ಅಯೋಧ್ಯೆ: ನೇಣು ಬಿಗಿದು ಆರ್ಚಕ ಆತ್ಮಹತ್ಯೆ: ಫೇಸ್ ಬುಕ್ ನಲ್ಲಿ ಆತ್ಮಹತ್ಯೆ ವಿಡಿಯೋ ನೇರಪ್ರಸಾರ
ಪೊಲೀಸ್ ಕಿರುಕುಳದ ಆರೋಪ
![ಅಯೋಧ್ಯೆ: ನೇಣು ಬಿಗಿದು ಆರ್ಚಕ ಆತ್ಮಹತ್ಯೆ: ಫೇಸ್ ಬುಕ್ ನಲ್ಲಿ ಆತ್ಮಹತ್ಯೆ ವಿಡಿಯೋ ನೇರಪ್ರಸಾರ ಅಯೋಧ್ಯೆ: ನೇಣು ಬಿಗಿದು ಆರ್ಚಕ ಆತ್ಮಹತ್ಯೆ: ಫೇಸ್ ಬುಕ್ ನಲ್ಲಿ ಆತ್ಮಹತ್ಯೆ ವಿಡಿಯೋ ನೇರಪ್ರಸಾರ](https://www.varthabharati.in/sites/default/files/images/articles/2023/05/2/376027-1683049085.jpg)
ಹೊಸದಿಲ್ಲಿ, ಮೇ 2: ಉತ್ತರಪ್ರದೇಶದ ಅಯೋಧ್ಯಾದಲ್ಲಿ ಆರ್ಚಕರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರಸಿಂಹ ದೇವಾಲಯದ ಆರ್ಚಕ, 58 ವರ್ಷ ವಯಸ್ಸಿನ ರಾಮ್ ಶಂಕರ್ ದಾಸ್ ಫೇಸ್ ಬುಕ್ ನಲ್ಲಿ ತನ್ನ ಆತ್ಮಹತ್ಯೆಯನ್ನು ನೇರ ಪ್ರಸಾರ ಮಾಡಿದ್ದಾರೆ. ಪೊಲೀಸರ ಕಿರುಕುಳದಿಂದ ಬೇಸತ್ತು, ತಾನು ಸಾವಿಗೆ ಶರಣಾಗಿರುವುದಾಗಿ ಆತ ಹೇಳಿದ್ದಾರೆ.
ರಾಮಶಂಕರ ದಾಸ್ ಅವರು ನೇರಪ್ರಸಾರ ಮಾಡಿರುವ ವೀಡಿಯೊದಲ್ಲಿ ರಾಜ್ಗಂಜ್ ಪೊಲೀಸ್ ಹೊರಠಾಣೆಯ ಉಸ್ತುವಾರಿ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆದರೆ ಆತ್ಮಹತ್ಯೆಗೆ ಶರಣಾಗಿರುವ ಅರ್ಚಕ ತನ್ನ ವಿರುದ್ಧ ಹೊರಿಸಿರುವ ಆರೋಪಗಳನ್ನು ಕೋಟ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನೋಜ್ ಶರ್ಮಾ ತಳ್ಳಿಹಾಕಿದ್ದಾರೆ. ಆರ್ಚಕ ರಾಮಶಂಕರದಾಸ್ ಅವರು ಮಾದಕದ್ರವ್ಯ ವ್ಯಸನಿಯಾಗಿದ್ದಾರೆ ಮತ್ತು ಆತ ಡ್ರಗ್ಸ್ ಸೇವನೆಯ ಪ್ರಭಾವಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡದ್ದಾರೆಂದು ಅವರು ಹೇಳಿದ್ದಾರೆ.
ನರಸಿಂಹ ದೇವಾಲಯದ ಹಿರಿಯ ಮಹಂತ ರಾಮ ಶರಣ್ ದಾಸ್ವಾರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕೆಲವು ದಿನಗಳ ಹಿಂದೆ ಪೊಲೀಸರು ರಾಮಶಂಕರ್ ದಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದರು. 80 ವರ್ಷದ ರಾಮಶಂಕರ್ ದಾಸ್ ಅವರು ಈ ವರ್ಷದ ಜನವರಿಯಿಂದೀಚೆಗೆ ನಾಪತ್ತೆಯಾಗಿದ್ದರು.
ರಾಮಶಂಕರದಾಸ್ ಅವರ ಮೃತದೇಹವು ಸೋಮವಾರ ಅವರ ಕೊಠಡಿ ಹಾಗೂ ದೇವಾಲಯದ ಆವರಣದಲ್ಲಿ ನೇತಾಡುತ್ತಿರುವುದು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.