ಪ್ಲಾಸ್ಟಿಕ್ ನಿಯಂತ್ರಣಕ್ಕೆ ಬೇಕು 'ಪ್ಲಾಸಾ'
-

ಪ್ಲಾಸ್ಟಿಕ್ ಇಂದು ಜಾಗತಿಕ ಸಮಸ್ಯೆಯಾಗಿದೆ. ಅದರಲ್ಲೂ ಮೈಕ್ರೋಪ್ಲಾಸ್ಟಿಕ್ಗಳ ಪ್ರಭಾವ ದಿನ ದಿನಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಸಮಸ್ಯೆಯಾಗಿ ಕಂಡುಬರುತ್ತಿದೆ. ಇಲ್ಲಿಯವರೆಗಿನ ನಮ್ಮೆಲ್ಲ ಗಮನವು ಭೂಮಿಯ ಮೇಲಿನ ಹಾಗೂ ಸಾಗರದಲ್ಲಿನ ಮೈಕ್ರೋಪ್ಲಾಸ್ಟಿಕ್ಗಳ ಮೇಲೆ ಮತ್ತು ಸಮುದ್ರ ಜೀವನದ ಮೇಲೆ ಅವುಗಳ ಪರಿಣಾಮಗಳ ಮೇಲೆ ಕೇಂದ್ರೀಕೃತವಾಗಿತ್ತು. ಬಹುತೇಕವಾಗಿ ಕೃಷಿಯಲ್ಲಿ ಮೈಕ್ರೋಪ್ಲಾಸ್ಟಿಕ್ಗಳನ್ನು ಕಡೆಗಣಿಸಲಾಗಿದೆ.
ಇತ್ತೀಚೆಗೆ ವಿಜ್ಞಾನಿಗಳು, ಕೃಷಿ ಮಣ್ಣು ವಾಸ್ತವವಾಗಿ ಸಾಗರದ ಜಲಾನಯನ ಪ್ರದೇಶಗಳಿಗಿಂತ ಹೆಚ್ಚು ಮೈಕ್ರೋಪ್ಲಾಸ್ಟಿಕ್ ಅನ್ನು ಹಿಡಿದಿಟ್ಟುಕೊಳ್ಳಬಹುದು ಎಂದು ಕಂಡುಹಿಡಿದಿದ್ದಾರೆ. ಕೃಷಿಯಲ್ಲಿ ಬಳಸಲಾಗುವ ತ್ಯಾಜ್ಯನೀರಿನ ಕೆಸರು, ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗಬಹುದು ಎಂಬ ಅಂಶವನ್ನು ಬೆಂಬಲಿಸುವ ಪುರಾವೆಗಳಿವೆ. ಕೊಳಚೆ ನೀರಿನ ಕೆಸರು, ವಾಯುಗಾಮಿ ಬೀಳುವಿಕೆಯಿಂದಾದ ಮಳೆ ಮತ್ತು ರಸಗೊಬ್ಬರಗಳು ಮಣ್ಣಿನಲ್ಲಿ ಮೈಕ್ರೋಪ್ಲಾಸ್ಟಿಕ್ ನೆಲೆಗೊಳ್ಳುವ ಮಾರ್ಗಗಳಾಗಿವೆ ಎಂದು ವಿಜ್ಞಾನಿಗಳು ಹೇಳಿರುವುದು ಅಘಾತಕಾರಿಯಾಗಿದೆ. ಪ್ಲಾಸ್ಟಿಕ್ ಮಲ್ಚಿಂಗ್, ನೀರಿನ ಪೈಪ್ಗಳು ಮತ್ತು ಹಸಿರುಮನೆ ನಿರ್ಮಾಣಕ್ಕಾಗಿ ಬಳಸುವ ಪ್ಲಾಸ್ಟಿಕ್ ಕವರ್ಗಳು ಸಹ ಕೃಷಿ ಮಣ್ಣಿನಲ್ಲಿ ಮೈಕ್ರೋಪ್ಲಾಸ್ಟಿಕ್ಗೆ ತಮ್ಮದೇ ಆದ ಕೊಡುಗೆ ನೀಡುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಸಸ್ಯಗಳನ್ನು ಫಾರಂ ಹೌಸ್ಗಳಲ್ಲಿ ಬೆಳೆಸಲಾಗುತ್ತಿದೆ. ಫಾರಂ ಹೌಸ್ನಲ್ಲಿ ಮೇಲುಹೊದಿಕೆಗೆ ಪ್ಲಾಸ್ಟಿಕ್ ಬಳಸುವುದು ಸಾಮಾನ್ಯ. ಬಿಸಿಲಿನ ತಾಪಕ್ಕೆ ಪ್ಲಾಸ್ಟಿಕ್ ಕ್ರಮೇಣವಾಗಿ ವಿಘಟಿಸಿ ಅಲ್ಲಿನ ಮಣ್ಣಿನೊಂದಿಗೆ ಸೇರಿಕೊಳ್ಳುತ್ತದೆ. ಇದೇ ಮಣ್ಣು ಸಸ್ಯಗಳ ಬೆಳವಣಿಗೆಗೆ ಬಳಕೆಯಾಗುತ್ತದೆ. ಅಲ್ಲದೆ ಇತ್ತೀಚೆಗೆ ಕೃಷಿಯಲ್ಲಿ ಕಡಿಮೆ ಬೆಲೆಯ ಹಾಗೂ ಕಡಿಮೆ ಗುಣಮಟ್ಟದ ಕಪ್ಪುಬಣ್ಣದ ಪೈಪ್ಗಳನ್ನು ಬಳಸಲಾಗುತ್ತದೆ. ಇವು ಹೆಚ್ಚು ಶಾಖವನ್ನು ಹೀರಿಕೊಳ್ಳುತ್ತವೆ ಮತ್ತು ಬಹುಬೇಗನೆ ಶಾಖಕ್ಕೆ ವಿಘಟಿಸುತ್ತವೆ. ಇದರಿಂದಲೂ ಮಣ್ಣಿನಲ್ಲಿ ಮೈಕ್ರೋಪ್ಲಾಸ್ಟಿಕ್ ಸೇರಿಕೊಳ್ಳುತ್ತದೆ. ವಿವಿಧ ಕಾರಣಗಳಿಂದ ಮಣ್ಣಿನ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ಜೊತೆಗೆ, ಉದ್ದೇಶಪೂರ್ವಕವಾಗಿ ಸೇರಿಸಲಾದ ಮೈಕ್ರೊಪ್ಲಾಸ್ಟಿಕ್ನ್ನು ಸಹ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಉದ್ದೇಶಪೂರ್ವಕವಾಗಿ ಸೇರಿಸಲಾದ ಮೈಕ್ರೊಪ್ಲಾಸ್ಟಿಕ್ಸ್ ಒಂದು ಕ್ರಿಯಾತ್ಮಕ ಉದ್ದೇಶವನ್ನು ಪೂರೈಸಲು ಗ್ರಾಹಕ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಸೇರಿಸಲಾಗುತ್ತದೆ. ಇಂತಹ ಮೈಕ್ರೋಪ್ಲಾಸ್ಟಿಕ್ಗಳನ್ನು ಸಾಮಾನ್ಯವಾಗಿ ಕೃಷಿ ಮತ್ತು ತೋಟಗಾರಿಕೆ ಎರಡರಲ್ಲೂ ಬಳಸಲಾಗುತ್ತದೆ.
