Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಾತಾಳಕ್ಕಿಳಿದ ಮತದ ಮೌಲ್ಯ

ಪಾತಾಳಕ್ಕಿಳಿದ ಮತದ ಮೌಲ್ಯ

ಪ್ರೊ.ಶಿವರಾಮಯ್ಯ ನಾಗರಭಾವಿ, ಬೆಂಗಳೂರುಪ್ರೊ.ಶಿವರಾಮಯ್ಯ ನಾಗರಭಾವಿ, ಬೆಂಗಳೂರು8 May 2023 6:49 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share

ಮಾನ್ಯರೇ,

1. ಮುಳಬಾಗಿಲಿನ ನಮ್ಮ ಸ್ನೇಹಿತರೊಬ್ಬರು ಹೇಳುತ್ತಾರೆ: (ಪಕ್ಷದ ಅಭ್ಯರ್ಥಿ ಹೆಸರು ಬೇಡ) ಸಾರ್ ಅವರ ಏಜೆಂಟ್ ಮಾಂಸಾಹಾರಿ ಕುಟುಂಬಗಳನ್ನು ತಲಾಸ್ ಮಾಡಿ ವೋಟಿನ ಸಂಖ್ಯೆಯ ಲೆಕ್ಕದ ಮೇಲೆ ಆ ಕ್ಷೇತ್ರದ ಮನೆಮನೆಗೆ 3ರಿಂದ 5 ಕೆ.ಜಿ. ತೂಕದ ಕೋಳಿಗಳನ್ನು ಸಪ್ಲೈ ಮಾಡ್ತಿದ್ದಾರೆ.

2. ಶಿರಾ ಕ್ಷೇತ್ರಕ್ಕೆ ಸೇರಿದ ಇನಕನಹಳ್ಳಿಯಿಂದ ನಮ್ಮ ಮೊಮ್ಮಗಳು ಹೇಳ್ತಾಳೆ: ನಮ್ಮ ಮನೆಗೆ ತಂದು ಕೊಟ್ಟ ಕೋಳಿಯನ್ನು ನನ್ನ ತಮ್ಮ (ಶಾಲಾ ಬಾಲಕ) ಆ ಏಜೆಂಟ್ ಬಾಗಿಲಿಗೆ ಎಸೆದು ಬಂದ.

3. ನಮ್ಮ ಸ್ನೇಹಿತರೊಬ್ಬರು ಮುಳಬಾಗಿಲಿನ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರು. ಚುನಾವಣಾ ಕರ್ತವ್ಯದ ಮೇಲಿರುವ ಅವರಿಗೆ ತಾಲೂಕು ಆಫೀಸಿನಲ್ಲಿ ಮೊದಲೇ ವೋಟು ಮಾಡುವ ವ್ಯವಸ್ಥೆ ಇದೆ. ಉಪಾಧ್ಯಾಯ ಸಂಘದ ಕಾರ್ಯಕರ್ತರೊಬ್ಬರು ಫೋನ್ ಮಾಡಿ: ನಿಮಗೆ ಇಂತಹ ಪಕ್ಷದ ಏಜೆಂಟ್ ಹಣ ಕೊಟ್ಟಿದ್ದಾರೆ, ನಿಮಗೆ ಹೇಗೆ ತಲುಪಿಸುವುದು ಎಂದು ಕೇಳುತ್ತಾರೆ. ಅದಕ್ಕಿವರು ‘‘ಅದಕ್ಕ್ಯಾಕೆ ಹಣ? ವೋಟು ಮಾಡುವುದು ನನ್ನ ಕರ್ತವ್ಯ. ಅದಕ್ಕೆ ದುಡ್ಡು ಏನು ಮಾಡಾಕೆ? ಆ ಉಸಾಬರಿ ನಿಮಗ್ಯಾಕೆ?’’ ಎನ್ನುತ್ತಾರೆ. ಆ ಕಡೆಯಿಂದ ಅವರು ‘‘ಅರೆ ಸ್ವಾಮಿ; ನೀವೊಬ್ಬರು ಸತ್ಯ ಹರಿಶ್ಚಂದ್ರರಾದರೆ ದೇಶ ಉದ್ಧಾರ ಆಗಲ್ಲ! ತಿನ್ನೋರು ತಿಂತಾರೆ! ನಿಮ್ಮ ಪಾಲಿನ ಹಣ ತಕ್ಕೊಂಡು ಯಾರಿಗಾದರೂ ಬಡಬಗ್ಗರಿಗೆ ಕೊಡ್ರಿ’’ ಎಂದು ಉಪದೇಶ ಮಾಡ್ತಾರೆ. ಹೀಗೆ ಕ್ಯಾಷ್ ಆ್ಯಂಡ್ ಕೈಂಡ್ ವ್ಯವಹಾರ ನಡೆಯುವುದು ಸಾಮಾನ್ಯ. ಇನ್ನೂ ಭಯಂಕರ ಬಹಿರಂಗ ಗುಟ್ಟು ಏನೆಂದರೆ ಪ್ರಸಕ್ತ ಊರು ಕೇರಿ ಗಲ್ಲಿಗಲ್ಲಿಗಳಲ್ಲಿ ಸಂಚಾರ ಮಾಡಿ ನೋಡಿದರೆ ಒಂದು ವೋಟಿಗೆ ಒಂದು ಸಾವಿರದಿಂದ ಐದು ಸಾವಿರ ರೂ. ವರೆಗೆ ಮಾರಾಟವಾಗುತ್ತಿದೆ.

