-

ಮಾನವೀಯ ಸಂಬಂಧಗಳ ಗಟ್ಟಿಗೊಳಿಸುವ ಕಥೆಗಳು

-

ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ ಕಥನ ಸಾಹಿತ್ಯದ ಬಗ್ಗೆ ಅಪಾರ ಕುತೂಹಲ ಮತ್ತು ಆಸಕ್ತಿ; ಅವರು ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ್ದೇ ದೇವನೂರ ಮಹಾದೇವ ಅವರ ಕತೆಗಳನ್ನು ಕುರಿತಾದ ವಿಮರ್ಶಾ ಲೇಖನದಿಂದ. ಅಲ್ಲಿಂದ ಪ್ರಾರಂಭವಾದ ಕಥನ ಕುತೂಹಲ ಅವರಿಗೆ ಇನ್ನೂ ತಣಿದಿಲ್ಲ. ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ ಸುಮಾರು 42 ವರ್ಷಗಳಿಂದ ಮಹತ್ವದ ಕತೆಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಸೃಜನಶೀಲ ಸ್ವರೂಪದ ಬಗ್ಗೆ ಚಿಂತನೆಗಳನ್ನು ನಡೆಸಿ ಲೇಖನಗಳನ್ನು ಬರೆದಿದ್ದಾರೆ. ‘ಶತಮಾನದ ಕನ್ನಡ ಸಣ್ಣಕತೆಗಳ ಸಮೀಕ್ಷೆ’ ಎಂಬ ಗ್ರಂಥವನ್ನು ಬರೆದು ಪ್ರಕಟಿಸಿದ್ದಾರೆ. ಅವರು ಶತಮಾನದ ಕನ್ನಡ ಸಣ್ಣಕತೆಗಳ ಸಮೀಕ್ಷೆ ಬಗ್ಗೆ ಚಿಂತನ ಮಂಥನ ಮಾಡಿದಷ್ಟು ಬೇರೆ ಯಾವುದೇ ಪ್ರಕಾರದ ಬಗ್ಗೆ ಮಾಡಿಲ್ಲ. ವಿಮರ್ಶೆ, ನಾಟಕ, ಕಾದಂಬರಿ, ಅನುವಾದ ಹೀಗೆ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲಿ ಮಹತ್ವದ ಕೆಲಸವನ್ನು ಮಾಡಿ ಕೃತಿಗಳನ್ನು ಪ್ರಕಟಿಸಿರುವುದು ಕನ್ನಡ ವಿದ್ವತ್‌ವಲಯ ಗುರುತಿಸಿದೆ; ಭಾಷಾಂತರ ಅಥವಾ ಅನುವಾದದ ಬಗ್ಗೆಯೂ ಹೆಚ್ಚು ಕೆಲಸವನ್ನು ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಅವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿರುವ ಸಾಹಿತ್ಯ ಪ್ರಕಾರವೆಂದರೆ ಅವರಿಗೆ ಬಹುಪ್ರಿಯವಾದ ಕಥೆಗಳನ್ನೇ; ಇದರಲ್ಲಿ ಜನಪದ ಕತೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಏಕೆಂದರೆ ಅವರು ಪ್ರಕಟಿಸಿರುವ ಅನುವಾದಿತ ಕೃತಿಗಳಲ್ಲಿ ಮೊದಲನೆಯದು ಜಗತ್ತಿನ ವಿವಿಧ ದೇಶಗಳ ಬಗ್ಗೆ ಪ್ರಸಿದ್ಧರಾದ ಕತೆಗಾರರ ಕತೆಗಳನ್ನೊಳಗೊಂಡಿದ್ದರೆ, ಉಳಿದೆರಡು ಪುಸ್ತಕಗಳು ಜನಪದ ಕತೆಗಳ ಅನುವಾದಗಳು; ಇದರಲ್ಲಿ ಒಂದು ಕರ್ನಾಟಕ ಜನಪದ ಕತೆಗಳು. ಮತ್ತೊಂದು ಆಫ್ರಿಕನ್ ಜನಪದ ಕತೆಗಳು.

