-

ರಾಜಕಾರಣದ ಮಾತುಗಳನ್ನು ಮರುಕ್ಷಣವೇ ಮರೆಯಿರಿ

-

ದಿನಾಂಕ 20 ಅಕ್ಟೋಬರ್ 1938ರಂದು ಮಧ್ಯಪ್ರಾಂತದ ವರ್ಹಾಡ ಪ್ರಾಂತದ ಕಾರ್ಯಕರ್ತರ ನಿಯೋಗವು ಡಾ. ಅಂಬೇಡ್ಕರ್ ಅವರನ್ನು ರಾಜಗೃಹದಲ್ಲಿ ಭೇಟಿಯಾಗಿದ್ದರು. ಕಾರ್ಯಕರ್ತರ ಮಾತು ಕೇಳಿದ ಬಳಿಕ ಡಾ. ಅಂಬೇಡ್ಕರ್ ಕಾರ್ಯಕರ್ತರನ್ನು ಉದ್ದೇಶಿಸಿ ನೀಡಿದ ಉಪದೇಶವನ್ನು ಕೆಳಗೆ ನೀಡಲಾಗಿದೆ. ಲೇಖಕರು ಸ್ವತಃ ನಿಯೋಗದ ಜೊತೆಗಿದ್ದರು. ಡಾ. ಅಂಬೇಡ್ಕರ್ ಮಾತಾಡಿದ್ದನ್ನೆಲ್ಲ ಲೇಖಕರು ನಮೂದಿಸಿರುವುದರಿಂದ ಅದನ್ನೇ ಆಯ್ದು ನೀಡಲಾಗಿದೆ.

ಬೆಳಗ್ಗೆ ಏಳಕ್ಕೆ ಕಾರ್ಯಕರ್ತರು ಡಾ. ಅಂಬೇಡ್ಕರ್ ಅವರನ್ನು ಭೇಟಿಯಾದರು. ಆಗ ಅವರು ಗಂಭೀರ ಮತ್ತು ಶಾಂತವಾಗಿ ಕಾಣುತ್ತಿದ್ದರು. ಚಹರೆಯ ಮೇಲೆ ದಿಟ್ಟ ಅಭಿಮಾನ ಗೋಚರಿಸುತ್ತಿತ್ತು ಕಾರ್ಯಕರ್ತರೊಂದಿಗಿನ ಚರ್ಚೆಯ ಬಳಿಕ ನಮ್ಮನ್ನು ಉದ್ದೇಶಿಸಿ ಹೇಳಿದರು. ಆಗ ಅವರ ಮಾತಿನಲ್ಲಿ ಕಳಕಳಿ ಇರುವುದು ನಮಗೆ ಕಾಣಿಸಿತು. ಡಾ ಅಂಬೇಡ್ಕರ್ ಹೇಳಿದರು-

‘‘ನಿಮ್ಮ ಮಧ್ಯಪ್ರಾಂತದ ವರ್ಹಾಡ ಕೌನ್ಸಿಲ್ ಚುನಾವಣೆ ನಡೆದು ಸುಮಾರು ಒಂದೂವರೆ ವರ್ಷವಾಯಿತು. ಇಷ್ಟು ದಿನ ನಾವು ಏನೂ ಮಾಡಲಿಲ್ಲ. ನಿಮಗೆ 20 ಸ್ಥಾನಗಳನ್ನು ದೊರಕಿಸಿಕೊಟ್ಟೆವು. ಅದರಲ್ಲಿ ಕೇವಲ ಏಳೇ ಸ್ಥಾನ ಸಿಕ್ಕಿದ್ದು. 13 ಸ್ಥಾನಗಳ ಬಗ್ಗೆ ಏನೂ ಮಾಡುವುದಾಗಲಿಲ್ಲ. ಈ ಏಳು ಜನರಲ್ಲಿ ಎಂದೂ ಆತ್ಮೀಯತೆ ಕಾಣಲಿಲ್ಲ. ಎಂದೂ ಒಗ್ಗಟ್ಟಿರಲಿಲ್ಲ. ನಮ್ಮ ಮುಂಬೈಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷವು ಕಾಂಗ್ರೆಸ್‌ಗಿಂತ ಉತ್ತಮ ಸಂಘಟನೆಯಿಂದ ಕೂಡಿದೆ. ಜನಜಾಗೃತಿ ಮತ್ತು ರಾಜಕಾರಣದಲ್ಲಿಯ ಸಂಘಟನೆ ಎರಡೂ ಬೇರೆ ಬೇರೆ ಕಾರ್ಯ.

