ಮಂಗಳೂರು: ಪ್ರಾಚ್ಯ ವಸ್ತುಗಳ ಪ್ರದರ್ಶನ

ಮಂಗಳೂರು: ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಅಂಗವಾಗಿ ನಗರದ ಬಿಜೈನಲ್ಲಿರುವ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದಲ್ಲಿ ಗುರುವಾರ ಪ್ರಾಚ್ಯ ವಸ್ತುಗಳ ಪ್ರದರ್ಶನ ನಡೆಯಿತು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ದ.ಕ. ಜಿಲ್ಲಾ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಂಘದಿಂದ ನಡೆದ ಪ್ರದರ್ಶನವನ್ನು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು.
ವಿವಿಧ ದೇಶಗಳ ಕರೆನ್ಸಿ ಹಾಗೂ ವಿವಿಧ ಬಗೆಯ ಉಪಕರಣಗಳು, ಕಿಟೆಲ್ರ ಕನ್ನಡ-ಇಂಗ್ಲಿಷ್ ಡಿಕ್ಷನರಿ ಸಹಿತ ಹಲವು ಮಹತ್ವದ ವಸ್ತುಗಳು ಪ್ರದರ್ಶನದಲ್ಲಿದ್ದವು.
ಈ ಸಂದರ್ಭ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಂಘದ ಸದಸ್ಯರಾದ ಬೈಕಾಡಿ ಶ್ರೀನಿವಾಸ ರಾವ್, ವೆಂಕಟೇಶ್ ಪ್ರಭು, ಸಂತೋಷ್ ಪ್ರಭು,ಶಿವ ಕುಮಾರ, ಪ್ರಭಾಕರ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದ ಮೇಲ್ವಿಚಾರಕಿ ಧನಲಕ್ಷ್ಮಿ ಅಮ್ಮಾಳ್ ಉಪಸ್ಥಿತರಿದ್ದರು.
Next Story





