ಒಡಿಶಾ ರೈಲು ಅಪಘಾತ: ಭಾರತ-ಆಸ್ಟ್ರೇಲಿಯ ಕ್ರಿಕೆಟ್ ಆಟಗಾರರಿಂದ ಸಂತ್ರಸ್ತರಿಗೆ ಒಂದು ನಿಮಿಷ ಮೌನಾಚರಣೆ

ಲಂಡನ್: ಓವಲ್ನಲ್ಲಿ ಬುಧವಾರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಆರಂಭಕ್ಕೆ ಮೊದಲು ಭಾರತ ಮತ್ತು ಆಸ್ಟ್ರೇಲಿಯಾದ ಆಟಗಾರರು ಒಡಿಶಾ ರೈಲು ದುರಂತದ ಸಂತ್ರಸ್ತರಿಗಾಗಿ ತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಒಂದು ನಿಮಿಷ ಮೌನ ಆಚರಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಸಂತಾಪ ಸೂಚಿಸಿತು.
ಲಂಡನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ನಂತರ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಹೊರಬಂದರು.
ಕಳೆದ ಶುಕ್ರವಾರ ಬಾಲಸೋರ್ನಲ್ಲಿ ನಡೆದ ಟ್ರಿಪಲ್ ರೈಲು ಅಪಘಾತದಲ್ಲಿ ಬಲಿಯಾದವರನ್ನು ಸ್ಮರಿಸಲು ಒಂದು ಕ್ಷಣ ಮೌನ ಆಚರಿಸಲಾಗುವುದು ಎಂದು ಪಿಎ ಸ್ಟಿಸ್ಟಮ್ ಘೋಷಿಸಿತು
The Indian Cricket Team will observe a moment of silence in memory of the victims of the Odisha train tragedy ahead of the start of play on Day 1 of the ICC World Test Championship final at The Oval.
— BCCI (@BCCI) June 7, 2023
The team mourns the deaths and offers its deepest condolences to the families… pic.twitter.com/mS04eWz2Ym