ನಂದಿಬೆಟ್ಟುವಿನಲ್ಲಿ ಚರಂಡಿ ಸಮಸ್ಯೆ: ಮನೆಯಂಗಳದಲ್ಲಿ ನೀರು!

ಕುಂದಾಪುರ, ಜೂ.22: ಇಲ್ಲಿನ ಪುರಸಭೆ ವ್ಯಾಪ್ತಿಯ ಬಿಎಚ್ಎಂ ರಸ್ತೆ ನಂದಿಬೆಟ್ಟು ನಿವಾಸಿ ಜಲಜಾ ಪೂಜಾರಿ ಎಂಬವರ ಮನೆಗೆ ನೀರು ಹೋಗುವಲ್ಲಿ ಸೂಕ್ತ ಚರಂಡಿ ಇಲ್ಲದೆ ಮನೆ ಅಂಗಳವಿಡೀ ನೀರು ತುಂಬಿದೆ. ಮನೆ ಸುತ್ತಲೂ ಗದ್ದೆಗಳ ಮಣ್ಣು ತುಂಬಿಸಿ ನೀರು ಹೋಗುವ ಜಾಗವನ್ನು ಬಂದ್ ಮಾಡಿದ್ದು ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರಿಗೆ ಇದರಿಂದ ತುಂಬಾ ತೊಂದರೆ ಯಾಗುತ್ತಿದ್ದು ಈ ಬಗ್ಗೆ ಕಳೆದ ವರ್ಷ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿಯೂ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು ಅವರು ಜಾಗವನ್ನು ವೀಕ್ಷಣೆ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ತಕ್ಷಣವೇ ಚರಂಡಿ ಸುವ್ಯವಸ್ಥೆ ಮಾಡಬೇಕು ಹಾಗೂ ಹೊಂಡದ ಜಾಗಕ್ಕೆ ಮಣ್ಣನ್ನು ತುಂಬಿಸಿ ಸಾರ್ವಜನಿಕರಿಗೆ ನಡೆಯಲು ಅನುಕೂಲ ಮಾಡಿ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Next Story





