ಸಮಾಜಕಾರ್ಯ ಶಿಕ್ಷಣಕ್ಕೆ ಸವಾಲು ನೂರಾರು
-

ಸಮಾಜಕ್ಕೆ ಯಾವುದರ ಅಗತ್ಯವಿದೆಯೋ ಅದನ್ನು ನೀಡುವುದೇ ಸಮಾಜಕಾರ್ಯ ಶಿಕ್ಷಣದ ಮೂಲ ಉದ್ದೇಶ. ಈ ಉದ್ದೇಶದೊಂದಿಗೆ ಸ್ಥಾಪಿತವಾದ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣಕ್ಕೆ ಎಂಟು ದಶಕಗಳ ಸುದೀರ್ಘ ಇತಿಹಾಸವಿದೆ. ಶತಮಾನದ ಸಮೀಪ ಇರುವುದರಿಂದ ಚರಿತ್ರೆಯಲ್ಲಿ ಇದು ಬಹುದೊಡ್ಡ ಅವಧಿ. ಸಮಾಜದ ಅನಕೂಲದಿಂದ ವಂಚಿತರಾಗಿ ಅಂಚಿಗೆ ತಳ್ಳಲ್ಪಟ್ಟ ವಗರ್ಗಳ ಬದುಕಿನಲ್ಲಿ ಆಶಾ ಕಿರಣವಾಗಿ ಮೂಡಿಬಂದು ಅವರ ಬದುಕನ್ನು ಬದಲಿಸುತ್ತಿರುವ ಸಮಾಜಕಾರ್ಯ ಶಿಕ್ಷಣದ ಪ್ರಯತ್ನಗಳ ಬಗ್ಗೆ ಸಮಾಜಕಾರ್ಯ ಶಿಕ್ಷಣ ಏನು ಮಾಡಿದೆ, ಏನು ಮಾಡಬೇಕು ಎಂಬ ಪ್ರಶ್ನೆಗೆ ವಿಶ್ಲೇಷಿಸುವ ದಿನ ಇದಾಗಿದೆ.
ಭಾರತದಲ್ಲಿ ಇಲ್ಲಿಯವರೆಗೂ ಸಮಾಜಕಾರ್ಯ ಒಂದು ಪರಿಪೂರ್ಣವಾದ ವೃತ್ತಿ ಎಂದು ಗುರುತಿಸಿಕೊಂಡಿಲ್ಲ ಮತ್ತು ವೃತ್ತಿಪರ ಶಿಕ್ಷಣವೆಂದು ಸಮಾಜಕಾರ್ಯ ಪರಿಗಣಿತವಾಗಿಲ್ಲ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆ ಅಮೆರಿಕದ ಯಥಾವತ್ ಮಾದರಿ. ಪಾಶ್ಚಾತ್ಯ ಸಮಾಜಕಾರ್ಯ ಶಿಕ್ಷಣ ತಜ್ಞರು ಅವರ ನೆಲಕ್ಕೆ ತಕ್ಕಂತೆ ರೂಪಿಸಿದ ಸಿದ್ಧಾಂತ, ಪರಿಕಲ್ಪನೆ, ವಿಧಾನ, ಪರದೃಷ್ಟಿಗಳು ಭಾರತದ ಸಂದರ್ಭದಲ್ಲಿ ಹೇಳಿಕೊಳ್ಳುವ ಫಲಶೃತಿಯನ್ನು ನೀಡುತ್ತಿಲ್ಲ ಎಂಬ ಅಪವಾದವಿದೆ. ಈ ಸಮಾಜಕಾರ್ಯ ಸಾಹಿತ್ಯ ಕೇವಲ ಪರೀಕ್ಷೆ ಬರೆದು ಪಾಸಾಗಲಿಕ್ಕೆ ಸೀಮಿತವಾಗಿರುತ್ತದೆಯೇ ವಿನಃ ವಾಸ್ತವದ ವೃತ್ತಿಯಲ್ಲಿ ಬಳಕೆಯಾಗುತ್ತಿಲ್ಲ. ತರಬೇತಿ ಪಡೆದ ವೃತ್ತಿಪರ ಸಮಾಜಕಾರ್ಯಕರ್ತ ಯಾವತ್ತೂ ಸಾರ್ವಜನಿಕವಾಗಿ ಗುರುತಿಸಿಕೊಂಡಿಲ್ಲ. ಹೀಗಾಗಿ ಸಮಾಜಕಾರ್ಯ ಶಿಕ್ಷಣ ಭಾರತದ ಸಮಾಜದಲ್ಲಿ ಅಪರಿಚಿತವಾಗಿ ಉಳಿದಿದೆ.