ಕೃಷಿಯಲ್ಲಿ ಉದ್ದೇಶಪೂರ್ವಕವಾಗಿ ಸೇರಿಸಲಾದ ಮೈಕ್ರೊಪ್ಲಾಸ್ಟಿಕ್ಗಳ ಮುಖ್ಯ ಬಳಕೆಯು ನಿಯಂತ್ರಿತ ಬಿಡುಗಡೆ ರಸಗೊಬ್ಬರಗಳಿಗೆ ಪೌಷ್ಟಿಕಾಂಶದ ಪ್ರಿಲ್ಗಳು (ಉದಾಹರಣೆಗೆ, ಅಮೋನಿಯಂ ಅನ್ನು ನೈಟ್ರೇಟ್ನಲ್ಲಿ ಪರಿವರ್ತಿಸುವ ದರವನ್ನು ನಿಯಂತ್ರಿಸುವ ಮೂಲಕ). ಈ ಪ್ರಿಲ್ಗಳು ಸಾಮಾನ್ಯವಾಗಿ ಪಾಲಿಸಲ್ಫೋನ್, ಪಾಲಿಅಕ್ರಿಲೋನಿಟ್ರೈಲ್ ಅಥವಾ ಸೆಲ್ಯುಲೋಸ್ ಅಸಿಟೇಟ್ನಂತಹ ಪಾಲಿಮರ್ನಿಂದ ರಚಿತವಾಗಿರುವ ಲೇಪನವಾಗಿದ್ದು, ಇದು ಸಂಶ್ಲೇಷಿತ ಪಾಲಿಮರ್ಗಳ ಫಲೀಕರಣ ಕಣಗಳಿಗೆ ಪೋಷಕಾಂಶಗಳ ಸಂಯೋಜನೆಯನ್ನು ಆವರಿಸುತ್ತದೆ. ಇದು ಮೈಕ್ರೋಪ್ಲಾಸ್ಟಿಕ್ಗಳನ್ನು ಸಂಭಾವ್ಯವಾಗಿ ರೂಪಿಸುತ್ತದೆ. ಬೀಜ ಸಂರಕ್ಷಣಾ ಲೇಪನಗಳು, ಮಣ್ಣಿನ ಪರಿಹಾರಕ್ಕಾಗಿ ನೀರಿನಲ್ಲಿ ಕರಗುವ ಪಾಲಿಮರ್ಗಳು ಮತ್ತು ನೀರು ಹೀರಿಕೊಳ್ಳುವ ವಸ್ತುಗಳು. ಹೆಚ್ಚುವರಿಯಾಗಿ ಮೈಕ್ರೋಪ್ಲಾಸ್ಟಿಕ್ಗಳು ಸಂಭಾವ್ಯವಾಗಿ ಒಳಗೊಂಡಿರುವ ಅನ್ವಯಗಳು ಮಣ್ಣಿನ ಸಂರಕ್ಷಣೆಗಳನ್ನು ಒಳಗೊಂಡಿವೆ. ಇದು ಮಣ್ಣಿನ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ. ನೀರಾವರಿ ಆವರ್ತನವನ್ನು ಕಡಿಮೆ ಮಾಡುತ್ತದೆ ಮತ್ತು ಮಣ್ಣಿನ ಪ್ರವೇಶ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕೃಷಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಬಳಕೆಯ ಪರಿಣಾಮವನ್ನು ಪರಿಗಣಿಸಿ, ಪರ್ಯಾಯ ತಂತ್ರಗಳನ್ನು ಕಂಡುಹಿಡಿಯುವುದು ಅಗತ್ಯವಾಗಬಹುದು.
ಭೂಮಿಯ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವು ಸಮುದ್ರದ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯಕ್ಕಿಂತ ಹೆಚ್ಚು. ಎಲ್ಲಾ ಪ್ಲಾಸ್ಟಿಕ್ ತ್ಯಾಜ್ಯದ ಮೂರನೇ ಒಂದು ಭಾಗವು ಮಣ್ಣಿನಲ್ಲಿ ಅಥವಾ ಸಿಹಿನೀರಿನಲ್ಲಿ ಕೊನೆಗೊಳ್ಳುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಪ್ಲಾಸ್ಟಿಕ್ನ ಹೆಚ್ಚಿನ ಭಾಗವು 5 ಮಿ.