4. ಇಷ್ಟಾದಾಗ್ಯೂ ಬೆಂಗಳೂರಿನ ನಾಗರಭಾವಿಯಲ್ಲಿ ಒಬ್ಬರು ಮತದಾನ ಒಂದು ಪವಿತ್ರ ರಾಷ್ಟ್ರೀಯ ಕರ್ತವ್ಯ, ನಿಮ್ಮ ವೋಟನ್ನು ತಪ್ಪದೇ ಚಲಾಯಿಸಿ ಎಂದು ಕರಪತ್ರವನ್ನು ಮುದ್ರಿಸಿ ಮನೆಮನೆಗೂ ಹಂಚುತ್ತಿದ್ದಾರೆ;

ಮೇಲ್ಕಂಡ ಪ್ರಸಂಗಗಳನ್ನು ಅವರ ಗಮನಕ್ಕೆ ತಂದಾಗ ಅವರು ಹೇಳಿದ್ದು: ‘‘ಆದರೂ ನಮ್ಮ ಪ್ರಯತ್ನ ನಿಲ್ಲಿಸಬಾರದಷ್ಟೆ. ಮುಂದಿನ ದಿನಗಳಲ್ಲಾದರೂ ನಮ್ಮ ಪ್ರಜಾಪ್ರಭುತ್ವ ಗಟ್ಟಿಗೊಳ್ಳಬಹುದಲ್ಲವೇ’’ ಎನ್ನುತ್ತಾರೆ. ನಾನು ‘‘ಕಳೆದ 75 ವರ್ಷಗಳಿಂದ ನಾವು ಕಟ್ಟಿದ ಸ್ವಾತಂತ್ರ್ಯದ ಸ್ವರ್ಗ ಹೀಗೆ ಇಂಚಿಂಚೇ ಕರಗಿ ಕುಸಿಯುತ್ತಿದೆ, ಆದರೂ ನಿಮ್ಮ ಆಶಾವಾದಕ್ಕೆ ಧನ್ಯವಾದಗಳು’’ ಎಂದೆ. ಉಳಿದ ಚುನಾವಣಾ ಆಮಿಷ ಪ್ರಣಾಳಿಕೆಗಳ ಬಗ್ಗೆ ಇನ್ನು ಹೇಳುವುದೇನಿದೆ? ಈಗ ಪ್ರಜಾತಂತ್ರವೆಂಬ ಪಶುವಿನ ನಾಲ್ಕು ಕಾಲುಗಳಲ್ಲಿ ಒಂದಾದ ಮಾಧ್ಯಮದ ಕಾಲು ಮುರಿದು ಕುಂಟು ಬಿದ್ದಿದೆ. ಸ್ವತಂತ್ರ ಸಂಸ್ಥೆಗಳೆಲ್ಲ ಆಳುವ ಪಕ್ಷದ ಅಡಿದಾವರೆಯಲ್ಲಿವೆ. ಪ್ರಜಾಪ್ರಭುತ್ವದಲ್ಲಿ ಪ್ರಭುವೇ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು ಒದ್ದಾಡುತ್ತಿದ್ದಾನೆ. ಕೊಡುವವನ, ಪಡೆಯುವವನ ತಡೆದು ನಿಲ್ಲಿಸುವವರಾರು? ಇಂತಲ್ಲಿ ಜನತಂತ್ರದ ಪಾವಿತ್ರ್ಯತೆಯನ್ನು ನಾವು ಕಾಪಾಡಿಕೊಳ್ಳುವುದು ಹೇಗೆ? ವೋಟಿನ ಬೆಲೆ ಗಗನಕ್ಕೇರುತ್ತಿದೆ; ಮತದ ಮೌಲ್ಯ ಪಾತಾಳಕ್ಕಿಳಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ವಿಶ್ವಗುರುವಿನ ಸ್ಥಾನ ಮಾನಕ್ಕೆ ಅರ್ಹವಾಗುವುದು ಹೇಗೆ? ನಮ್ಮ ಜನತಂತ್ರ ಎನ್ನುವುದು ಕೇವಲ ಅಣಕ ನಾಟಕ ಎಂದು ಹೇಳದೆ ವಿಧಿಯಿಲ್ಲ.
 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಪ್ರೊ.ಶಿವರಾಮಯ್ಯ ನಾಗರಭಾವಿ, ಬೆಂಗಳೂರು
ಪ್ರೊ.ಶಿವರಾಮಯ್ಯ ನಾಗರಭಾವಿ, ಬೆಂಗಳೂರು
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X