Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. 'ಅಂಬೇಡ್ಕರ್ ವಾದದ ಆಚರಣೆ' - ಒಂದು...

'ಅಂಬೇಡ್ಕರ್ ವಾದದ ಆಚರಣೆ' - ಒಂದು ಅವಲೋಕನ

ದಮ್ಮಪ್ರಿಯ ಬೆಂಗಳೂರುದಮ್ಮಪ್ರಿಯ ಬೆಂಗಳೂರು11 Jun 2023 12:05 AM IST
share
ಅಂಬೇಡ್ಕರ್ ವಾದದ ಆಚರಣೆ - ಒಂದು ಅವಲೋಕನ

ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಅರಿತವರಿಗಿಂತ ಅವರ ಸಿದ್ಧಾಂತಗಳನ್ನು ಬಂಡವಾಳ ಮಾಡಿಕೊಂಡು ಸುಖವುಂಡವರೇ ಹೆಚ್ಚು. ಅವರ ಹೆಸರು ಹೇಳುತ್ತಿದ್ದಂತೆ ಎಲ್ಲಿಲ್ಲದ ಅಭಿಮಾನ ಕೆಲವರಲ್ಲಿ ಉಕ್ಕಿ ಹರಿದು ಬಿಡುತ್ತದೆ. ಆದರೆ ಬಾಬಾಸಾಹೇಬರ ಮೂಲ ಆಶಯಗಳು ಮತ್ತು ಸಿದ್ಧಾಂತಗಳು ಏನು ಎಂದು ಒಮ್ಮೆ ಕೇಳಿದರೆ ಇಂತಹವರು ಸುಮ್ಮನಾಗಿಬಿಡುತ್ತಾರೆ. ತಕ್ಷಣ ಕೆಲಸಕ್ಕೆ ಬಾರದ ಚರ್ಚೆಗಳಿಗೆ ಇಳಿದು ಬಾಬಾಸಾಹೇಬರ ಮೂಲ ಆಶಯಗಳಿಗೆ ತಿಲಾಂಜಲಿಯಿಡುವ ಚಿಂತಕರೇ ನಮ್ಮ ಮಧ್ಯೆ ಇರುತ್ತಾರೆ. ಅಂತಹ ನೆಪ ಮಾತ್ರದ ಚಿಂತಕರಿಗೆ ಬಾಬಾಸಾಹೇಬರ ನಿಜಸ್ವರೂಪ, ಅವರ ವಿಚಾರಧಾರೆಯನ್ನು ತಿಳಿಸುವ ಒಂದು ಪ್ರಯತ್ನವೇ ಡಾ. ಸಿ.ಜಿ. ಲಕ್ಷ್ಮೀಪತಿಯವರ 'ಅಂಬೇಡ್ಕರ್ ವಾದದ ಆಚರಣೆ' ಎಂದರೆ ತಪ್ಪಾಗಲಾರದು. ಈ ಪುಸ್ತಕದಲ್ಲಿನ ಅಧ್ಯಾಯಗಳು ಅಂಬೇಡ್ಕರ್ ವಿಚಾರಗಳನ್ನು ಕುರಿತು ಬರೆದ ಬರಹಗಳು ಎನ್ನುವುದಕ್ಕಿಂತ, ಅವರ ಅನುಯಾಯಿಗಳು ಬಾಬಾಸಾಹೇಬರನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವು ದಾಗಿದೆ. ಅಲ್ಲದೆ ಅವರ ಸಿದ್ಧಾಂತಗಳು ಮತ್ತು ಚಿಂತನೆಗಳು ಇಂದು ಯಾವ ದಿಕ್ಕಿಗೆ ಸಾಗಿದೆ ಎಂದು ಮನವರಿಕೆ ಮಾಡುವುದಾಗಿದೆ. ಬಾಬಾಸಾಹೇಬರ ವಿಚಾರಗಳು ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿರದೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಾ ಸರ್ವಕಾಲಕ್ಕೂ ಅಳವಡಿಕೆ ಯೋಗ್ಯ ಎಂದು ತಿಳಿಸಿಕೊಡುವುದಾಗಿದೆ. ಇದು ಕೇವಲ ಒಂದು ಪುಸ್ತಕ ಎನ್ನುವುದಕ್ಕಿಂತ ಮಹಾನಾಯಕನ ಸಿದ್ಧಾಂತಗಳನ್ನು ಅರಿತುಕೊಳ್ಳುವ ಒಂದು ಪೀಠಿಕೆ, ಮುನ್ನುಡಿಯಾಗಿದೆ. ಬಾಬಾಸಾಹೇಬರನ್ನು ಅರಿಯದವರಿಗೊಂದು ಸಣ್ಣ ಕೈಪಿಡಿ ಎಂದರೂ ತಪ್ಪಾಗಲಾರದು.

