ಟೆಂಪೊ ಢಿಕ್ಕಿ: ಬೈಕ್ ಸವಾರ ಮೃತ್ಯು

ಕಾಪು, ಮೇ 9: ಟೆಂಪೊವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕಟಪಾಡಿ ಸಮೀಪದ ಏಣಗುಡ್ಡೆ ಗ್ರಾಮದ ಥಂಡರ್ ಬೇ ಹಾಲ್ ಎದುರು ನಡೆದಿದೆ.
ಮೃತರನ್ನು ಬೈಕ್ ಸವಾರ ಶ್ರೀನಿವಾಸ ರಾವ್ (50) ಎಂದು ಗುರುತಿಸಲಾಗಿದೆ. ಕಟಪಾಡಿ ಕಡೆಯಿಂದ ಶಂಕರಪುರ ಕಡೆಗೆ ಬರುತ್ತಿದ್ದ ಟೆಂಪೊ ಎದುರಿನಿಂದ ಅಂದರೆ ಶಂಕರಪುರ ಕಡೆಯಿಂದ ಕಟಪಾಡಿ ಕಡೆಗೆ ಪುರೋಹಿತ ಕೆಲಸಕ್ಕಾಗಿ ಹೋಗುತ್ತಿದ್ದ ಶ್ರೀನಿವಾಸ ರಾವ್ ಅವರ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