ಚುನಾವಣೆ ಬಳಿಕ ನಾವೆಷ್ಟು ಸದಸ್ಯರನ್ನು ಮಾಡಿದೆವು? ಹಿಂದೆ ನಾನು ಒಮ್ಮೆ ಕೇಸಿನ ಸಂದರ್ಭದಲ್ಲಿ ಬಂದಾಗ ಕೇಳಿದೆ. ಆಗ ಯಾರೂ ಪಕ್ಷದ ಸದಸ್ಯರಾಗಿದ್ದು ಕಂಡುಬರಲಿಲ್ಲ. ಅಲ್ಲಿ ಸ್ವ್ವತಂತ್ರ ಕಾರ್ಮಿಕ ಪಕ್ಷದ ಆಫೀಸ್ ಇಲ್ಲ. ಅಲ್ಲಿ ಯಾರಾದರೂ ದೂರು ತಂದರೆ, ತಕರಾರಿದ್ದರೆ ಅದರ ವ್ಯವಸ್ಥೆ ಮಾಡುವ ಯಾವ ಅನುಕೂಲತೆಯೂ ಅಲ್ಲಿಲ್ಲ. ನಿಮ್ಮ ಹತ್ತಿರ ದುಡ್ಡಿಲ್ಲ. ಹಣವಿಲ್ಲದೆ ರಾಜಕಾರಣ ನಡೆಯುವುದು ಹೇಗೆ? ಹಣಕ್ಕಾಗಿ ಕೇವಲ ಒಬ್ಬರನ್ನೇ ಅವಲಂಬಿಸಿದ್ದರೆ ರಾಜಕಾರಣ ನಡೆಯುವುದಿಲ್ಲ. ನಾವು ಮಾಡಿದ ಸದಸ್ಯರಲ್ಲಿ ಕೆಲವರು ಶಾಶ್ವತ ಸದಸ್ಯರಿದ್ದಾರೆಂದೇ ರಾಜಕಾರಣವಿದೆ. ನೀವು ಏನೂ ಮಾಡಲಿಲ್ಲ. ನಾನು ಹೇಳಿದ್ದನ್ನೂ ಮಾಡುವುದಿಲ್ಲ. ನಾನು ಕೇವಲ ಮುಂಬೈ ಜವಾಬ್ದಾರಿ ಹೊತ್ತಿದ್ದೇನೆ. ನನಗೂ ಮಧ್ಯಪ್ರಾಂತದ ವರ್ಹಾಡಿಗೆ ಏನು ಸಂಬಂಧ? ನಿಮಗೆ ಯಾವುದೇ ಕಾರ್ಯ ಮಾಡುವ ಇಚ್ಛೆ ಇರದಿದ್ದರೆ ನಾನು ನಿಮ್ಮ ಪ್ರಾಂತದ ಬಗ್ಗೆ ಏನೂ ಮಾಡಲಾರೆ. ನಿಮ್ಮ ಪ್ರಾಂತದಲ್ಲಿ ಕೆಲವು ಸ್ವಾರ್ಥಿಗಳಿದ್ದಾರೆ. ಸರಿಯಾಗಿ ಮಾತನಾಡುವವರೂ ಇದ್ದಾರೆ ಮತ್ತೆ ಕೆಲವರು ಕೆಲಸ ಮಾಡುವವರೂ ಇದ್ದಾರೆ. ಆದರೆ ಇಂದಿನವರೆಗೆ ಏನೂ ಆಗಲೇ ಇಲ್ಲ. ನೀವೀಗ ಆ ಕಾರ್ಯವನ್ನು ಮಾಡಬೇಕು. ನೀವು ಯಾವುದಾದರೂ ಒಂದು ಸಂಗತಿಯನ್ನು ಮಾಡಬೇಕು. ಒಂದೋ ನಾನು ಹೇಳಿದಂತೆ ಮಾಡಬೇಕು ಅಥವಾ ಎರಡನೆಯದು ನಾನು ಮಾಡಿದಂತೆ ವರ್ತಿಸಬೇಕು. ಜಯವಂತ ಬಾಯಿಯನ್ನು ಸಂಘಟಕನೆಂದು ನೇಮಿಸಲಾಗಿದೆ. ಹೀಗಾಗಿ ನೀವು ಅವರಿಗೆ ಸಹಕಾರ ನೀಡಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ನೀವೇಕೆ ವಿರೋಧಿಸುತ್ತಿದ್ದೀರಿ? ನಮ್ಮಲ್ಲಿರುವ ಒಂದು ದೋಷವೆಂದರೆ ಒಮ್ಮೆ ನಡೆದ ಜಗಳವನ್ನು ತಲೆ ತಲಾಂತರದವರೆಗೆ ಮುಂದುವರಿಸುವುದು. ರಾಜಕಾರಣದ ಮಾತನ್ನು ಮರುಕ್ಷಣವೇ ಮರೆಯಬೇಕು. ಹರದಾಸನ ಬಗೆಗೆ ನನಗೆ ಗೌರವವಿದೆ. ಆದರೆ ಅವರಲ್ಲಿ ಕೆಲವು ದೋಷಗಳೂ ಇವೆ. ಪಾಟೀಲನಿಗೆ ಹರದಾಸರು ಚುನಾವಣೆಯ ಟಿಕೆಟ್ ಕೊಡಲಿಲ್ಲವೆಂದು ಪಾಟೀಲ್ ಹೀಗೆ ವರ್ತಿಸಬಾರದು.

