ಲೈಂಗಿಕ ಕಿರುಕುಳ ಪ್ರಕರಣ: ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಹರ್ಯಾಣ ಸಚಿವ ನಿರಾಕರಣೆ
ಚಂಡಿಗಢ, ಮೇ 6: ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ನೀಡಲು ಹರ್ಯಾಣದ ಸಚಿವ ಸಂದೀಪ್ ಸಿಂಗ್ ನಿರಾಕರಿಸಿದ್ದಾರೆ.
ಮಹಿಳಾ ಜೂನಿಯರ್ ಕೋಚ್ ಓರ್ವರು ದಾಖಲಿಸಿದ ಲೈಂಗಿಕ ಕಿರುಕುಳದ ದೂರಿನ ಆಧಾರದಲ್ಲಿ ಕಳೆದ ವರ್ಷ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಸಂದೀಪ್ ಸಿಂಗ್ನ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ನೀಡುವಂತೆ ಕೋರಿ ಚಂಡಿಗಢ ಪೊಲೀಸರು ಇಲ್ಲಿನ ಸ್ಥಳೀಯ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಅರ್ಜಿಗೆ ಸಚಿವರು ಈ ವಿವರವಾದ ಪ್ರತಿಕ್ರಿಯೆ ಸಲ್ಲಿಸಿದ್ದಾರೆ.
ತಾನು ಸಮಗ್ರ ವಿಚಾರಣೆಗೆ ಒಳಗಾಗಿದ್ದೇನೆ. ಎಲ್ಲ ಪ್ರಶ್ನೆಗಳಿಗೆ ಹಲವು ಬಾರಿ ಉತ್ತರ ನೀಡಿದ್ದೇನೆ. ಆದುದರಿಂದ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಬಯಸಲಾರೆ ಎಂದು ಸಿಂಗ್ ಹೇಳಿದ್ದಾರೆ. ಸಂತ್ರಸ್ತೆಯ ಹೇಳಿಕೆಗೆ ಸಿಂಗ್ ಅವರ ಪ್ರತಿಪಾದನೆ ವಿರೋಧಾಭಾಸದಿಂದ ಕೂಡಿರುವುದರಿಂದ ಸತ್ಯವನ್ನು ಹೊರ ತರಲು ಸಿಂಗ್ ಅವರ ಸುಳ್ಳು ಪತ್ತೆ ಪರೀಕ್ಷೆಯ ಅಗತ್ಯತೆ ಇದೆ ಎಂದು ಚಂಡಿಗಢ ಪೊಲೀಸ್ನ ವಿಶೇಷ ತನಿಖಾ ತಂಡ (ಎಸ್ಐಟಿ) ಅರ್ಜಿಯಲ್ಲಿ ಪ್ರತಿಪಾದಿಸಿತ್ತು.