Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ಅತ್ಯಾಧುನಿಕ ಶೈಲಿಯ...

ಮಂಗಳೂರು: ಅತ್ಯಾಧುನಿಕ ಶೈಲಿಯ ಅಪಾರ್ಟ್‌ಮೆಂಟ್ ಲ್ಯಾಂಡ್ ಟ್ರೇಡ್ಸ್ ‘ನಕ್ಷತ್ರ’ ಲೋಕಾರ್ಪಣೆ

8 Jun 2023 4:47 PM IST
share
ಮಂಗಳೂರು: ಅತ್ಯಾಧುನಿಕ ಶೈಲಿಯ ಅಪಾರ್ಟ್‌ಮೆಂಟ್ ಲ್ಯಾಂಡ್ ಟ್ರೇಡ್ಸ್ ‘ನಕ್ಷತ್ರ’ ಲೋಕಾರ್ಪಣೆ

ಮಂಗಳೂರು, ಜೂ.8: ಇಲ್ಲಿನ ಗಾಂಧಿನಗರದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಶೈಲಿಯ ಅಪಾರ್ಟ್‌ಮೆಂಟ್ ಲ್ಯಾಂಡ್ ಟ್ರೇಡ್ಸ್ ‘ನಕ್ಷತ್ರ ’ ಗುರುವಾರ ಲೋಕಾರ್ಪಣೆಗೊಂಡಿತು.

15 ಅಂತಸ್ತುಗಳ ಮತ್ತು 52 ಫ್ಲಾಟ್‌ಗಳನ್ನು ಒಳಗೊಂಡ ನೂತನ ಅಪಾರ್ಟ್‌ಮೆಂಟನ್ನು ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳೂರು ನಗರದಲ್ಲಿ 1978-80ರ ಹೊತ್ತಿಗೆ ಫ್ಲಾಟ್ ವ್ಯವಸ್ಥೆಗಳು ಇರಲಿಲ್ಲ. ಈಗ ಮಂಗಳೂರಿನಲ್ಲಿ ಮಾತ್ರವಲ್ಲ ಎಲ್ಲ ತಾಲೂಕುಗಳಲ್ಲೂ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ. ಯಾವುದೇ ಉದ್ಯಮ ಯಶಸ್ವಿಯಾಗಿ ಬೆಳೆಯಲು ಶ್ರಮ, ಆನೇಕ ಜನರ ಸಹಕಾರ ಅಗತ್ಯ. ಶ್ರೀನಾಥ್ ಹೆಬ್ಬಾರ್ ಕಠಿಣ ಶ್ರಮದ ಮೂಲಕ ತಮ್ಮ ಉದ್ಯಮದಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕಟ್ಟಡದ ವಿನ್ಯಾಸಗೊಳಿಸಿದ ಆರ್ಕಿಟೆಕ್ಟ್ ಪೀಟರ್ ಮಸ್ಕರೇನಸ್, ನಿರ್ಮಾಣ ಕಾರ್ಯ ಪೂರೈಸಿದ ಎಂಫಾರ್ ಕನ್‌ಸ್ಟ್ರಕ್ಷನ್‌ನ ಸಿಇಒ ಫಯಾಝ್ ಖಮಲುದ್ದೀನ್, ಶಶೀಂದ್ರ ರೈ, ಯೋಜನಾ ನಿರ್ವಹಣಾ ಸಮಾಲೋಚಕರಾದ ಗೋಕುಲ್‌ರಾಜ್, ಕಟ್ಟಡದ ನಿರ್ಮಾಣದಲ್ಲಿ ಸಹಕಾರ ನೀಡಿದ ಅನಿಲ್ ಹೆಗ್ಡೆ, ಕೇಶವ ಅಮಿನ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಮಾತನಾಡಿ, ‘ಕೊಡುಗೈ ದಾನಿಯಾಗಿರುವ ಲ್ಯಾಂಡ್ ಟ್ರೇಡ್ಸ್ ಮಾಲಕ ಶ್ರೀನಾಥ್ ಹೆಬ್ಬಾರ್ ಅವರು ಮಂಗಳೂರು ನಗರದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ನಾವು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ಮಂಗಳೂರು ನಗರದಲ್ಲಿ ಬಡವರಿಗೆ ಕೈಗೆಟುಕುವ ದರದಲ್ಲಿ ಫ್ಲಾಟ್‌ಗಳು ದೊರೆಯುವಂತಾಗಲು ಶ್ರೀನಾಥ್ ಹೆಬ್ಬಾರ್ ಗಮನ ನೀಡುವಂತೆ ಮೇಯರ್ ಜಯಾನಂದ್ ಮನವಿ ಮಾಡಿದರು.

ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೆಜರ್ ರವಿಚಂದ್ರನ್ ಎಸ್ , ಮಣ್ಣಗುಡ್ಡ ವಾರ್ಡ್‌ನ ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್ಯ, ಹೊಸದಿಗಂತ ದೈನಿಕದ ಸಂಪಾದಕ ಮತ್ತು ಸಿಇಒ ಪಿಎಸ್. ಪ್ರಕಾಶ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ಲ್ಯಾಂಡ್ ಟ್ರೇಡ್ಸ್‌ನ ಮಾಲಕ .ಕೆ.ಶ್ರೀನಾಥ್ ಹೆಬ್ಬಾರ್ ಸ್ವಾಗತಿಸಿದರು. ಸಿಇಒ ರಮೀತ್ ಸಿದ್ದಕಟ್ಟೆ ವಂದಿಸಿದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಕಟ್ಟಡದ ವೈಶಿಷ್ಟ್ಯ: ಗಾಂಧಿನಗರದ 8ನೇ ಕ್ರಾಸ್ ರೋಡ್‌ನಲ್ಲಿರುವ ‘‘ಲ್ಯಾಂಡ್ ಟ್ರೇಡ್ಸ್ ನಕ್ಷತ್ರ’’  ಲ್ಯಾಂಡ್ ಟ್ರೇಡ್ಸ್‌ನ 41 ನೇ ಯೋಜನೆಯಾಗಿದೆ. 1,292 ಚ.ಅಡಿಯಿಂದ 2,526 ಚ.ಅಡಿಗಳವರೆಗಿನ ಫ್ಲ್ಯಾಟ್‌ಗಳು ಇಲ್ಲಿವೆ. ಈ ಕಟ್ಟಡವು ಶೇ.100 ರಷ್ಟು ವಾಸ್ತು ಪೂರ್ಣವಾಗಿದೆ. ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿಯು (ರೇರಾ) ಅಂಗೀಕಾರ ನೀಡಿದೆ.

ಅತ್ಯಾಧುನಿಕ ವಿಸಿಟರ್ಸ್‌ ಲಾಬಿ, ಮಿತ್ಸುಭಿಷಿ ಹೈಸ್ಪೀಡ್ ಲಿಫ್ಟ್ ಇದೆ. ರೂಫ್‌ಟಾಪ್ ಟೆರೇಸ್ ಸಾಮುದಾಯಿಕ ಸ್ವರೂಪದ್ದಾಗಿದ್ದು, ನಿವಾಸಿಗಳ ಸಮಾರಂಭ, ಶುಭಕಾರ್ಯಗಳನ್ನು ಮಾಡಬಹುದಾಗಿದೆ. ಕಟ್ಟಡದ ಕೆಳ ಅಂತಸ್ತಿನಲ್ಲಿ ಮೂರು ಹಂತದ ಕಾರು ಪಾರ್ಕಿಂಗ್ ಸೌಲಭ್ಯವಿದೆ. ಹೆವಿ ಡ್ಯೂಟಿ ಬ್ಯಾಕ್‌ ಅಪ್ ಪವರ್‌ ಜನರೇಟರ್, ಸಿಸಿಟಿವಿ, ಆಕ್ಸೆಸ್ ಕಂಟ್ರೋಲ್ ಸಿಸ್ಟಮ್, ಪರಿವೀಕ್ಷಣೆ, ಅಗ್ನಿಶಾಮಕ ಸೌಲಭ್ಯ, ವಿಡಿಯೋ ಡೋರ್ ಫೋನ್ ವ್ಯವಸ್ಥೆಗಳಿವೆ.

