Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅದಾನಿ ಟೋಟಲ್‌ ಗ್ಯಾಸ್‌ ಆಡಿಟರ್‌...

ಅದಾನಿ ಟೋಟಲ್‌ ಗ್ಯಾಸ್‌ ಆಡಿಟರ್‌ ಹುದ್ದೆಗೆ ರಾಜೀನಾಮೆ ನೀಡಿದ ಶಾ ಧಂಢರಿಯಾ ಸಂಸ್ಥೆ

ಹಿಂಡೆನ್‌ಬರ್ಗ್‌ ವರದಿಯಲ್ಲಿ ಉಲ್ಲೇಖಗೊಂಡಿದ್ದ ಕಂಪೆನಿ

3 May 2023 6:54 PM IST
share
ಅದಾನಿ ಟೋಟಲ್‌ ಗ್ಯಾಸ್‌ ಆಡಿಟರ್‌ ಹುದ್ದೆಗೆ ರಾಜೀನಾಮೆ ನೀಡಿದ ಶಾ ಧಂಢರಿಯಾ ಸಂಸ್ಥೆ
ಹಿಂಡೆನ್‌ಬರ್ಗ್‌ ವರದಿಯಲ್ಲಿ ಉಲ್ಲೇಖಗೊಂಡಿದ್ದ ಕಂಪೆನಿ

ಹೊಸದಿಲ್ಲಿ: ಗೌತಮ್‌ ಅದಾನಿ ಒಡೆತನದ ಅದಾನಿ ಸಂಸ್ಥೆ ನಡೆಸಿದೆಯೆನ್ನಲಾದ  ಅವ್ಯವಹಾರಗಳ ಕುರಿತು ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ಸ್ಫೋಟಕ ವರದಿಯಲ್ಲಿ ಉಲ್ಲೇಖಗೊಂಡಿದ್ದ ಲೆಕ್ಕಪರಿಶೋಧನಾ ಸಂಸ್ಥೆ ಶಾ ಧಂಢರಿಯಾ & ಕೋ, ಅದಾನಿ ಟೋಟಲ್‌ ಗ್ಯಾಸ್‌ನ ಸ್ಟೆಟ್ಯುಟರಿ ಆಡಿಟರ್‌ ಹುದ್ದೆಗೆ ರಾಜೀನಾಮೆ ನೀಡಿದೆ.

ಅದಾನಿ ಸಮೂಹದ ಹೆಚ್ಚಿನ ಸಂಸ್ಥೆಗಳ ಲೆಕ್ಕಪರಿಶೋಧನೆ ನಡೆಸುವ ಶಾ ಧಂಢರಿಯಾ & ಕೋ ಮತ್ತು ಧರ್ಮೇಶ್‌ ಪಾರಿಖ್‌ & ಕೋ ಸಂಸ್ಥೆಗಳು ಪರಸ್ಪರ ನಂಟು ಹೊಂದಿವೆ ಎಂದು ಅಕ್ಟೋಬರ್‌ 2022ರಲ್ಲಿ ಮಾರ್ನಿಂಗ್‌ ಕಾಂಟೆಕ್ಸ್ಟ್‌ ವರದಿ ಮಾಡಿತ್ತಲ್ಲದೆ ಸಂಸ್ಥೆಯ ಕಾರ್ಪೊರೇಟ್‌ ಗವರ್ನೆನ್ಸ್‌ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.

ಮುಕೇಶ್‌ ಅಂಬಾನಿ ಅವರ ರಿಲಯನ್ಸ್‌ ಇಂಡಸ್ಟ್ರೀಸ್‌ ತನ್ನ ಲೆಕ್ಕಪರಿಶೋಧಕರಿಗೆ ನೀಡುವ ರೂ. 84 ಕೋಟಿಗೆ ಹೋಲಿಸಿದಾಗ ಅದಾನಿ ಸಂಸ್ಥೆ ತನ್ನ ಲೆಕ್ಕಪರಿಶೋಧಕರಿಗೆ ರೂ. 7 ಕೋಟಿಗಿಂತ ಸ್ವಲ್ಪ ಹೆಚ್ಚು ನೀಡುತ್ತಿದೆ ಎಂದೂ ವರದಿಯಾಗಿತ್ತು.