ಮೀ.ಗಿಂತ ಚಿಕ್ಕದಾದ ಕಣಗಳಾಗಿ ವಿಭಜನೆಯಾಗುತ್ತದೆ ಮತ್ತು ಇವುಗಳು ಮುಂದೆ ನ್ಯಾನೊ ಘಟಕಗಳಾಗಿ ಒಡೆಯುತ್ತವೆ (0.1 ಮಿ.ಮೀ. ಗಿಂತ ಕಡಿಮೆ). ಸಮಸ್ಯೆಯೆಂದರೆ ಈ ಕಣಗಳು ಆಹಾರ ಸರಪಳಿಯನ್ನು ಪ್ರವೇಶಿಸುತ್ತಿವೆ. ಮೈಕ್ರೊಪ್ಲಾಸ್ಟಿಕ್ಗಳು ಮಣ್ಣಿನ ಜೀವಿಗಳೊಂದಿಗೆ ಸಂಪರ್ಕ ಹೊಂದಬಹುದು. ಅವುಗಳ ಆರೋಗ್ಯ ಮತ್ತು ಮಣ್ಣಿನ ಕಾರ್ಯಗಳ ಮೇಲೆ ಮೈಕ್ರೋಪ್ಲಾಸ್ಟಿಕ್ಗಳು ಪರಿಣಾಮ ಬೀರುತ್ತವೆ. ಕ್ಲೋರಿನೇಟೆಡ್ ಪ್ಲಾಸ್ಟಿಕ್ ಸುತ್ತಮುತ್ತಲಿನ ಮಣ್ಣಿನಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು, ಅದು ನಂತರ ಅಂತರ್ಜಲ ಅಥವಾ ಇತರ ಸುತ್ತಮುತ್ತಲಿನ ನೀರಿನ ಮೂಲಗಳಿಗೆ ಮತ್ತು ಪರಿಸರ ವ್ಯವಸ್ಥೆಗೆ ಹರಿಯುತ್ತದೆ. ಇಂತಹ ನೀರು ಅದನ್ನು ಕುಡಿಯುವ ಎಲ್ಲಾ ಜೀವಿಗಳ ಮೇಲೆ ಸಂಭಾವ್ಯ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಪ್ರಪಂಚದಾದ್ಯಂತದ ಹಲವಾರು ದೇಶಗಳು ಮೈಕ್ರೊಪ್ಲಾಸ್ಟಿಕ್ನ ಒಂದು ರೀತಿಯ ಮೈಕ್ರೊಪ್ಲಾಸ್ಟಿಕ್ ಅನ್ನು ಒಳಗೊಂಡಿರುವ ಸೌಂದರ್ಯವರ್ಧಕಗಳು ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ತಯಾರಿಕೆಯನ್ನು ನಿಷೇಧಿಸಲು ಕಾನೂನನ್ನು ರೂಪಿಸಿವೆ. ಆದರೆ ಇನ್ನೂ ಯಾವುದೇ ಕೃಷಿ-ಪರಿಸರ ಮೈಕ್ರೋಪ್ಲಾಸ್ಟಿಕ್ ಸಂಬಂಧಿತ ಕಾನೂನುಗಳಿಲ್ಲ. ಕಳೆದ ವರ್ಷ, ಯುರೋಪಿಯನ್ ಕೆಮಿಕಲ್ಸ್ ಏಜೆನ್ಸಿ (ECHA) ಉದ್ದೇಶಪೂರ್ವಕವಾಗಿ ಸೇರಿಸಲಾದ ಮೈಕ್ರೋಪ್ಲಾಸ್ಟಿಕ್ಗಳ ಬಳಕೆಯಿಂದ ಉಂಟಾಗುವ ಪರಿಸರ ಮತ್ತು ಆರೋಗ್ಯದ ಅಪಾಯಗಳನ್ನು ನಿರ್ಣಯಿಸಿತು ಮತ್ತು ಕೃಷಿ ಉದ್ದೇಶಕ್ಕಾಗಿ ಮೈಕ್ರೋಪ್ಲಾಸ್ಟಿಕ್ಗಳ ಬಳಕೆಯ ಮೇಲಿನ ನಿರ್ಬಂಧದ ಪ್ರಸ್ತಾಪವನ್ನು ಬಿಡುಗಡೆ ಮಾಡಿತು. ಪರಿಸರ ಮಾಲಿನ್ಯಕಾರಕವಾಗಿ ಪ್ಲಾಸ್ಟಿಕ್ನ ಪರಿಣಾಮವನ್ನು ಕಡಿಮೆ ಮಾಡಲು ಈ ಪ್ರಸ್ತಾವನೆಯು 2018 ಯುರೋಪಿಯನ್ ಕಮಿಷನ್ನ ಪ್ಲಾಸ್ಟಿಕ್ ತಂತ್ರದೊಂದಿಗೆ ಸೇರಿಸಲಾಯಿತು. ಕಳೆದ ವರ್ಷ ಯುರೋಪಿನ ಕಾರ್ಡಿಫ್ ವಿಶ್ವವಿದ್ಯಾನಿಲಯದ ಸಂಶೋಧಕರು ಕೃಷಿ ಮಣ್ಣಿನಲ್ಲಿ ನಡೆಸಿದ ಸಂಶೋಧನೆಯೊಂದು ಆಘಾತಕಾರಿ ಅಂಶಗಳನ್ನು ಬಿಡುಗಡೆ ಮಾಡಿದೆ. ಸಂಶೋಧಕರ ಪ್ರಕಾರ ಯುರೋಪಿನಲ್ಲಿ ಪ್ರತಿವರ್ಷ 31,000 ದಿಂದ 42,000 ಟನ್ನಷ್ಟು (86-710 ಟ್ರಿಲಿಯನ್ ಮೈಕ್ರೋಪ್ಲಾಸ್ಟಿಕ್ ಕಣಗಳು) ಮೈಕ್ರೋಪ್ಲಾಸ್ಟಿಕ್ ಕೃಷಿ ಭೂಮಿಗೆ ಸೇರುತ್ತದೆ ಎಂದು ಹೇಳಿರುವುದು ಕಳವಳಕಾರಿಯಾಗಿದೆ. ಈ ಪ್ಲಾಸ್ಟಿಕ್ಗಳ ಮೂಲಕ್ಕೆ ಸಂಬಂಧಿಸಿದಂತೆ, ತಂಡವು ಕೊಳಚೆನೀರಿನ ಕೆಸರು, ಯುರೋಪ್ನಾದ್ಯಂತ ಕೃಷಿ ಭೂಮಿಗಳಲ್ಲಿ ರಸಗೊಬ್ಬರಗಳಿಗೆ ಫೀಡ್ಸ್ಟಾಕ್ ಆಗಿ ಸಾಮಾನ್ಯವಾಗಿ ಬಳಸಲಾಗುವ ವಸ್ತುವನ್ನು ಸೂಚಿಸುತ್ತದೆ. ಕೊಳಚೆನೀರಿನ ಕೆಸರಿನಲ್ಲಿ ಸುಮಾರು ಶೇ. 1 ಮೈಕ್ರೊಪ್ಲಾಸ್ಟಿಕ್ಗಳಿರುವುದನ್ನು ಅವರು ಅಂದಾಜಿಸಿದ್ದಾರೆ.
ಯುರೋಪಿನಲ್ಲಿ ಕೊಳಚೆನೀರಿನ ಕೆಸರನ್ನು ಕೃಷಿ ಭೂಮಿಗೆ ಗೊಬ್ಬರವಾಗಿ ಬಳಸಲಾಗುತ್ತದೆ. ಏಕೆಂದರೆ ಇದು ಸಾರಜನಕ, ರಂಜಕ ಮತ್ತು ಬೆಳೆಗಳನ್ನು ಬೆಳೆಯಲು ಸಹಾಯ ಮಾಡುವ ಇತರ ಪೋಷಕಾಂಶಗಳ ನವೀಕರಿಸಬಹುದಾದ ಮೂಲವಾಗಿದೆ. ಭಾಗಶಃ, ಕೊಳಚೆನೀರಿನ ಕೆಸರಿನಿಂದ ಪಡೆದ ರಸಗೊಬ್ಬರಗಳು ಯುರೋಪ್ನಲ್ಲಿ ಜನಪ್ರಿಯವಾಗಿವೆ. ಅಲ್ಲದೆ ರಸಗೊಬ್ಬರಗಳಿಂದ ಕೃಷಿ ಭೂಮಿಗೆ ಸೇರಿಕೊಳ್ಳುವ ಮೈಕ್ರೋಪ್ಲಾಸ್ಟಿಕ್ಗಳು ನೀರಿನ ಹರಿವು ಅಥವಾ ಅಂತರ್ಜಲಕ್ಕೆ ಒಳನುಸುಳುವಿಕೆಯ ಮೂಲಕ ಮತ್ತೆ ಜಲಮೂಲಗಳಾಗಿ ಕೊನೆಗೊಳ್ಳುತ್ತವೆ ಎಂದು ತಂಡವು ವಿವರಿಸುತ್ತದೆ. ಮೈಕ್ರೋಪ್ಲಾಸ್ಟಿಕ್ ಮೂಲದ ಜಲವು ಸಸ್ಯ ಮತ್ತು ಪ್ರಾಣಿಗಳ ಜೀವನಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತವೆ. ಜೀವಿಗಳು ಸೇವಿಸುವ ಕಲುಷಿತ ನೀರು ಮತ್ತು