸಂಘಟನೆ ಕಟ್ಟಲು ಸಾಧ್ಯವಾಯಿತು ಎಂದರು.
ಎರಡನೇ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಅಮೆರಿಕಾದಲ್ಲಿ ಬಂಡವಾಳ ಶಾಹಿಗಳು ಬಳಸಿದ ತಂತ್ರವನ್ನು ಇಂದಿನ ನಾಲ್ಕನೇ ಕೈಗಾರಿಕೆ ಕ್ರಾಂತಿಯ ಯುಗ ದಲ್ಲೂ ಭಾರತದಲ್ಲಿ ಮಾಡಲಾಗುತ್ತಿದೆ. ಕಾರ್ಮಿಕರನ್ನು ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ನರೆಂದು ಒಡೆಯುವ ತಂತ್ರಗಳನ್ನು ಮಾಡುತ್ತಿದ್ದಾರೆ. ಇಂದು ಭಾರತ ದಲ್ಲೂ 8 ಗಂಟೆಯ ಬದಲು 12ಗಂಟೆಗೆ ಕೆಲಸದ ಸಮಯವನ್ನು ಹೆಚ್ಚಿಸುವ ಕಾನೂನು ಮತ್ತೆ ಜಾರಿಗೆ ತರುವ ಹುನ್ನಾರ ಮಾಡಲಾ ಗುತ್ತಿದೆ ಎಂದು ಅವರು ಟೀಕಿಸಿದರು.
ಜೆಸಿಟಿಯುನ ಜಿಲ್ಲಾ ಸಂಚಾಲಕ ಕೆ.ಶಂಕರ್ ಮಾತನಾಡಿ, ಇಂದು ಕೇಂದ್ರ ಹಾಗೂ ರಾಜ್ಯ ಸರಕಾರ ಈ ದೇಶದ ಕಾರ್ಮಿಕ ಹಾಗೂ ದುಡಿಯುವ ವರ್ಗಕ್ಕೆ ಯಾವುದೇ ರೀತಿಯ ಪರಿಹಾರ ಘೋಷಣೆ ಮಾಡದೆ, ಬೆಲೆ ಏರಿಕೆ ತಡೆಗಟ್ಟದೆ, ಖಾಸಗೀಕರಣ ಕೈ ಬಿಡದೆ ಜನವಿರೋಧಿಯಂತೆ ವರ್ತಿಸುತ್ತಿದೆ. ಕೃಷಿ, ಕಾರ್ಮಿಕರ ಕಾನೂನು ಕಾಯಿದೆಗಳಿಗೆ ಬಂಡವಾಳಶಾಹಿ ಪರವಾದ ತಿದ್ದುಪಡಿ ತಂದು ಕಾರ್ಮಿಕರ ವರ್ಗಕ್ಕೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಮುಂದೆ ರೈತ ಹಾಗೂ ಕಾರ್ಮಿಕರ ಐಕ್ಯತೆ ಬಲಗೊಳಿಸುವ ಮೂಲಕ ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿ ಪಿತೂರಿ ವಿರುದ್ಧ ಹೋರಾಟ ಮಾಡಬೇಕಾಗಿದೆ. ಕಾರ್ಮಿಕರು ಹಾಗೂ ರೈತರು ಹೋರಾಟ ದಿಂದ ಪಡೆದುಕೊಂಡ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಆಳುವ ವರ್ಗ ಮಾಡುತ್ತಿದೆ. ನಮಗೆ ಪ್ರಜಾಸತ್ತತ್ಮಾಕವಾಗಿ ದೊರೆತ ಹಕ್ಕು ಹಾಗೂ ಪರಿಹಾರ ವನ್ನು ಕಿತ್ತುಕೊಳ್ಳಲು ನಾವು ಯಾವತ್ತೂ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್, ಎಐಟಿಯುಸಿ ಸಂಘದ ಮುಖಂಡರಾದ ಶಿವನಂದ, ಸಂಜಿವ ಶೇರಿಗಾರ, ಶಶಿಕಲಾ, ಸಿಐಟಿಯು ತಾಲೂಕು ಮುಖಂಡರಾದ ಉಮೇಶ್ ಕುಂದರ್, ನಳಿನಿ, ಮೊಹನ್, ವಿದ್ಯರಾಜ್, ಕಟ್ಟಡ ಸಂಘದ ಜಿಲ್ಲಾ ಅಧ್ಯಕ್ಷ ಶೇಖರ್ ಬಂಗೇರ, ಗಣೇಶ ನಾಯ್ಕ, ವಾಮನ ಪೂಜಾರಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಭಾರತಿ, ಗೀತಾ, ಬಿಸಿಯೂಟ ಸಂಘದ ಮುಖಂಡ ರಾದ ಸುನಂದ, ರೂಪ, ರತ್ನ, ಶ್ರೀಪತಿ ಆಚಾರ್ಯ, ಅಂಗಾರ, ಬುದ್ಯ, ಡೇರಿಕ್ ರೆಬೆಲ್ಲೋ, ಉಮೇಶ್, ಕವಿತಾ ಉಪಸ್ಥಿತರಿದ್ದರು.
ಸಿಐಟಿಯು ಉಡುಪಿ ಸಂಚಾಲಕ ಕವಿರಾಜ್ ಎಸ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಮಾ ನೌಕರರ ಸಂಘದ ಅಧ್ಯಕ್ಷ ಕೆ.ವಿಶ್ವನಾಥ ವಂದಿಸಿದರು. ಇದಕ್ಕೂ ಮೊದಲು ಉಡುಪಿ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ದಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿ ಅಜ್ಜರ ಕಾಡಿನಲ್ಲಿ ಸಮಾಪ್ತಿಗೊಂಡಿತು.