ಬೆಂಗಳೂರು: ಪ್ರಧಾನಿ ಮೋದಿ ಉದ್ಘಾಟಿಸಿದ್ದ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 2 ರಲ್ಲಿ ಮಳೆ ನೀರು ಸೋರಿಕೆ!
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೆಲ ತಿಂಗಳ ಹಿಂದೆ ಲೋಕಾರ್ಪಣೆ ಮಾಡಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಆಗಮನ ದ್ವಾರ ಪ್ರದೇಶದ ಹೊರಗೆ ಮಳೆ ನೀರು ಸೋರಿಕೆ ಕಂಡುಬಂದಿದೆ. ಇದರಿಂದ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ನೈರ್ಮಲ್ಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ ಘಟನೆ ವರದಿಯಾಗಿದೆ.
ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು, ಅಂದಾಜು 5 ಸಾವಿರ ಕೋಟಿ ವೆಚ್ಚದ ಟರ್ಮಿನಲ್ - 2 ಅನ್ನು ಲೋಕಾಪರ್ಣೆ ಮಾಡಿದ್ದರು. ಟರ್ಮಿನಲ್ 2 ಆಗಮನದ ಸ್ಥಳದಲ್ಲಿ ಮಳೆನೀರು ನಿಲ್ಲುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ವಿಪಕ್ಷ ಕಾಂಗ್ರೆಸ್, "ಸೋರುತಿಹುದು ಕರ್ನಾಟಕದ ಘನತೆಯ ಮಾಳಿಗೆ, ಬಿಜೆಪಿಯ ಭ್ರಷ್ಟಾಚಾರದಿಂದ" ಬಿಜೆಪಿಯ 40% ಕಮಿಷನ್ ಲೂಟಿ ಬೆಂಗಳೂರಿನ ಮರ್ಯಾದೆಯನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಿದೆ. ಮೋದಿ ಉದ್ಘಾಟಿಸಿದ ಕೆಲವೇ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರ ಮಾಳಿಗೆ ಸೋರಿ ನೀರು ನಿಂತಿದೆ'' ಎಂದು ಟೀಕಿಸಿದೆ,
This is a video not from rain forests of Amazon but Terminal 2 of Kempegowda International Airport of Bengaluru, Karnataka.
— Supriya Shrinate (@SupriyaShrinate) May 3, 2023
First rain has the airport terminal built at a cost of ₹5000 crore submerged under water
This is the New Infrastructure of PM @narendramodi Ji’s… https://t.co/FrRjEgqvNF pic.twitter.com/wKZgvlYNMS
'@BJP4Karnataka ಬರೋಬ್ಬರಿ 5 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿ, ಕಳೆದ ನವೆಂಬರ್ ನಲ್ಲಿ @narendramodi ಉದ್ಘಾಟಿಸಿದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಿನ್ನೆಯ ಸಣ್ಣಮಳೆಗೆ ಜಲಾವೃತವಾಗಿದೆ. 1/3 pic.twitter.com/aKGLqgDrKd
— Janata Dal Secular (@JanataDal_S) May 4, 2023
"ಸೋರುತಿಹುದು ಕರ್ನಾಟಕದ ಘನತೆಯ ಮಾಳಿಗೆ, ಬಿಜೆಪಿಯ ಭ್ರಷ್ಟಾಚಾರದಿಂದ"
— Karnataka Congress (@INCKarnataka) May 4, 2023
ಬಿಜೆಪಿಯ 40% ಕಮಿಷನ್ ಲೂಟಿ ಬೆಂಗಳೂರಿನ ಮರ್ಯಾದೆಯನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಿದೆ.
ಮೋದಿ ಉದ್ಘಾಟಿಸಿದ ಕೆಲವೇ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರ ಮಾಳಿಗೆ ಸೋರಿ ನೀರು ನಿಂತಿದೆ.@narendramodi ಅವರೇ, ಈ ಬಗ್ಗೆ ಮಾತಾಡುವ ತಾಕತ್ತಿದೆಯೇ? pic.twitter.com/fOc45TEaqv
ಇದು ಮೊದಿಯಿಂದ ಉದ್ಘಾಟನೆಯಾದ @BLRAirport ಬೆಂಗಳೂರು ಇನ್ಟರ್ ನ್ಯಾಷನಲ್ ಏರ್ ಪೊರ್ಟ್ ಟರ್ಮಿನಲ್-2. ಸ್ಥಿತಿ.. ಇದು 40% ಅಲ್ಲ 80% ಸರ್ಕಾರ.pic.twitter.com/oyVDb4QhwX
— ಬಿಜೆಪಿ ಸೋಲಿಸಿ. (@Gaddapa) May 3, 2023