Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ದ.ಕ ಜಿಲ್ಲೆಯಲ್ಲಿ ದುಬಾರಿಯಾದ ಕೋಳಿ ಮಾಂಸ

ದ.ಕ ಜಿಲ್ಲೆಯಲ್ಲಿ ದುಬಾರಿಯಾದ ಕೋಳಿ ಮಾಂಸ

►ಕೆ.ಜಿ ಗೆ 190 ರೂ. ತಲುಪಿದ ದರ ►ಮಳೆಯಾಗದಿದ್ದರೆ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

ರಹ್ಮಾನ್ ಹಳೆಯಂಗಡಿರಹ್ಮಾನ್ ಹಳೆಯಂಗಡಿ13 Jun 2023 11:51 AM IST
share
ದ.ಕ ಜಿಲ್ಲೆಯಲ್ಲಿ ದುಬಾರಿಯಾದ ಕೋಳಿ ಮಾಂಸ
►ಕೆ.ಜಿ ಗೆ 190 ರೂ. ತಲುಪಿದ ದರ ►ಮಳೆಯಾಗದಿದ್ದರೆ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

ಸುರತ್ಕಲ್: ದ.ಕ. ಜಿಲ್ಲೆಯ ಮಾರುಕಟ್ಟೆ ಅಂಗಡಿಗಳಲ್ಲಿ ಬ್ರಾಯ್ಲರ್ ಕೋಳಿ ಕೆ.ಜಿ.ಗೆ 190 ರೂ. ಗೆ ಮಾರಾಟವಾಗುತ್ತಿದ್ದು, 2022-23ನೇ ಆರ್ಥಿಕ ವರ್ಷದಲ್ಲಿ ಅತೀ ಹೆಚ್ಚಿನ ದರ ಏರಿಕೆಯಾಗಿದೆ ಎಂದು ಕೋಳಿ ಮಾರಾಟಗಾರರ ಕರಾವಳಿ ಚಿಕನ್ ಟ್ರೇಡ‌ರ್ ಅಸೋಸಿಯೇಶನ್ ಹೇಳಿದೆ.

ಸದ್ಯ ಮಾರುಕಟ್ಟೆಯಲ್ಲಿ ಬ್ರಾಯ್ಲರ್ ಕೋಳಿಯ ಬೆಲೆ ಕೆ.ಜಿ.ಗೆ 190 ರೂ. ಇದ್ದರೆ, ಟೈಸನ್ ಕೆ.ಜಿ.ಗೆ 160 ರೂ., ಚರ್ಮ ಸಹಿತ ಕೋಳಿ ಮಾಂಸ 270 ರೂ. ಮತ್ತು ಚರ್ಮ ರಹಿತ ಕೋಳಿ ಮಾಂಸ 290 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಈ 2022-23ನೇ ಆರ್ಥಿಕ ಸಾಲಿನಲ್ಲಿ ಸದ್ಯ ಅತ್ಯಧಿಕ ದರದಲ್ಲಿ ಕೋಳಿ ಮಾರಾಟ ನಡೆಯುತ್ತಿದ್ದು, ಇದಕ್ಕೆ ಕೆಲವೊಂದು ಕಾರಣಗಳನ್ನು ಮಾರಾಟಗಾರರೇ ಹೇಳುತ್ತಾರೆ. ಈ ಬಾರಿ ಮಳೆಗಾಲ ಆಗಮನ ಪಡವಾಗಿರುವ ಕಾರಣ ಕುಕ್ಕುಟೋದ್ಯಮಿಗಳು ಹೆಚ್ಚು ಕೋಳಿಗಳನ್ನು ಸಾಕಲು ಹಿಂದೇಟು ಹಾಕಿತ್ತಿದ್ದಾರೆ. ಸುಡು ಬೇಸಿಗೆ ಹಾಗೂ ನೀರಿನ ಕೊರತೆಯ ಕಾರಣ 600-700 ಮರಿಗಳನ್ನು ಬೆಳೆಸಿದರೆ, ಮಾರಾಟಕ್ಕೆ ಸಿಗುವುದು ಕೇವಲ 200-250 ಕೋಳಿಗಳು ಮಾತ್ರ. ಉಳಿದವು ಬೆಳವಣಿಗೆಯ ಹಂತದಲ್ಲೇ ಸಾಯುತ್ತವೆ ಎನ್ನುತ್ತಾರೆ ಕರಾವಳಿ ಚಿಕನ್‌ ಟ್ರೇಡರ್‌ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಲಬೈಕ್ ಚಿಕನ್‌ ನ ಮಾಲಕ ಬಶೀರ್.‌

