ಕರ್ನಾಟಕದಲ್ಲಿ ಬಿಜೆಪಿ ವೈಫಲ್ಯ ಬಚ್ಚಿಡಲು 2 ಸಾವಿರ ರೂ.ನೋಟು ನಿಷೇಧದ ತಂತ್ರ: ಸ್ಟಾಲಿನ್
ಚೆನ್ನೈ: ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವುದಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕರ್ನಾಟಕದಲ್ಲಿ ಕಮಲ ಪಕ್ಷದ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನ ಇದಾಗಿದೆ ಎಂದು ಟೀಕಿಸಿದ್ದಾರೆ.
‘‘ 500 ಸಂದೇಹಗಳು, ಸಾವಿರ ರಹಸ್ಯಗಳು, 2 ಸಾವಿರ ಪ್ರಮಾದಗಳು!. ಕರ್ನಾಟಕದಲ್ಲಿ ಚುನಾವಣಾ ವೈಫಲ್ಯವನ್ನು ಮುಚ್ಚಿಹಾಕುವ ಒಂದು ತಂತ್ರ ಇದಾಗಿದೆ’’ ಎಂದು ಅವರು 2000 ನೋಟ್ ಅಮಾನ್ಯೀಕರಣ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದಾರೆ.
2016ರಲ್ಲಿ ಮೋದಿ ಸರಕಾರ ನಡೆಸಿದ ನಗದು ಅಮಾನ್ಯತೆಯಲ್ಲಿ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಹಿಂತೆಗೆದುಕೊಂಡಿರುವುದು ಹಾಗೂ ಇದೀಗ 2 ಸಾವಿರ ರೂ. ಮುಖಬೆಲೆಯ ನೋಟಿನ ನಿಷೇಧವನ್ನು ಉಲ್ಲೇಖಿಸಿದ್ದಾರೆ.
Next Story