ಹಾಗೆಂದ ಮಾತ್ರಕ್ಕೆ ಸಮಾಜಕಾರ್ಯ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಆಗಿಯೇ ಇಲ್ಲ ಅಥವಾ ಆಗುತ್ತಿಲ್ಲ ಎಂದು ಹೇಳುವುದು ಸಮಂಜಸವಲ್ಲ. ಸಮುದಾಯಗಳ ಸಾಮೂಹಿಕ ನಡವಳಿಕೆಯಲ್ಲಿ ಆದ ಸಾಮೂಹಿಕ ಬದಲಾವಣೆಯ ಕುರಿತು ಸಮಾಜಕಾರ್ಯ ಗಮನ ಹರಿಸುತ್ತದೆ. ಆದರೆ ಕೆಲವು ಅಂಶಗಳ ಮೇಲೆ ಗಣನೀಯ ಪರಿಣಾಮ ಬೀರುತ್ತದೆ ಎನ್ನುವುದು ಗಮನಾರ್ಹ.
ಡಾ. ಕ್ಲೀಫರ್ಡ್ ಮ್ಯಾನ್ಶರ್ಟ್ರವರ ನಿರ್ದೇಶನದಲ್ಲಿ ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆಯು ಸರ್ ದೋರಬ್ಜಿ ಟಾಟಾ ಅವರಿಗೆ ಸಲ್ಲುತ್ತದೆ. 1936ರಲ್ಲಿ ಅವರು ಮುಂಬೈಯಲ್ಲಿ ‘ಟಾಟಾ ಗ್ರ್ಯಾಜುವೇಟ್ ಸ್ಕೂಲ್ ಆಫ್ ಸೋಸಿಯಲ್ ವರ್ಕ್’ ಮೂಲಕ ಮೊದಲ ಬಾರಿಗೆ ಸಮಾಜಕಾರ್ಯ ಶಿಕ್ಷಣವನ್ನು ಆರಂಭಿಸಿದರು. ಈ ಮೂಲಕ ಇಂದು ಸಾವಿರಕ್ಕೂ ಹೆಚ್ಚು ಸಮಾಜಕಾರ್ಯ ಪ್ರಶಿಕ್ಷಣ ಶಾಲೆಗಳು, ತರಬೇತಿಗೊಂಡ ಲಕ್ಷಾಂತರ ವಿದ್ಯಾರ್ಥಿಗಳು ಸೈದ್ಧಾಂತಿಕ ಮತ್ತು ಪ್ರಾಯೋಗಿಕವಾಗಿ ಕಲಿಯುವ ಮೂಲಕ ನಮ್ಮ ದೇಶದಲ್ಲಿ ವೃತ್ತಿಪರ ಸಮಾಜಕಾರ್ಯ ಶಿಕ್ಷಣದ ಯುಗ ಆರಂಭವಾಯಿತು. ಆದರೆ ತರಬೇತಿಗೆ ನಿಯೋಜನೆಗೊಂಡ ಸಾವಿರಾರು ಪ್ರಾಧ್ಯಾಪಕ ವೃಂದ ಸಮಾಜಕಾರ್ಯದ ಸಿದ್ಧಾಂತಕ್ಕೂ ಮತ್ತು ಕ್ಷೇತ್ರ ಸೇವೆಗಳ ನಡುವೆ ಸಮನ್ವಯವನ್ನು ಸಾಧಿಸುವಲ್ಲಿ ಸೋಲುತ್ತಿದೆ. ಇದಕ್ಕೆ ಕಾರಣ ಈ ಶಿಕ್ಷಣದ ಸಾಹಿತ್ಯವೆಲ್ಲ ಆಂಗ್ಲ ಭಾಷೆಯಲ್ಲಿ ಲಭ್ಯವಿದ್ದು ಗ್ರಾಮೀಣ ಭಾರತದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆಯಲ್ಲದೆ ಅವರನ್ನು ನಿರಾಸಕ್ತರನ್ನಾಗಿಸಿದೆ.
