Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹುಡುಗಿಯರು ಸಣ್ಣ ವಯಸ್ಸಿನಲ್ಲಿ...

ಹುಡುಗಿಯರು ಸಣ್ಣ ವಯಸ್ಸಿನಲ್ಲಿ ವಿವಾಹವಾಗಿ, 17 ವರ್ಷದಲ್ಲೇ ಮಗು ಹೊಂದುತ್ತಿದ್ದರು ಎಂದ ಹೈಕೋರ್ಟ್‌ ನ್ಯಾಯಾಧೀಶ

ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ ಅಪೀಲು ವಿಚಾರಣೆ ವೇಳೆ ಮನುಸ್ಮೃತಿ ಉಲ್ಲೇಖಿಸಿದ ನ್ಯಾಯಾಲಯ

9 Jun 2023 6:47 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಹುಡುಗಿಯರು ಸಣ್ಣ ವಯಸ್ಸಿನಲ್ಲಿ ವಿವಾಹವಾಗಿ, 17 ವರ್ಷದಲ್ಲೇ ಮಗು ಹೊಂದುತ್ತಿದ್ದರು ಎಂದ ಹೈಕೋರ್ಟ್‌ ನ್ಯಾಯಾಧೀಶ
ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ ಅಪೀಲು ವಿಚಾರಣೆ ವೇಳೆ ಮನುಸ್ಮೃತಿ ಉಲ್ಲೇಖಿಸಿದ ನ್ಯಾಯಾಲಯ

ಅಹ್ಮದಾಬಾದ್:‌ ಒಂದು ಕಾಲದಲ್ಲಿ ಹುಡುಗಿಯರು ಸಣ್ಣ ವಯಸ್ಸಿನಲ್ಲಿ ವಿವಾಹವಾಗುವುದು ಹಾಗೂ 17 ವರ್ಷ ಆಗುವುದಕ್ಕಿಂತ ಮುಂಚೆ ಮಗುವನ್ನು ಪಡೆಯುವುದು ಸಾಮಾನ್ಯವಾಗಿತ್ತು, ಎಂದು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿ ಸಮೀರ್‌ ದವೆ  ಹೇಳಿದ್ದಾರೆ. ಗರ್ಭಪಾತ ಮಾಡಿಸಲು ಅನುಮತಿ ಕೋರಿ ಅಪ್ರಾಪ್ತೆ ಅತ್ಯಾಚಾರ ಸಂತ್ರಸ್ತೆಯೊಬ್ಬಳ ಅರ್ಜಿಯನ್ನು ವಿಚಾರಣೆ ನಡೆಸುವ ಸಂದರ್ಭ ಅವರು ಹಾಗೆ ಹೇಳಿದ್ದಾರೆ.

ಬಾಲಕಿ ಮತ್ತಾಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಆರೋಗ್ಯವಂತವಾಗಿದ್ದರೆ  ಈ ಅರ್ಜಿಯನ್ನು ತಾವು ಅನುಮತಿಸದೇ ಇರಬಹುದು ಎಂಬ ಸುಳಿವನ್ನು ನೀಡಿದ ನ್ಯಾಯಮೂರ್ತಿ ಸಮೀರ್‌ ದವೆ ತಾವು  ಮನುಸ್ಮೃತಿಯನ್ನೂ ಓದಿರುವುದಾಗಿ ಹೇಳಿದರು.

ಅತ್ಯಾಚಾರ ಸಂತ್ರಸ್ತೆ 16 ವರ್ಷ ಹಾಗೂ 11 ತಿಂಗಳು ವಯಸ್ಸಿನವಳಾಗಿದ್ದು ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ಸಂತ್ರಸ್ತೆಯ ತಂದೆ ಪುತ್ರಿಗೆ ಅಬಾರ್ಷನ್‌ ಮಾಡಿಸಲು ಕೋರ್ಟ್‌ ಅನುಮತಿ ಕೋರಿದ್ದರು. ಗರ್ಭ ಧರಿಸಿದ ನಂತರದ 24 ವಾರ ಅವಧಿಯಲ್ಲಿ ಗರ್ಭಪಾತ ನಡೆಸಬಹುದಾದರೆ ನಂತರ ಗರ್ಭಪಾತಕ್ಕೆ ಕೋರ್ಟ್‌ ಅನುಮತಿ ಬೇಕಿರುವುದರಿಂದ ಅವರು ನ್ಯಾಯಾಲಯದ ಕದ ತಟ್ಟಿದ್ದರು.

ಹುಡುಗಿಯ ವಯಸ್ಸನ್ನು ಪರಿಗಣಿಸಿ ಈ ವಿಚಾರದ ಶೀಘ್ರ ವಿಚಾರಣೆ ನಡೆಸಬೇಕೆಂದೂ ಅರ್ಜಿದಾರರ ಪರ ವಕೀಲರು ಬುಧವಾರ ಹೇಳಿದರು.