ಆಹಾರದ ಮೂಲಕ ವಿಷಕಾರಿ ರಾಸಾಯನಿಕಗಳು ದೇಹವನ್ನು ಸೇರುತ್ತವೆ. ಅದರಿಂದ ಅಪಾಯಕಾರಿ ರೋಗಕಾರಕಗಳನ್ನು ರಕ್ತ ಅಥವಾ ಅಂಗಗಳಂತಹ ಅಂಗಾಂಶಗಳಿಗೆ ಸಾಗಿಸಬಹುದು. ಆಹಾರ ಸರಪಳಿಯಾದ್ಯಂತ ಪ್ರಾಣಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯದೊಂದಿಗೆ ಪರಭಕ್ಷಕಗಳಿಗೂ ಮೈಕ್ರೋಪ್ಲಾಸ್ಟಿಕ್ಗಳು ವರ್ಗಾವಣೆಯಾಗುತ್ತವೆ. ಈ ಅಧ್ಯಯನವು ಸೌತ್ ವೇಲ್ಸ್ನ ನ್ಯೂಪೋರ್ಟ್ನಲ್ಲಿರುವ ನ್ಯಾಶ್ ತ್ಯಾಜ್ಯನೀರಿನ ಸಂಸ್ಕರಣಾ ಘಟಕದಿಂದ ತೆಗೆದ ಮಾದರಿಗಳನ್ನು ಆಧರಿಸಿದೆ. ಈ ಮಾದರಿಗಳ ಆಧಾರದ ಮೇಲೆ, ತಂಡವು ಕೃಷಿ ಪ್ರದೇಶಕ್ಕೆ ಒಳಬರುವ ಒಳಚರಂಡಿ ಕೆಸರು ಪ್ರತಿ ಗ್ರಾಂಗೆ 24 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಅಥವಾ ಅದರ ತೂಕದ ಸುಮಾರು ಶೇ.1ರ ವರೆಗೆ ಹೊಂದಿರುತ್ತದೆ ಎಂದು ವರದಿ ಮಾಡಿದೆ. ಇದು ಯುರೋಪಿನ ಸಮಸ್ಯೆ ಮಾತ್ರ ಅಂದುಕೊಳ್ಳುವಂತಿಲ್ಲ. ನಮ್ಮ ಭಾರತದಲ್ಲೂ ಅಂತಹ ಸಾಮ್ಯತೆಯುಳ್ಳ ಕೃಷಿ ವಿಧಾನಗಳಿವೆ. ಬಹುತೇಕ ನಗರಗಳ ಆಸುಪಾಸುಗಳಲ್ಲಿ ತರಕಾರಿ ಹಾಗೂ ಸೊಪ್ಪುಗಳನ್ನು ಚರಂಡಿ ನೀರಿನಿಂದ ಬೆಳೆಸಲಾಗುತ್ತದೆ. ಮೆಟ್ರೋಪಾಲಿಟನ್ ನಗರಗಳ ಚರಂಡಿ ನೀರು ಸಂಪೂರ್ಣವಾಗಿ ಪ್ಲಾಸ್ಟಿಕ್ಮಯವಾಗಿರುತ್ತದೆ. ಚರಂಡಿ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶಗಳು ಇರುವುದು ಅನೇಕ ವೇಳೆ ದೃಢಪಟ್ಟಿದೆ. ಅಲ್ಲದೆ ಬಹುತೇಕ ಕೈಗಾರಿಕೆಗಳ ತ್ಯಾಜ್ಯವು ನೇರವಾಗಿ ಜಲಮೂಲಗಳನ್ನು ಸೇರುತ್ತದೆ. ಇದೇ ನೀರು ಕೃಷಿಗೆ ಬಳಕೆಯಾಗುತ್ತದೆ. ಇಲ್ಲಿಯೂ ಮೈಕ್ರೋಪ್ಲಾಸ್ಟಿಕ್ನ ಅಂಶಗಳು ಮಣ್ಣಿನಲ್ಲಿ ಸೇರುತ್ತವೆ. ಹೀಗೆ ವಿವಿಧ ಮೂಲಗಳಿಂದ ಮೈಕ್ರೋಪ್ಲಾಸ್ಟಿಕ್ ಆಹಾರ ಪದಾರ್ಥಗಳ ಮೂಲಕ ನೇರವಾಗಿ ಜೀವಿಗಳ ದೇಹವನ್ನು ಸೇರುತ್ತದೆ. ಇದನ್ನು ತಡೆಯಲು ಇದುವರೆಗೂ ಯಾವುದೇ ಕಾನೂನುಗಳಿಲ್ಲದಿರುವುದು ದುರಂತ.