1951ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಮಾಜಕಾರ್ಯವು ಒಂದು ಐಚ್ಛಿಕ ವಿಷಯವನ್ನಾಗಿ ಪರಿಚಯಿಸುವುದರೊಂದಿಗೆ ಕರ್ನಾಟಕಕ್ಕೆ ಸಮಾಜಕಾರ್ಯ ಶಿಕ್ಷಣ ಪ್ರವೇಶಿಸಿತು. ನಂತರ 1960ರಲ್ಲಿ ಸಮಾಜಕಾರ್ಯದಲ್ಲಿ ಸರ್ಟಿಫಿಕೇಟ್ ಕೋರ್ಸ್ನೊಂದಿಗೆ ಮಂಗಳೂರಿನ ರೋಶನಿ ನಿಲಯದಲ್ಲಿ ಪ್ರಾರಂಭವಾಯಿತು. ಆನಂತರ ಕರ್ನಾಟಕದ ಇತರ ವಿಶ್ವವಿದ್ಯಾನಿಲಯಗಳಲ್ಲಿ ಸಮಾಜಕಾರ್ಯ ಶಾಲೆಗಳು ಸ್ಥಾಪನೆಯಾದವು ಮತ್ತು ಸಮಾಜ ಕಾರ್ಯ ಶಿಕ್ಷಣದ ಕೋರ್ಸುಗಳು ಬಂದವು. ವ್ಯಕ್ತಿಗತ ಸಮಾಜ ಕಾರ್ಯ, ವೃಂದಗತ ಸಮಾಜ ಕಾರ್ಯ, ಸಮುದಾಯ ಸಂಘಟನೆ, ಸಮಾಜ ಕಾರ್ಯ ಆಡಳಿತ, ಸಮಾಜ ಕಾರ್ಯ ಸಂಶೋಧನೆ ಮತ್ತು ಸಮಾಜಕ್ರಿಯೆ ಪೂರ್ಣಗೊಂಡ ವಿಭಾಗವಾಗಿ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ಪ್ರಾರಂಭಿಸಿತು. ಆನಂತರ 1962ರಲ್ಲಿ ಭಾರತೀಯ ತರಬೇತಿ ಹೊಂದಿದ ಸಮಾಜ ಕಾರ್ಯ ಸಂಸ್ಥೆಯನ್ನು ನೋಂದಾಯಿಸಲಾಯಿತು.
ಮುಂದೆ ಆಸ್ಪತ್ರೆಗಳಲ್ಲಿ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ, ಅಪರಾಧಿಗಳ ಸುಧಾರಣೆ ಮತ್ತು ಪುನರ್ ವಸತಿ ಕಲ್ಪಿಸುವಲ್ಲಿ, ಸಮಾಜ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದ ಪರವಾಗಿ, ಇಂಡಸ್ಟ್ರಿಯಲ್ ಸಮಾಜಕಾರ್ಯದಲ್ಲಿ, ಕಾರ್ಪೊರೇಟ್ ವಲಯದಲ್ಲಿ ಬೃಹತ್ ಶಾಖೆಗಳಾಗಿ ಸಮಾಜಕಾರ್ಯವು ತನ್ನ ಕ್ಷೇತ್ರವಾಗಿ ಬೆಳೆಯುತ್ತಿದೆ. ಆದರೆ ಪ್ರಗತಿಯಾಗುತ್ತವೆಂದು ಹೇಳುವ ಖಾತರಿಯಿಲ್ಲ, ಕಾರಣ ಬಹಳಷ್ಟು ಕೋರ್ಸ್ಗಳಿಂದ ಸ್ಪರ್ಧೆಯಿದೆ.
ಕ್ಷೇತ್ರಕಾರ್ಯವು ಸಮಾಜಕಾರ್ಯದ ಅವಿಭಾಜ್ಯ ಅಂಗ. ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು, ಭವಿಷ್ಯದ ಉದ್ಯೋಗಕ್ಕೆ ಸಜ್ಜುಗೊಳಿಸಲು ಕ್ಷೇತ್ರಕಾರ್ಯವು ಸಹಾಯಕ. ಆದರೆ ಹಲವು ಶಾಲೆಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕ್ಷೇತ್ರಕಾರ್ಯವು ಸರಿಯಾದ ಯೋಜನೆ, ನಿಯೋಜನೆ, ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ಹಿಮ್ಮಾಹಿತಿಯ ಕೊರತೆಯನ್ನು ಅನುಭವಿಸುತ್ತದೆ ಹಾಗೂ ಕ್ಷೇತ್ರಕಾರ್ಯವು ನಿಯೋಗಗಳಿಂದ ವಿದ್ಯಾರ್ಥಿಗಳು ಸರಿಯಾದ ಬೆಂಬಲ ಪಡೆಯಲು ಸಾಧ್ಯವಾಗದೆ ಅವರು ಇದೊಂದು ಕಾಟಾಚಾರವಾಗಿ ಭಾವಿಸುತ್ತಾರೆ. ವಿದ್ಯಾರ್ಥಿವೇತನಕ್ಕಾಗಿ ಬಹಳಷ್ಟು ಖಾಸಗಿ ಸಂಸ್ಥೆಗಳು ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆದು ವೃತ್ತಿ ಭವಿಷ್ಯವಿಲ್ಲದ ಪ್ರಾಯೋಗಿಕ ಜ್ಞಾನ ನೀಡುತ್ತವೆ.