ಜನವರಿಯಲ್ಲಿ ಬಿಡುಗಡೆಗೊಂಡ ಹಿಂಡೆನ್‌ಬರ್ಗ್‌ ವರದಿಯಲ್ಲಿ ಕೂಡ ಅದಾನಿ ಸಮೂಹ ಸಂಸ್ಥೆಗಳನ್ನು ಹೋಲಿಸಿದಾಗ ಅವುಗಳ ಲೆಕ್ಕಪರಿಶೋಧನೆ ನಡೆಸುವ ಸಂಸ್ಥೆಗಳ ಗಾತ್ರ ಮತ್ತು ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತು.

ಅದಾನಿ ಎಂಟರ್‌ಪ್ರೈಸಸ್‌ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಸಂಸ್ಥೆಗಳ ಸ್ವತಂತ್ರ ಆಡಿಟರ್‌ ಶಾ ಧಂಢರಿಯಾ ಎಂಬ ಪುಟ್ಟ ಸಂಸ್ಥೆ ಎಂದೂ ವರದಿ ಹೇಳಿತ್ತಲ್ಲದೆ ಈ ಸಂಸ್ಥೆಗೆ ಪ್ರಸ್ತುತ ವೆಬ್‌ಸೈಟ್‌ ಇಲ್ಲ ಹಾಗೂ ಅದರ ಹಿನ್ನೆಲೆ ಪರಿಶೀಲಿಸಿದಾಗ 4 ಪಾಲುದಾರರು ಹಾಗೂ 11 ಉದ್ಯೋಗಿಗಳಿರುವುದು ಹಾಗೂ ಕಚೇರಿಗೆ ಮಾಸಿಕ ರೂ. 32,000 ಬಾಡಿಗೆ ನೀಡುತ್ತಿದೆ ಎಂದು ವರದಿ ಹೇಳಿತ್ತು.

ಅದಾನಿ ಸಂಸ್ಥೆಯ ವಾರ್ಷಿಕ ಲೆಕ್ಕಪರಿಶೋಧನೆ ವರದಿಗಳಿಗೆ ಸಹಿ ಹಾಕಿದ ಶಾ ದಂಢರಿಯಾ ಆಡಿಟರ್‌ಗಳ ವಯಸ್ಸು 24 ಹಾಗೂ 23 ಎಂದೂ ಹಿಂಡೆನ್‌ಬರ್ಗ್‌ ವರದಿ ಹೇಳಿತ್ತು.

ವೃತ್ತಿಪರವಾಗಿ ಇತರ ನಿಯೋಜನೆಗಳಲ್ಲಿ ವ್ಯಸ್ತವಾಗಿರುವುದರಿಂದ ಹೆಚ್ಚಿನ ಒತ್ತಡದಿಂದಾಗಿ ಅದಾನಿ ಟೋಟಲ್‌ ಗ್ಯಾಸ್‌ ನಿಂದ ರಾಜೀನಾಮೆ ನೀಡಿರುವುದಾಗಿ ಶಾ ಧಂಢರಿಯಾ ಹೇಳಿದೆ. ಶಾ ಧಂಢರಿಯಾ ಬದಲು ಈಗ ಅದಾನಿ ಸಂಸ್ಥೆ ತನ್ನ ಅದಾನಿ ಟೋಟಲ್‌ ಗ್ಯಾಸ್‌ಗಾಗಿ ವಾಲ್ಟರ್‌ ಚಂದಿಯೋಕ್‌ & ಕೋ ಅನ್ನು ಲೆಕ್ಕಪರಿಶೋಧಕರಾಗಿ ನೇಮಿಸಿದೆ.

ಶಾ ದಂಢರಿಯಾ ಸಂಸ್ಥೆ ಅದಾನಿ ಎಂಟರ್‌ಪ್ರೈಸಸ್‌ ಲೆಕ್ಕಪರಿಶೋಧನೆಯಿಂದಲೂ ಕೆಳಗಿಳಿಯುವುದೇ ಎಂಬುದು ತಿಳಿದು ಬಂದಿಲ್ಲ.

share
Next Story
X