ಮಣಿಪುರ: ಮನೆಯಿಂದ ಹೊರಗೆ ಎಳೆದೊಯ್ದು ಐ-ಟಿ ಇಲಾಖೆ ಅಧಿಕಾರಿಯ ಹತ್ಯೆ
![ಮಣಿಪುರ: ಮನೆಯಿಂದ ಹೊರಗೆ ಎಳೆದೊಯ್ದು ಐ-ಟಿ ಇಲಾಖೆ ಅಧಿಕಾರಿಯ ಹತ್ಯೆ ಮಣಿಪುರ: ಮನೆಯಿಂದ ಹೊರಗೆ ಎಳೆದೊಯ್ದು ಐ-ಟಿ ಇಲಾಖೆ ಅಧಿಕಾರಿಯ ಹತ್ಯೆ](https://www.varthabharati.in/sites/default/files/images/articles/2023/05/6/376431-1683351839.jpg)
ಇಂಫಾಲ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವೇಳೆ ಇಂಫಾಲ್ನಲ್ಲಿ ನಿಯೋಜನೆಗೊಂಡಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರನ್ನು ಅವರ ಅಧಿಕೃತ ನಿವಾಸದಿಂದ ಹೊರಗೆ "ಎಳೆದುಹಾಕಲಾಯಿತು ಹಾಗೂ ಅವರನ್ನು ಹತ್ಯೆಗೈಯ್ಯಲಾಗಿದೆ ಎಂದು ಭಾರತೀಯ ಕಂದಾಯ ಸೇವೆ (IRS) ಅಸೋಸಿಯೇಷನ್ ಶುಕ್ರವಾರ ತಿಳಿಸಿದೆ.
ಈ ಕುರಿತು ಟ್ವೀಟಿಸಿರುವ ಅಸೋಸಿಯೇಶನ್ "ಇಂಫಾಲ್ನಲ್ಲಿನ ತೆರಿಗೆ ಸಹಾಯಕರಾದ ಲೆಟ್ಮಿಂಥಾಂಗ್ ಹಾಕಿಪ್ ಅವರ ಸಾವಿಗೆ ಕಾರಣವಾದ ಹಿಂಸಾಚಾರದ ಭೀಕರ ಕೃತ್ಯವನ್ನ ನಾವು ಬಲವಾಗಿ ಖಂಡಿಸುತ್ತೇವೆ ಎಂದಿದೆ.
ಕರ್ತವ್ಯದಲ್ಲಿರುವ ಅಮಾಯಕ ಸಾರ್ವಜನಿಕ ಸೇವಕನ ಹತ್ಯೆಯನ್ನು ಯಾವುದೇ ಕಾರಣ ಅಥವಾ ಸಿದ್ಧಾಂತ ಸಮರ್ಥಿಸುವುದಿಲ್ಲ. ಈ ಕಷ್ಟದ ಸಮಯದಲ್ಲಿ ನಮ್ಮ ಯೋಚನೆಗಳು ಅವರ ಕುಟುಂಬದೊಂದಿಗೆ ಇವೆ ”ಎಂದು ಅಸೋಸಿಯೇಶನ್ ಹೇಳಿದೆ.
IRS Association strongly condemns the dastardly act of violence resulting in the death of Sh. Letminthang Haokip, Tax Assistant in Imphal. No cause or ideology can justify the killing of an innocent public servant on duty. Our thoughts are with his family in this difficult hour. pic.twitter.com/MQgeCDO95O
— IRS Association (@IRSAssociation) May 5, 2023