ನಾವು ಅಲ್ಪಸಂಖ್ಯಾತರು. ಕಪ್ಪೆ ಎಷ್ಟೇ ಉಬ್ಬಿದರೂ ಎತ್ತಿನಷ್ಟಾಗುವುದು ಸಾಧ್ಯವಿಲ್ಲ. ಆದ್ದರಿಂದ ಯಾರ ಜೋಡಿಯಾದರೂ ಜೋಡು ಹಚ್ಚದ ಹೊರತು ರಾಜಕಾರಣ ನಮ್ಮ ಕೈಗೆ ಬರಲಾರದು. ಹಿಂದಿನ ಚಳವಳಿಯು ನಮಗಷ್ಟೇ ಸೀಮಿತವಾಗಿತ್ತು. ನಾವು ಆಂಗ್ಲ ಸರಕಾರದಿಂದ ಆ ಕಾಲಕ್ಕೆ ಪಡೆಯಬೇಕಾಗಿತ್ತು. ಈಗ ಬ್ರಿಟಿಷ್ ಸರಕಾರ ಉಳಿದಿಲ್ಲ. ಇಂದಿನ ರಾಜಕಾರಣ ಬಹುಮತದಿಂದ ನಡೆಯುವಂಥದ್ದಾಗಿದೆ. ಬಹುಮತವಿಲ್ಲದೆ ನಾವು ರಾಜಕಾರಣವನ್ನು ಹಸ್ತಗತ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಬಹುಮತವನ್ನು ಬೆಳೆಸಬೇಕು. ಜಯವಂತನ ಪ್ರಕರಣವನ್ನು ಏಕೆ ಬೆಳೆಸುತ್ತೀರಿ? ಜಯವಂತನೇನು ರಾಜನಲ್ಲ. ಯಾರೇ ಆಗಲಿ ಉತ್ತಮವಾಗಿ ಕಾರ್ಯ ಮಾಡುತ್ತಿದ್ದರೆ ಸರಿ. ಯಾರಾದರೂ ವಿರುದ್ಧ ಕಾರ್ಯ ಮಾಡಲಾರಂಭಿಸಿದರೆ ಅವನನ್ನು ಒಂದೇ ಮಾತಿಗೆ ಹೊರಗೆ ಹಾಕಬಲ್ಲೆ. ಯಾರು ಸ್ವತಂತ್ರ ಕಾರ್ಮಿಕ ಪಕ್ಷದ ಸದಸ್ಯರಾಗಿದ್ದಾರೋ ಅವರು ಬೇರೆ ಪಕ್ಷದ ಸದಸ್ಯರಾಗುವಂತಿಲ್ಲ. ರಾಜಕಾರಣ ಹೊರತು ಸಾಮಾಜಿಕ ಕಾರ್ಯ ಧಾರ್ಮಿಕ ಕಾರ್ಯ ಮಾಡಬಹುದಾಗಿದೆ. ಸತ್ತೆ ಮೇಲೆ ಯಾರಿರಬೇಕು ಎಂದು ನಿರ್ಧರಿಸುವುದು ಜನರ ಕರ್ತವ್ಯ. ಸದಸ್ಯರ ಮೇಲೆ ಉಸ್ತುವಾರಿ ನಡೆಸಲು ಒಬ್ಬ ಅರ್ಹ ವ್ಯಕ್ತಿಯಿಲ್ಲವೆಂದು ಹೀಗಾಗುತ್ತಿರಬೇಕು. ನಾನು ಏನಾದರೂ ಹೆಚ್ಚು ಕಡಿಮೆ ಕಾರ್ಯ ಮಾಡಿದರೆ ಇಲ್ಲಿ ಜನರು ಕೇಳಲು ಬರುತ್ತಾರೆ.