ಕರೀಗೌಡರು ಮೊದಲೇ ತಿಳಿಸಿದಂತೆ ಕಥನ ಪ್ರಿಯರು. ಕಥನವು ಮೊದಲಿನಿಂದಲೂ ಮನುಷ್ಯನ ನಾಗರಿಕತೆಯ ವಿಕಾಸಕ್ಕೆ ನೆರವಾಗಿರುವಂತಹದ್ದು. ಹಿಂದೆ ಸಣ್ಣಕತೆಗಳನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ದಡ್ಡರನ್ನು ಬುದ್ಧಿವಂತರನ್ನಾಗಿ ಮಾಡುವುದಕ್ಕಾಗಿ ಕತೆಗಳನ್ನು ಬಳಸುತ್ತಿದ್ದರು ಎಂಬುದು ಹಳೆಯ ವಿಚಾರ. ಈಗಲೂ ಕೂಡಾ ನೈತಿಕ ಅರಿವಿನ ಎಚ್ಚರಿಕೆಗಾಗಿ, ಅದರ ಬದಲಾವಣೆಗಾಗಿ ಬಳಸಲಾಗುತ್ತದೆ. ಆದ್ದರಿಂದಲೇ ಕತೆಯನ್ನು ನೈತಿಕ ಸಾಕ್ಷಾತ್ಕಾರದ ಕಲೆ (Art of moral Revelation) ಎಂದು ಕರೆಯಲಾಗುತ್ತದೆ. ಅಂದರೆ ಕತೆಗಳು ಮಾನವನ ಬದುಕಿಗೆ, ಪೂರಕವಾಗಿಯೇ ಮೈದಾಳುತ್ತಾ ಬಂದಿವೆ. ಕಾದಂಬರಿ ಕೂಡಾ ನೈತಿಕ ವಿಕಾಸದ ಕಲೆ (Art of moral Evolution). ಜೊತೆಗೆ ಸಣ್ಣ ಕತೆಯು ಬಡವರು, ದುರ್ಬಲರು, ದುರ್ಲಕ್ಷಿತರು, ದುಃಖಿತರು, ಪಡುವ ಪಾಡನ್ನು ವಿವರಿಸುತ್ತದೆ. ಕರೀಗೌಡರು ತಮ್ಮ ಎಲ್ಲಾ ಕತೆಗಳಲ್ಲೂ ಈ ಬಡವರ ಪಾಡನ್ನು, ಅವರ ಬದುಕಿನ ಸ್ವರೂಪವನ್ನು ಅನಾವರಣಗೊಳಿಸಿರುವುದನ್ನು ಕಾಣಬಹುದು. ಈ ಬಡವರ ಬದುಕು ಸಾಹಿತ್ಯದ ಸಾರ್ವಭೌಮ ವಸ್ತುವಾಗಿ ಮೊದಲಿನಿಂದಲೂ ನಾನಾ ರೀತಿಯಲ್ಲಿ ಸಾಹಿತ್ಯ ಪ್ರಕಾರಗಳಲ್ಲಿ ಮೈದಾಳಿದೆ. ಬಡವರ ವಸ್ತುವನ್ನು ಯಾವುದೇ ಲೇಖಕನಾಗಿರಲಿ ಕಲಾತ್ಮಕವಾಗಿ ಅಭಿವ್ಯಕ್ತಿಸಿದ್ದರೆ, ಖಂಡಿತವಾಗಿಯೂ ಆ ಕತೆ ಎಲ್ಲಾ ದೇಶ ಭಾಷೆಗಳಲ್ಲಿ ಶ್ರೇಷ್ಠ ಕತೆಗಳಾಗಿ ಉಳಿದುಕೊಂಡು ಬರುತ್ತವೆ. ಹೀಗಾಗಿ ಕರೀಗೌಡರು ಅನುವಾದ ಮಾಡಲು ಆಯ್ಕೆ ಮಾಡಿಕೊಂಡಿರುವ ಕತೆಗಳು ಬಡವರ, ಶೋಷಣೆಗೆ ಒಳಗಾದವರ ಕತೆಗಳೇ ಆಗಿವೆ. ಈ ಕತೆಗಳು ಜಗತ್ತಿನ ಅತ್ಯುತ್ತಮ ಬರಹಗಾರರ ಅತ್ಯುತ್ತಮ ಕತೆಗಳೂ ಆಗಿರುವುದು ಮತ್ತೊಂದು ವಿಶೇಷ.

