ಶರದ್ ಪವಾರ್ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು: ಎನ್ಸಿಪಿ ಸಮಿತಿಯಿಂದ ಸರ್ವಾನುಮತದ ನಿರ್ಣಯ
ಮುಂಬೈ: ಶರದ್ ಪವಾರ್(Sharad Pawar) ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಸಮಿತಿಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತು ಎಂದು NDTV ಶುಕ್ರವಾರ ವರದಿ ಮಾಡಿದೆ.
ಇಂದು ಮುಂಬೈನಲ್ಲಿ ಪಕ್ಷದ ಉನ್ನತ ನಾಯಕರು ನಡೆಸಿದ ಸಭೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವಂತೆ ಶರದ್ ಪವಾರ್ ಅವರನ್ನು ಒತ್ತಾಯಿಸಲಾಯಿತು.
82 ವರ್ಷದ ಶರದ್ ಪವಾರ್ ಅವರು 1999 ರಲ್ಲಿ ಸ್ಥಾಪಿಸಿದ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲು ಬಯಸುವುದಾಗಿ ಸ್ಪಷ್ಟಪಡಿಸಿದ್ದರೂ, ಎನ್ಸಿಪಿ ಸಮಿತಿಯು ಶರದ್ ಪವಾರ್ ಅವರ ರಾಜೀನಾಮೆ ನಿರ್ಧಾರವನ್ನು ತಿರಸ್ಕರಿಸಿತು.
ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಹಾಗೂ ಸೋದರಳಿಯ ಅಜಿತ್ ಪವಾರ್ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಹಿರಿಯ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ನೇತೃತ್ವದ ಸಮಿತಿಯು ಉತ್ತರಾಧಿಕಾರದ ಯಾವುದೇ ಮಾತುಕತೆಗೆ ಅಡ್ಡಿಪಡಿಸಿತು.
3 ದಿನಗಳ ಹಿಂದೆ ಶರದ್ ಪವಾರ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ ನಂತರ ಸುಪ್ರಿಯಾ ಸುಳೆ, ಪವಾರ್ ಅವರ ಸ್ಥಾನವನ್ನು ತುಂಬುತ್ತಾರೆ. ಅಜಿತ್ ಪವಾರ್ ಅವರು "ಮಹಾರಾಷ್ಟ್ರದಲ್ಲಿ ಪಕ್ಷದ ಮುಖ" ಆಗಿರುತ್ತಾರೆ ಎಂದು ವರದಿಯಾಗಿತ್ತು
ಆ ದಿನ ಶರದ್ ಪವಾರ್ ಹೇಳಿದ ಮಾತಿನಿಂದ ನಮಗೆಲ್ಲರಿಗೂ ಆಘಾತವಾಗಿತ್ತು. ಆ ಕಾರ್ಯಕ್ರಮದಲ್ಲಿ ಶರದ್ ಪವಾರ್ ಅವರು ಅಂತಹ ನಿರ್ಧಾರವನ್ನು ಪ್ರಕಟಿಸುತ್ತಾರೆ ಎಂದು ನಮಗೆ ತಿಳಿದಿರಲಿಲ್ಲ. ಅವರ ಘೋಷಣೆಯ ನಂತರ ಏನಾಯಿತು, ಜನರು ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಲು ಪ್ರಯತ್ನಿಸಿದರು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ಕಾರ್ಯಕ್ರಮದ ನಂತರವೂ ಪಕ್ಷದ ಹಲವು ಹಿರಿಯ ನಾಯಕರು ಶರದ್ ಪವಾರ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದರು. ದೇಶ, ರಾಜ್ಯ ಮತ್ತು ಪಕ್ಷವು ನಿಮ್ಮನ್ನು ಮುಂದುವರಿಸಬೇಕೆಂದು ಬಯಸುತ್ತಿದೆ. ನೀವು ಮಾತ್ರ ನಮ್ಮನ್ನು ಮುನ್ನಡೆಸಬಹುದು. ಶರದ್ ಪವಾರ್ ದೇಶದ ಅತ್ಯಂತ ಎತ್ತರದ ಮತ್ತು ಗೌರವಾನ್ವಿತ ನಾಯಕ ಎಂದು ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.