ಯಾವ ಮನುಷ್ಯನನ್ನು ನಾವು ಪ್ರೀತಿಸುತ್ತೇವೋ ಅಂಥವನ ವಿರುದ್ಧ ಮಾಡುವುದೇ ಸತ್ಯಾಗ್ರಹ. ಮಗು ತಾಯಿಯ ವಿರುದ್ಧ ಸತ್ಯಾಗ್ರಹ ಮಾಡುತ್ತದೆ. ಖರೆಯವರಿಂದ ನಾನು ತಪ್ಪೊಪ್ಪಿಗೆ ಪತ್ರವನ್ನು ಬರೆಯಿಸಿಕೊಂಡಿದ್ದೇನೆ. ‘‘ಈ ಜನರು (ಅಸ್ಪೃಶ್ಯ) ಅಜ್ಞಾನಿಗಳು. ಅವರಿಗೆ ಮಹತ್ವಾಕಾಂಕ್ಷೆ ಇಲ್ಲ. ನನಗೆ ಅಸ್ಪೃಶ್ಯ ಮಿನಿಸ್ಟರ್ ತೆಗೆದುಕೊಳ್ಳಬಹುದಾಗಿತ್ತು. ಏಕೆ ತೆಗೆದುಕೊಂಡಿರಿ? ಒಬ್ಬ ಮಿನಿಸ್ಟರ್‌ನನ್ನು ತೆಗೆದುಕೊಂಡು ನೀವು ಅವರ ಮನದೊಳಗೆ ಮಹತ್ವಾಕಾಂಕ್ಷೆಯನ್ನು ಹುಟ್ಟಿಸಿದಿರಿ’’ ಎಂದು ಮಹಾತ್ಮಾ ಗಾಂಧಿ ಹೇಳಿದರು.

ನೀವು ಸತ್ಯಾಗ್ರಹ ಮಾಡಿದಾಗ ಅಗ್ನಿಭೋಜ ಸ್ವಲ್ಪವಾದರೂ ಭಾಗವಹಿಸಿದ್ದನೇ? ಅವನು ಒಂದು ವೇಳೆ ತನ್ನ ಹಕ್ಕಿಗಾಗಿ ಜಗಳವಾಡಲು ಸಿದ್ಧನಿಲ್ಲದಿದ್ದರೆ, ನೀವು ಗಾಂಧಿ ವಿರುದ್ಧ ಏಕೆ ಸತ್ಯಾಗ್ರಹ ಮಾಡಿದಿರಿ? ಯಾರು ಜಗಳವಾಡಲು ಸಿದ್ಧನಿರುತ್ತಾನೋ ಅವನಿಗೆ ಜಗಳವಾಡಲು ಮುಂದೆ ಬರುವುದು ಕರ್ತವ್ಯವಾಗುತ್ತದೆ.

