ಕಠ್ಮಂಡು: ಹಿಂದಿ ಸಿನೆಮ ಪ್ರದರ್ಶನಕ್ಕೆ ನಿಷೇಧ
![ಕಠ್ಮಂಡು: ಹಿಂದಿ ಸಿನೆಮ ಪ್ರದರ್ಶನಕ್ಕೆ ನಿಷೇಧ ಕಠ್ಮಂಡು: ಹಿಂದಿ ಸಿನೆಮ ಪ್ರದರ್ಶನಕ್ಕೆ ನಿಷೇಧ](https://www.varthabharati.in/sites/default/files/images/articles/2023/06/19/381545-1687196018.jpeg)
ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಎಲ್ಲಾ ಹಿಂದಿ ಸಿನೆಮಗಳ ಪ್ರದರ್ಶನವನ್ನು ಸೋಮವಾರ(ಜೂ.19)ದಿಂದ ಅನ್ವಯಿಸುವಂತೆ ನಿಷೇಧಿಸಲಾಗಿದೆ ಎಂದು ಕಠ್ಮಂಡುವಿನ ಮೇಯರ್ ಬಲೇಂದ್ರ ಶಾ ಹೇಳಿದ್ದಾರೆ.
ಪೌರಾಣಿಕ ಮಹಾಕಾವ್ಯ ಆಧರಿತ ‘ಮಹಾಪುರುಷ’ ಸಿನೆಮದಲ್ಲಿ ಆಕ್ಷೇಪಾರ್ಹ ಪದಗಳು ಹಾಗೂ ಸೀತೆಯ ಚಿತ್ರಣದ ಬಗ್ಗೆ ವಿವಾದದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆಕ್ಷೇಪಾರ್ಹ ಸಂಭಾಷಣೆ ತೆಗೆದು ಹಾಕುವಂತೆ 3 ದಿನದ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೆ ಇದಕ್ಕೆ ಅವರು ಒಪ್ಪಿಲ್ಲ. ಈ ಸಿನೆಮ ಪ್ರದರ್ಶಿಸಿದರೆ ಸರಿಪಡಿಸಲಾಗದ ಹಾನಿ ಆಗಲಿದೆ. ಆದ್ದರಿಂದ ‘ಆದಿಪುರುಷ’ ಸಹಿತ ಎಲ್ಲಾ ಹಿಂದಿ ಸಿನೆಮಗಳನ್ನು ಕಠ್ಮಂಡು ಮೆಟ್ರೊಪಾಲಿಟನ್ ಪ್ರದೇಶದಲ್ಲಿ(ಕಠ್ಮಂಡು ಹಾಗೂ ಪ್ರವಾಸೀ ತಾಣ ಪೋಖರ) ಪ್ರದರ್ಶಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದವರು ಹೇಳಿದ್ದಾರೆ.
ಕಠ್ಮಂಡುವಿನ ಎಲ್ಲಾ 17 ಸಿನೆಮ ಮಂದಿರಗಳಲ್ಲಿ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ. ಆದಿಪುರುಷ ಸಿನೆಮದಲ್ಲಿ ಸೀತೆಯನ್ನು ಭಾರತದ ಪುತ್ರಿ ಎಂದು ಉಲ್ಲೇಖಿಸಿರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಶಾ ಟ್ವೀಟ್ ಮಾಡಿದ್ದಾರೆ. ಜಾನಕಿ ಎಂದೂ ಕರೆಯಲಾಗುವ ಸೀತೆ ಆಗ್ನೇಯ ನೇಪಾಳದ ಜನಕಪುರಿಯಲ್ಲಿ ಜನಿಸಿದಳು ಎಂದು ಹಲವರು ನಂಬುತ್ತಾರೆ.