ಜನಪದ ಕತೆಗಳ ಆಯ್ಕೆಯ ಹಿನ್ನೆಲೆಯಲ್ಲಿ ಕರೀಗೌಡರು ತಮ್ಮ ಸೃಜನಶೀಲತೆಗೆ ಆಯ್ಕೆ ಮಾಡಿಕೊಂಡಿರುವ ಕಥಾಸಾಹಿತ್ಯದ ಆಸಕ್ತಿಯೂ ಕಾರಣವಾಗಿದೆ. ಅವರಿಗೆ ಪ್ರಿಯವಾದದ್ದು ಕಥನವೇ. ಅವರ ಸೃಜನಶೀಲ ಕತೆಗಳಲ್ಲಿ ಗ್ರಾಮೀಣ ಪ್ರದೇಶವು ಪಡೆದುಕೊಳ್ಳುತ್ತಿರುವ ಪಲ್ಲಟ, ಬದಲಾವಣೆ, ಮನುಷ್ಯ-ಮನುಷ್ಯರ ಸಂಬಂಧಗಳು, ಸಂಸ್ಕೃತಿಯ ಸ್ವರೂಪ, ಸಾಮಾಜಿಕ ಆರ್ಥಿಕ ಏರುಪೇರುಗಳನ್ನು ಚಿತ್ರಿಸುತ್ತಾ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ಅವರು ನಿರ್ಲಿಪ್ತವಾಗಿ ಕತೆಯನ್ನು ನಿರೂಪಿಸುವ ಆಕರ್ಷಕ ಕ್ರಮವಿರುವುದನ್ನು ಗಮನಿಸಬಹುದು. ಮಾನವೀಯ ಮೌಲ್ಯಗಳು, ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕೆಂಬ ಆಶಯ ಅವರ ಕಥೆಗಳಲ್ಲಿದೆ.

ಇಂತಹ ಕತೆಗಳನ್ನು ‘ಮಾಯಾಗನ್ನಡಿ’ ಹೆಸರಿನಲ್ಲಿ ಅನುವಾದಿಸಿ ಕನ್ನಡ ಓದುಗರಿಗೆ ಕೊಟ್ಟಿರುವುದು ಕನ್ನಡ ಸಂಸ್ಕೃತಿಗೆ ಅವರು ಕೊಟ್ಟಿರುವ ಮಹತ್ವಪೂರ್ಣ ಕೊಡುಗೆ. ಇಲ್ಲಿ ಕತೆಗಳ ವಸ್ತುವನ್ನು ವಿವರಿಸುವುದಕ್ಕಿಂತ ಅವರ ಅನುವಾದದ ಸ್ವರೂಪವನ್ನು ಕುರಿತೇ ಚರ್ಚಿಸಲಾಗಿದೆ. ಇದರ ಉದ್ದೇಶ ಕತೆಗಳನ್ನು ಓದುಗರೇ ಓದುವಂತಾಗಲಿ ಎಂಬುದು. ಕರೀಗೌಡ ಬೀಚನಹಳ್ಳಿ ಅವರಿಂದ ಮತ್ತಷ್ಟು ಇಂತಹ ಅನುವಾದಗಳು ಬರಲಿ.

(ಈ ಕೃತಿ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top