ಸ್ವತಂತ್ರ ಕಾರ್ಮಿಕ ಪಕ್ಷದ ಕಾರ್ಯವೆಲ್ಲಿ ನಡೆಯುತ್ತಿದೆಯೋ ಆ ಬ್ರಾಂಚ್‌ನ ಮೇಲೆ ಹೆಡ್‌ಆಫೀಸ್‌ನ ಕಂಟ್ರೋಲ್ ಇರಬೇಕಾಗುತ್ತದೆ. ನಾನು ಶಿಸ್ತು ಪರಿಪಾಲಿಸುವ ವ್ಯಕ್ತಿ. ಹಾಗೆಯೇ ಒಂದು ಬಗೆಯ ಡಿಕ್ಟೇಟರ್‌ನಾಗಿದ್ದೇನೆ. ಹಣದ ವಿಷಯದಲ್ಲಿ ಅತ್ಯಂತ ಪ್ರಾಮಾಣಿಕವಾಗಿರಬೇಕು.

ಪ್ರತಿಯೊಂದು ಜಿಲ್ಲೆಯ ಐದೈದು ಸದಸ್ಯರನ್ನು ಕರೆಸಿ ಅವರ ಸಭೆಯನ್ನು ಏರ್ಪಡಿಸಿ, ಅಲ್ಲಿ ಏಳೂ ಶಾಸಕರನ್ನು ಕರೆಯಿಸಿ ಎಲ್ಲರೂ ಸೇರಿ ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿ.
ಕಾಂಗ್ರೆಸ್ ಭದ್ರ ಬುನಾದಿಯ ಮೇಲೆ ನಿಂತ ಸಂಸ್ಥೆ ಅದರ ಮುಂದೆ ನಮ್ಮದೇನೂ ನಡೆಯುವುದಿಲ್ಲ. ಅದರದ್ದೇ ಬಹುಮತವಿರುವುದರಿಂದ ನಾವು ಏನು ಮಾಡುವಂತಿಲ್ಲ. ಆದ್ದರಿಂದ ಅವರಲ್ಲಿ ಒಡಕು ತರುವುದು ನಮ್ಮ ಕರ್ತವ್ಯ. ಡಾ. ಖರೆಯವರು ವೈರಿ ಪಕ್ಷದ ಒಂದು ಕಲ್ಲು. ಅದನ್ನು ಉರುಳಿಸುವ ಪ್ರಯತ್ನವನ್ನು ನಾನು ಮಾಡಿದೆ.

ಪಕ್ಷದ ಸದಸ್ಯರ ಹಣವನ್ನು ಒಬ್ಬನೇ ವ್ಯಕ್ತಿಯ ಹೆಸರಿನಲ್ಲಿಡಬಾರದು. ಇಬ್ಬರ ಅಥವಾ ಐವರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಡಬೇಕು. ಪಕ್ಷದ ಕೆಲಸಕ್ಕಾಗಿ ಒಬ್ಬ ಸೆಕ್ರೆಟರಿಯನ್ನು ನೇಮಿಸಿ. (ಈ ಕೆಲಸವಂತೂ ಆಗಿದೆ) ಆಫೀಸಿಗಾಗಿ ಒಂದು ಮನೆಯನ್ನು ಮಾಡಿ. ತಿಂಗಳಲ್ಲಿ ಸಂಗ್ರಹಗೊಂಡ ವಂತಿಕೆಯನ್ನು ಫಾರ್ಮಿನಲ್ಲಿ ತುಂಬಿ ಕಳಿಸಿ. ನೀವು ಸರಿಯಾಗಿ ಕಾರ್ಯನಿರ್ವಹಿಸಿದರೆ ಜನತಾ ಪತ್ರಿಕೆಯಲ್ಲಿ ಸಿ.ಪಿ. ಮತ್ತು ಬೇರಾರಗಾಗಿ ಎರಡು ಪುಟ ಮೀಸಲು ಇರಿಸೋಣ. ಸದ್ಯಕ್ಕೆ ಒಂದು ಹಂಗಾಮಿ ಕಮಿಟಿಯನ್ನು ನೇಮಿಸಿ. ಆನಂತರ ಚುನಾವಣೆ ಜರುಗುತ್ತದೆ. ಪ್ರಚಾರ ಕಾರ್ಯಕ್ಕೆ ಬೇರೆ ಬೇರೆ ಜನರಿಗೆ ಬೇರೆ ಬೇರೆ ವಿಭಾಗಗಳನ್ನು ಕೊಡಿ. ಸ್ವತಂತ್ರ ಕಾರ್ಮಿಕ ಪಕ್ಷದ ರಾಜಕಾರಣಕ್ಕಾಗಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ, ಸಂಘಟಿಸುವ ಅಗತ್ಯವಿದೆ.