ಮೈಕ್ರೋಪ್ಲಾಸ್ಟಿಕ್ ಸಮಸ್ಯೆಯನ್ನು ಹೋಗಲಾಡಿಸಲು ಈಗಾಗಲೇ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕೆಲವು ನೀತಿ, ನಿಯಮಗಳನ್ನು ರೂಪಿಸಲಾಗಿದೆ. ಆದರೂ ಸದ್ಯಕ್ಕೆ ಜನಾಂದೋಲನಗೊಳ್ಳದ ಹೊರತು ಈ ಸಮಸ್ಯೆಗೆ ಪರಿಹಾರವಿಲ್ಲ. ಇದಕ್ಕೆ ಇರುವ ಒಂದೇ ಸಮಸ್ಯೆ ಎಂದರೆ ಪ್ರತಿಯೊಬ್ಬ ನಾಗರಿಕರಲ್ಲೂ 'ಪ್ಲಾಸಾ' ಬೆಳೆಸುವುದು. 'ಪ್ಲಾಸಾ' ಎಂದರೆ ಪ್ಲಾಸ್ಟಿಕ್ ಸಾಕ್ಷರತೆ ಎಂದರ್ಥ. ಜಲ ಸಾಕ್ಷರತೆಯಂತೆ ಪ್ಲಾಸ್ಟಿಕ್ ಸಾಕ್ಷರತೆ ಇಂದಿನ ತುರ್ತು ಅಗತ್ಯವಾಗಿದೆ. ಪ್ರತಿದಿನವೂ ವಿವಿಧ ಮಾಧ್ಯಮಗಳ ಮೂಲಕ ಪ್ಲಾಸ್ಟಿಕ್ನಿಂದಾಗುವ ಅನಾಹುತಗಳನ್ನು ಜನರಿಗೆ ತಲುಪಿಸುವ ಕಾರ್ಯವಾಗಬೇಕು. ಇದು ಜನಾಂದೋಲನ ರೀತಿಯಲ್ಲಿ ಪ್ರತಿ ನಗರ, ಪ್ರತಿ ಹಳ್ಳಿ ಹಳ್ಳಿಯ ಜನರಿಗೂ ತಲುಪಬೇಕು. ಪ್ರತಿ ತರಗತಿಯ ಪಠ್ಯ ವಿಷಯದಲ್ಲೂ ಪ್ಲಾಸ್ಟಿಕ್ನಿಂದಾಗುವ ಅನಾಹುತಗಳ ಕುರಿತ ಪಾಠಗಳನ್ನು ಅಳವಡಿಸುವ ಮೂಲಕ ಶಾಲಾ ಮಕ್ಕಳಲ್ಲೂ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವಂತಾಗಬೇಕು. ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ಸ್ವಯಂ ಪ್ರೇರಣೆ ಅಗತ್ಯ. ಪ್ರತಿಯೊಬ್ಬರೂ ಅಗತ್ಯ ಕ್ರಮವಹಿಸುವ ಮೂಲಕ ಮೈಕ್ರೋಪ್ಲಾಸ್ಟಿಕ್ ಹಾವಳಿಯನ್ನು ತಡೆಯಲು ಸಾಧ್ಯವಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.