ಜಿಲ್ಲೆಗೆ ಶಿವಮೊಗ್ಗ, ತೀರ್ಥಹಳ್ಳಿಯಿಂದ ಹೆಚ್ಚಿನ ಕೋಳಿಗಳು ಸರಬರಾಜಾಗುತ್ತಿದ್ದರು. ಆದರೆ, ಈ ಬಾರಿಯ ಸುಡು ಬಿಸಿಲಿನಿಂದಾಗಿ ಅಲ್ಲಿನ ಶೇ.60 ಕೋಳಿ ಸಾಕಣೆ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಹಾಗಾಗಿ ಕೋಳಿಯ ಬೆಲೆ ಗಗನಕ್ಕೇರುವಂತಾಗಿದೆ. ಜೊತೆಗೆ ಸುಡು ಬಿಲಿನಿಂದಾಗಿ ನೀರಿನ ಪೂರೈಕೆ ಇಲ್ಲದಿರುವುದರಿಂದಲೂ ಈ ವರ್ಷ ಕೊಳೆಯ ಬೆಲೆ ಏರಿಕೆಯಾಗಲು ಮುಖ್ಯಕಾರಣ ಎನ್ನುತ್ತಾರೆ ಬಶೀರ್.

‌ಈಗಾಗಲೇ ಕರಾವಳಿಯಾದ್ಯಂತ ಮಳೆ ಆರಂಭಗೊಂಡಿದ್ದು, ಉತ್ತರ ಕನ್ನಡದ ಹಲವು ಕಡೆಗಳಲ್ಲಿ ಇನ್ನೂ ಮಳೆರಾಯನ ಆಗಮನವಾಗಿಲ್ಲ. ಒಂದು ವೇಳೆ ನಿರೀಕ್ಷಿತ ಮಟ್ಟದ ಮಳೆಯಾದರೆ, ಈ ತಿಂಗಳಾಂತ್ಯಕ್ಕೆ ಕೋಳಿ ದರ ಸಾಧಾರಣ ಮಟ್ಟಕ್ಕೆ ಇಳಿಕೆಯಾಗಲಿದೆ. ಇಲ್ಲವಾದರೆ ದರ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೋಳಿ ಸಾಕಣೆದಾರರು ಹೇಳುತ್ತಾರೆ.

ಬೇಕಾದಷ್ಟು ಪ್ರಮಾಣದಲ್ಲಿ ಕೋಳಿಗಳ ಸರಬರಾಜು ಅಗುತ್ತಿಲ್ಲ. ಜೊತೆಗೆ ಹೆಚ್ಚು ಕೋಳಿಗಳನ್ನು ತಂದಿಟ್ಟರೆ ಬಿಸಿಲಿನ ಬೇಗೆಗೆ ಕೋಳಿಗಳು ಸಾಯುತ್ತವೆ. ಇದರಿಂದ ಲಾಭಕ್ಕಿಂತಲೂ ನಷ್ಟವೇ ಹೆಚ್ಚು. ಹಾಗಾಗಿ ಅಂಗಡಿಗೆ ಹೆಚ್ಚು ಕೋಳಿ ಹಾಕಿಸಿ ಕೈಸುಟ್ಟುಕೊಳ್ಳುವುದು ಬೇಡ ಎಂಬ ನೆಲೆಯಲ್ಲಿ ನಿಯಮಿತವಾಗಿ ತರಿಸಿಕೊಳ್ಳುತ್ತಿದ್ದೇವೆ.

-ಅಹ್ಮದ್ ಕಬೀರ್ ಹಳೆಯಂಗಡಿ, ಕೋಳಿ ಅಂಗಡಿ ಮಾಲಕ, ಬೈಕಂಪಾಡಿ

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಕೋಳಿಗೆ ಇಷ್ಟೊಂದು ದರ ಏರಿಕೆಯಾಗಿದೆ. ಪ್ರತಿ ವಾರಂತ್ಯ ಮನೆಯಲ್ಲಿ ಕೋಳಿ ಸಾರು ಮಾಡುವುದು ರೂಢಿ. ಆದರೆ, ದಿನದ ಸಂಬಳದ ಅರ್ಧ ಪಾಲು ಕೋಳಿಗೆ ನೀಡಲು ಬೇಸರವಾಗುತ್ತದೆ. ಅದಕ್ಕೆ ತರಕಾರಿ ಮತ್ತು ಮೀನು ತಿನ್ನಲು ಆರಂಭಿಸಿದ್ದೇವೆ.

-ಲಾವಣ್ಯಾ ಸುರತ್ಕಲ್, ಗ್ರಾಹಕಿ

share
ರಹ್ಮಾನ್ ಹಳೆಯಂಗಡಿ
ರಹ್ಮಾನ್ ಹಳೆಯಂಗಡಿ
Next Story
X