ಯಾವ ಮನುಷ್ಯನ ಕೈಗೆ ಸತ್ತೆ ಹೋಗುತ್ತದೋ ಅಲ್ಲಿ ಒಬ್ಬ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳಿಸಬೇಕು. ಸಾಮಾಜಿಕ ಕಾರ್ಯವೆಂದರೇನು, ಸಮಾಜದ ಹಿತ ಯಾವುದರಲ್ಲಿದೆ, ಯಾವ ಯಾವ ಸಂಗತಿಗಳು ಸಮಾಜಕ್ಕೆ ಅಗತ್ಯವಿದೆ ಎಂಬುದರ ಅರಿವು ಅವರಿಗಿರಬೇಕು. ಕಾರ್ಯ ಮಾಡಲು ಪ್ರಥಮ ದರ್ಜೆಯ ಜನರನ್ನು ಆಯ್ಕೆ ಮಾಡಿ ಕಳುಹಿಸದೆ, ಅಂತಲ್ಲಿ ತಮ್ಮ ಬಂಧು ಬಳಗದವರನ್ನು ಕಳುಹಿಸಿದರೆ ಯಾವ ಕಾರ್ಯವೂ ಆಗಲಾರದು. ತಮ್ಮ ವ್ಯಕ್ತಿಯ ಬಗೆಗೆ ಬಹಿರಂಗ ಸಭೆಯಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ತಮ್ಮ ಪಕ್ಷ ಕುಂಠಿತವಾಗದಂತೆ ಪ್ರತಿಯೊಬ್ಬ ಸದಸ್ಯರು ವರ್ತಿಸಬೇಕು. ಪಕ್ಷದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ಹಾಗೆ ಮಧ್ಯಪ್ರಾಂತದ ನಕಾಶೆಯನ್ನು ಬಿಡಿಸಿ ನನಗೆ ಕಳುಹಿಸಿ. ಆ ನಕಾಶೆಯಲ್ಲಿ ಪ್ರತಿ ಜಿಲ್ಲೆಯ ವಿಭಾಗವನ್ನು ತೋರಿಸಿ. ಅಲ್ಲಿ ನಮ್ಮ ಮತದಾರರು ಎಷ್ಟು?, ಸಾಮಾನ್ಯ ಮತದಾರರು ಎಷ್ಟು? ಎಲ್ಲಿ ಜಾಗ ರಿಸರ್ವ್ ಆಗಿದೆ ಮತ್ತು ಎಲ್ಲಿ ಚುನಾವಣೆಗೆ ಸ್ಪರ್ಧಿಸಬೇಕಾಗುತ್ತದೆ ಈ ಎಲ್ಲ ಮಾಹಿತಿಯನ್ನು ಅದರಲ್ಲಿ ಬರೆದು ನನಗೆ ಕಳಿಸಿ. ಅಂದರೆ ಮುಂದಿನ ವ್ಯವಸ್ಥೆ ಹೇಗಿರಬೇಕು ಎನ್ನುವುದನ್ನು ನಿರ್ಧರಿಸುವುದು ತುಂಬಾ ಸುಲಭವಾಗುತ್ತದೆ


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top