ಭಾರತದ ಬಹುಸಂಖ್ಯಾತ ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ, ಸಮಾಜಕಾರ್ಯದ ಅವಶ್ಯಕತೆ ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಗಿದೆ. ನಗರ ಕೇಂದ್ರಿತ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳು ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಗಗನಕುಸುಮವಾದರೂ ಸಮಾಜಕಾರ್ಯ ಶಿಕ್ಷಣ ವಿಭಾಗಗಳ ಸ್ಥಿತಿಯಂತೂ ಶೋಚನೀಯ. ವ್ಯವಸ್ಥಿತವಾದ ಪ್ರತ್ಯೇಕ ಶಿಸ್ತುಬದ್ಧ ಕಟ್ಟಡಗಳಿಲ್ಲ. ಬೋಧನಾ ಕೇಂದ್ರದಲ್ಲಿ ಉತ್ತಮ ಗ್ರಂಥಾಲಯ, ಕಂಪ್ಯೂಟರ್ಗಳ ವ್ಯವಸ್ಥೆ ಇಲ್ಲ. ಸಮರ್ಥ ಅನುಭವ ಜ್ಞಾನ ಇರುವ ಬೋಧಕರಿಲ್ಲ. ಸ್ಥಳೀಯ ಸಾಹಿತ್ಯವಿಲ್ಲ. ಈ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದಾಗ ಸಮಾಜವೆಂಬ ಗೋಡೆಯಲ್ಲಿರುವ ಕೋಟ್ಯಂತರ ರಂಧ್ರಗಳಲ್ಲಿ ಕೆಲವನ್ನಾದರೂ ಮುಚ್ಚಲು ಪ್ರಯತ್ನ ಮಾಡಬಹುದು. ಅಂತಹ ಶಿಕ್ಷಣ ನೀಡಿದರೆ ಮಾತ್ರ ಸಮಾಜಕಾರ್ಯವು ಪರಿಪೂರ್ಣವಾಗುತ್ತದೆ.
ಕೆಲವು ಸಮಯಗಳಿಂದ ಇಡೀ ಜಗತ್ತೇ ಕೊರೋನ ಸೋಂಕಿನಿಂದ ತಲ್ಲಣಗೊಂಡಿದ್ದರಿಂದ ಸಮಾಜಕಾರ್ಯದ ದೃಷ್ಟಿಕೋನವು ಬದಲಾಯಿಸಬೇಕಿದೆ. ಜನರ ರೋಗದ ಭಯ, ಸಾವಿನ ಭೀತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಂತಹ ಈ ಸನ್ನಿವೇಶದಲ್ಲಿ ಹೊಸ ಜಗತ್ತು ಬಯಸುವ ಜ್ಞಾನ-ಕೌಶಲ್ಯಗಳು ಇವರಲ್ಲಿವೆಯೇ, ದೇಶದಾದ್ಯಂತ ಸಮಾಜಕಾರ್ಯ ಶಿಕ್ಷಣ ಸಂಸ್ಥೆಗಳಿಂದ ಪ್ರತೀ ವರ್ಷ ಹೊರಬರುವ ಯುವಜನರಿಗೆ ಅದಕ್ಕೆ ಬೇಕಾದಂತೆ ಹೊಸಬರನ್ನು ತರಬೇತುಗೊಳಿಸುವುದಕ್ಕೆ ನಮ್ಮ ಸಮಾಜಕಾರ್ಯ ಶಿಕ್ಷಣ ವ್ಯವಸ್ಥೆ ಸನ್ನದ್ಧವಾಗಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.