ಅಂಬೇಡ್ಕರ್ ವಾದ ಎನ್ನುವುದೇ ಜಾಗತಿಕ ಮಟ್ಟಕ್ಕೆ ಒಂದು ಬೌದ್ಧಿಕ ಶಕ್ತಿ. ಶೋಷಣೆಯಿಂದ ಬಿಡುಗಡೆ, ವಿಭಿನ್ನ ಆಯಾಮಗಳ ಚಿಂತನಾ ಕ್ರಮ, ಹೊಸ ಆಲೋಚನೆಗಳ ವಿಭಿನ್ನ ಕ್ರಮಗಳು ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ. ಬಾಬಾಸಾಹೇಬರೇ ಹೇಳುವಂತೆ ಅಧಿಕಾರವೆಂಬುದು ಶೋಷಿತರ ವಿಮೋಚನೆಯ ಮೂಲ ಮಂತ್ರ ಆಗಬೇಕು ಎನ್ನುವ ಮಾತು ಬಹಳ ಸತ್ಯವಾದದ್ದು. ಇದು ಸನಾತನಿಗಳಿಗೆ ಅರ್ಥವಾದಂತೆ ಅಂಬೇಡ್ಕರ್ ವಾದಿಗಳಿಗೆ ಅರ್ಥವಾಗದಾಯಿತು. ಸನಾತನಿಗಳು ಅಂಬೇಡ್ಕರ್ ವಾದವನ್ನು ಉಂಡು ಅಧಿಕಾರದ ಗದ್ದುಗೆ ಏರಿದರು. ನಿಮ್ನವರ್ಗಗಳನ್ನು ಅಧಿಕಾರದಿಂದ ದೂರವಿಡುವ ಹುನ್ನಾರವಾಗಿ ''ರಾಜಕೀಯ ಅಧಿಕಾರವೆಂಬುದು ಪಾಪಿಗಳ ಪರಮೋಚ್ಚ ಹೀನಾಯ ಸ್ಥಿತಿಯ ಕಟ್ಟಕಡೆಯ ಹಂತವಾಗಿದೆ'' ಎಂದರು. ಇದರ ಮೂಲಕ ಶೇ. 85ರಷ್ಟು ಜನರನ್ನು ರಾಜಕೀಯ ಅಧಿಕಾರದಿಂದ ದೂರವಿಡಲಾಯಿತು. ಮನುವಾದಿಗಳು ಮಾಡಿದ ಕುತಂತ್ರವು ಜನ ಸಾಮಾನ್ಯರನ್ನು ಮಾನಸಿಕ ಗುಲಾಮಗಿರಿಗೆ ದೂಡುತ್ತಾ ಇಂದಿಗೂ ಅಸಮಾನತೆಯಲ್ಲೇ ಬದುಕುವ ವ್ಯವಸ್ಥೆ ನಿರ್ಮಾಣವಿದೆ ಎಂದು ಲಕ್ಷ್ಮೀಪತಿ ಎಚ್ಚರಿಸಿದ್ದಾರೆ. ಸಾಮಾಜಿಕ ಅಸಮಾನತೆಯ ಬೇರು ಜಾತಿ ವ್ಯವಸ್ಥೆಯಲ್ಲಿದೆ, ಜಾತಿವ್ಯವಸ್ಥೆಯ ಬೇರು ವರ್ಣಾಶ್ರಮ ಧರ್ಮದಲ್ಲಿದೆ, ವರ್ಣಾಶ್ರಮದ ಬೇರು ಮನುಧರ್ಮಶಾಸ್ತ್ರದಲ್ಲಿದೆ, ಮನುಧರ್ಮ ಶಾಸ್ತ್ರದ ಬೇರು ಬ್ರಾಹ್ಮಣ ವಾದದಲ್ಲಿದೆ, ಬ್ರಾಹ್ಮಣ ವಾದದ ಬೇರು ರಾಜಕೀಯ ಅಧಿಕಾರದಲ್ಲಿದೆ.

ಇಂತಹ ರಾಜಕೀಯ ಅಧಿಕಾರವೆಂಬುದು ಶೋಷಿತ ಜನಾಂಗಕ್ಕೆ ಸಿಕ್ಕಿದ್ದೇ ಆದರೆ ಸಮಾಜದಲ್ಲಿನ ಅಸಮಾನತೆ, ಶೋಷಣೆ ಎಲ್ಲವೂ ತನ್ನಷ್ಟಕ್ಕೆ ತಾನೇ ದೂರವಾಗುತ್ತವೆ. ಆದರೆ ಇವರ ಸಿದ್ಧಾಂತವನ್ನು ಅಂಬೇಡ್ಕರ್ ವಾದಿಗಳು ಗಾಳಿಗೆ ತೂರುತ್ತಾ ಬಾಬಾಸಾಹೇಬರನ್ನೇ ಮಾರಾಟ ಮಾಡಲು ಹೊರಟಿದ್ದಾರೆ. ಇಂತಹ ಹಲವಾರು ವಿಚಾರ ಗಳನ್ನು ''ಅಂಬೇಡ್ಕರ್ ವಾದದ ಆಚರಣೆ'' ಪುಸ್ತಕ ಓದಿದ ಪ್ರತಿಯೊಬ್ಬ ಓದುಗರಿಗೂ ಸೂಕ್ಷ್ಮವಾಗಿ ಅರ್ಥವಾಗುತ್ತದೆ. ಆದ್ದರಿಂದ ಇದು ಅಂಬೇಡ್ಕರ್ ವಾದಿಗಳಿಗೊಂದು ಪುಟ್ಟ ಕೈಪಿಡಿ ಎಂದೂ ಹೇಳಬಹುದು.

ಕೃತಿ: ಅಂಬೇಡ್ಕರ್ ವಾದದ ಆಚರಣೆ

ಲೇಖಕರು : ಡಾ. ಸಿ.ಜಿ. ಲಕ್ಷ್ಮೀಪತಿ

ಬೆಲೆ : 75 ರೂ.

ಪ್ರಕಾಶಕರು: ಚಾರು ಪ್ರಕಾಶನ, ಬೆಂಗಳೂರು

ಮೊಬೈಲ್ : 9448545959

share
ದಮ್ಮಪ್ರಿಯ ಬೆಂಗಳೂರು
ದಮ್ಮಪ್ರಿಯ ಬೆಂಗಳೂರು
Next Story
X