“ನಾವು 21ನೇ ಶತಮಾನದಲ್ಲಿರುವುದರಿಂದ ಇಷ್ಟೊಂದು ಆತಂಕವಿದೆ, ನಿಮ್ಮ ತಾಯಿ ಅಥವಾ ಮುತ್ತಜ್ಜಿ ಬಳಿ ಕೇಳಿ. ಹದಿನಾಲ್ಕು-ಹದಿನೈದು ಗರಿಷ್ಠ ವಯಸ್ಸಾಗಿತ್ತು (ವಿವಾಹಕ್ಕೆ) ಮತ್ತು ಹುಡುಗಿಯರು ತಮ್ಮ ಮೊದಲ ಮಗುವನ್ನು 17 ವರ್ಷಕ್ಕಿಂತ ಮೊದಲೇ ಪಡೆಯುತ್ತಿದ್ದರು. ಮತ್ತು ಹುಡುಗರಿಂತ  ಮುಂಚಿತವಾಗಿ ಹುಡುಗಿಯರು ಪ್ರಬುದ್ಧರಾಗುತ್ತಾರೆ. ನೀವು ಓದಿರದೇ ಇರಬಹುದು, ಆದರೆ ಒಮ್ಮೆ ಮನುಸ್ಮೃತಿಯನ್ನು ನೀವು ಓದಬೇಕು,” ಎಂದು ಅವರು ಹೇಳಿದರು.

ಆಕೆಯ ಪ್ರಸವದ ನಿರೀಕ್ಷಿತ ದಿನಾಂಕ ಆಗಸ್ಟ್‌ 16 ಆಗಿರುವುದರಿಂದ ಈ ಕುರಿತು ತಮ್ಮ ಚೇಂಬರಿನಲ್ಲಿ ವೈದ್ಯರ ಜೊತೆ ಸಮಾಲೋಚಿಸಿರುವುದಾಗಿ ನ್ಯಾಯಾಧೀಶರು ವಕೀಲರಿಗೆ ತಿಳಿಸಿದರು.

“ಹೊಟ್ಟೆಯಲ್ಲಿರುವ ಮಗು ಅಥವಾ ಹುಡುಗಿಗೆ ಗಂಭೀರ ಸಮಸ್ಯೆಯಿದ್ದರೆ ಕೋರ್ಟ್‌ ಅನುಮತಿಸಬಹುದಾಗಿತ್ತು (ಗರ್ಭಪಾತಕ್ಕೆ). ಆದರೆ ಇಬ್ಬರಿಗೂ ಯಾವುಧೇ ಸಮಸ್ಯೆಯಿಲದೇ ಇದ್ದಲ್ಲಿ ಇಂತಹ ಆದೇಶ ಹೊರಡಿಸುವುದು ಕಷ್ಟ,” ಎಂದು ಹೇಳಿದರು.

ಹುಡುಗಿಯನ್ನು ವೈದ್ಯರ ಒಂದು ತಂಡ ಪರೀಕ್ಷಿಸಿ ಆಕೆಗೆ ಗರ್ಭಪಾತ ನಡೆಸುವುದು ಸೂಕ್ತವೇ ಎಂದು ತಿಳಿಯಲು ಕ್ರಮಕೈಗೊಳ್ಳುವಂತೆ ರಾಜಕೋಟ್‌ ಸಿವಿಲ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಕೋರ್ಟ್‌ ಆದೇಶಿಸಿದೆ.

ಆಕೆಯ ಒಸ್ಸಿಫಿಕೇಶನ್‌ ಪರೀಕ್ಷೆ ನಡೆಸಿ ಆಕೆಯ ಮಾನಸಿಕ ಪರಿಸ್ಥಿತಿಯನ್ನೂ ಪರಿಶೀಲಿಸಬೇಕು ಹಾಗೂ ಮುಂದಿನ ವಿಚಾರಣೆಯ ದಿನಾಂಕವಾದ ಜೂನ್‌ 15ರೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

“ಇಬ್ಬರೂ ಆರೋಗ್ಯವಂತರಾಗಿದ್ದರೆ ಅನುಮತಿ ದೊರೆಯದು. ಆಕೆ ಮಗುವಿಗೆ ಜನ್ಮ ನೀಡಿದರೆ ಆ ಮಗುವನ್ನು ಯಾರು ನೋಡುತ್ತಾರೆ. ಇಂತಹ ಮಕ್ಕಳಿಗೆ ಯಾವುದೇ ಸರ್ಕಾರಿ ಯೋಜನೆಗಳಿವೆಯೇ ಎಂದು ಪರಿಶೀಲಿಸುತ್ತೇನೆ. ಯಾರಾದರೂ ಮಗುವನ್ನು ದತ್ತು ಪಡೆಯಬಹುದೇ ಎಂದೂ ಪರಿಶೀಲಿಸಿ,” ಎಂದು ಹುಡುಗಿಯ ಪರ ವಕೀಲರಿಗೆ ನ್ಯಾಯಾಧೀಶರು ಸಲಹೆ ನೀಡಿದ್ದಾರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X