ಜಲ ಸಂರಕ್ಷಣೆ, ಧಾರಾಳ ನೀರು ಪೂರೈಕೆಗೆ ಮಳೆ ನೀರು ಕೊಯ್ಲು, ಬಿಸಿ ನೀರಿಗೆ ಸೌರ ಶಕ್ತಿಯ ಬಳಕೆ, ತ್ಯಾಜ್ಯ ಸಂಸ್ಕರಣೆ, ಅತ್ಯಾಧುನಿಕ ಇಲೆಕ್ಟ್ರಿಕ್ ಆರ್ಗಾನಿಕ್ ತ್ಯಾಜ್ಯ ಸಂಸ್ಕರಣೆ ಮುಂತಾದ ಸೌಲಭ್ಯಗಳ ಮೂಲಕ ಕಟ್ಟಡವು ಪರಿಸರ ಹಸಿರು ಸಹ್ಯವಾಗಿರುತ್ತದೆ.

ಲ್ಯಾಂಡ್ ಟ್ರೇಡ್ಸ್‌ನ ಪ್ರತಿಷ್ಠೆಯ ಯೋಜನೆಗಳಾದ ಸಾಲಿಟೇರ್ (ಹ್ಯಾಟ್‌ಹಿಲ್), ಎಮೆರಾಲ್ಡ್ ಬೇ (ಸುರತ್ಕಲ್‌ನಲ್ಲಿ ಬೀಚ್ ಪ್ರಾಪರ್ಟಿ), ಮೌರಿಷ್ಕ ಪ್ಯಾಲೇಸ್ (ಕದ್ರಿ ಕಂಬ್ಳ), ಸಾಯಿ ಗ್ರ್ಯಾಂಡ್ಯೂರ್ (ಜೈಲ್ ರೋಡ್), ರೂಪಾಲಿ ಮತ್ತು ಅಟ್ಲಾಂಟಿಸ್ (ಬೆಂದೂರ್‌ವೆಲ್), ಇನ್‌ಸಿಗ್ನಿಯಾ (ವೆಲೆನ್ಸಿಯಾ), ಸಾಯಿಪ್ರೇಮ್ (ಮಣ್ಣಗುಡ್ಡ) ಮುಂತಾದ ಯೋಜನೆಗಳ ಸಾಲಿಗೆ ಈಗ ‘‘ನಕ್ಷತ್ರ’’ ಸೇರ್ಪಡೆಯಾಗಿದೆ. ಲ್ಯಾಂಡ್ ಟ್ರೇಡ್ಸ್‌ನ ಪ್ರಸ್ತುತ ಅಲ್ಟ್ರಾ ಲಕ್ಸುರಿ ಹೈರೈಸ್ ಯೋಜನೆಗಳಾದ ಅಲ್ಟೂರ (ಬೆಂದೂರ್‌ವೆಲ್), ಶಿವಭಾಗ್ (ಕದ್ರಿ, ಶಿವಭಾಗ್), ಉರ್ವ ಮಾರಿಗುಡಿ ರಸ್ತೆಯಲ್ಲಿ ಅದಿರಾ ಪ್ರೀಮಿಯಂ ಅಪಾರ್ಟ್‌ಮೆಂಟ್, ಉಳ್ಳಾಲದಲ್ಲಿ ಕಾಮತ್ ಗಾರ್ಡನ್ ರೆಸಿಡೆನ್ಸಿಯಲ್ ಬಡಾವಣೆ ನಿರ್ಮಿಸುತ್ತಿದೆ ಎಂದು ಶ್ರೀನಾಥ್ ಹೆಬ್ಬಾರ್ ತಿಳಿಸಿದ್ದಾರೆ.

ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್‌ ಆ್ಯಂಡ್ ಡೆವೆಲಪರ್ಸ್‌ ಸಂಸ್ಥೆಯನ್ನು 1992 ರ ಅಕ್ಟೋಬರ್‌ನಲ್ಲಿ ಮಂಗಳೂರಿನಲ್ಲಿ.ಕೆ.ಶ್ರೀನಾಥ್ ಹೆಬ್ಬಾರ್ ಸ್ಥಾಪಿಸಿದರು. ಸಂಸ್ಥೆಯು ಐಎಸ್‌ಒ 9000:2015, ಕ್ರಿಸಿಲ್‌ನಿಂದ ಡಿಎ2 ಮಾನ್ಯತೆ ಹೊಂದಿದೆ. ಸಂಸ್ಥೆಯ ಪೂರ್ಣಗೊಂಡ ಬಹುತೇಕ ಯೋಜನೆಗಳು ಕ್ರಿಸಿಲ್ ಮಾನ್ಯತೆ ಪಡೆದಿದೆ.

share
Next Story
X