ಕಡಿಮೆ ಆಹಾರ ಸೇವನೆ ಮತ್ತು ಹಸಿವಿನಿಂದ ಇರುವುದು ತೂಕವನ್ನು ತಗ್ಗಿಸುವುದಿಲ್ಲ, ಬದಲಿಗೆ ದಪ್ಪವಾಗಿಸುತ್ತದೆ, ಏಕೆ?
-

ಕಡಿಮೆ ಆಹಾರವನ್ನು ಸೇವಿಸುವುದರಿಂದ ಕ್ಯಾಲರಿಗಳು ಕಡಿಮೆಯಾಗುತ್ತವೆ ಮತ್ತು ದೇಹತೂಕವೂ ಕಡಿಮೆಯಿರುತ್ತದೆ ಎಂದು ಹಲವರು ನಂಬುತ್ತಾರೆ, ಆದರೆ ಅದು ಒಂದು ಮಿಥ್ಯೆಯಾಗಿದೆ. ವಾಸ್ತವದಲ್ಲಿ ಕಡಿಮೆ ಆಹಾರ ಸೇವನೆ ಅಥವಾ ಹಸಿದುಕೊಂಡಿರುವುದು ನಿಮ್ಮನ್ನು ಇನ್ನಷ್ಟು ದಪ್ಪವಾಗಿಸಬಹುದು ಮತ್ತು ಚಯಾಪಚಯವನ್ನು ಮಂದಗೊಳಿಸುತ್ತದೆ. ತೂಕ ಹೆಚ್ಚಾಗುವ ಸಮಸ್ಯೆಯು ಕೂಳುಬಾಕುತನದ ಸಿದ್ಧಾಂತವನ್ನು ಮೀರಿದೆ ಎನ್ನುತ್ತಾರೆ ಹಲವು ತಜ್ಞರು.
ನಾವು ಸೇವಿಸಿದ ಆಹಾರವು ಶಕ್ತಿಯಾಗಿ ಪರಿವರ್ತನೆಗೊಂಡಾಗ ಶರೀರವೂ ತಾಪವನ್ನು ಉತ್ಪಾದಿಸುತ್ತದೆ ಮತ್ತು ಇದು ನಮ್ಮ ಶರೀರದ ಉಷ್ಣತೆಯನ್ನು ನಿಯಂತ್ರಣದಲ್ಲಿರಿಸುತ್ತದೆ.
ಪಚನದ ಸಂದರ್ಭದಲ್ಲಿ ಶರೀರವು ನಾವು ತಿಂದ ಆಹಾರವನ್ನು ವಿಭಜಿಸುವ ಪ್ರಕ್ರಿಯೆಯನ್ನು ಕ್ಯಾಟಾಬಾಲಿಸಂ ಮತ್ತು ಹೀಗೆ ವಿಭಜಿತ ಆಹಾರವು ಮೂಳೆಗಳು, ಸ್ನಾಯುಗಳು, ಅಂಗಗಳು, ಕಿಣ್ವಗಳಂತಹ ದೊಡ್ಡ ಭಾಗಗಳಿಗೆ ಪುನರ್ರಚನೆಗೊಳ್ಳುವ ಪ್ರಕ್ರಿಯೆಯನ್ನು ಅನಾಬಾಲಿಸಂ ಎಂದು ಕರೆಯಲಾಗುತ್ತದೆ.
ಕ್ಯಾಟಾಬಾಲಿಸಂ ಮತ್ತು ಅನಾಬಾಲಿಸಂ ಇವುಗಳನ್ನು ಮೆಟಾಬಾಲಿಸಂ ಅಂದರೆ ಚಯಾಪಚಯ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಹೈಪೊಥಾಲಮಸ್ ಅಥವಾ ಮಸ್ತಿಷ್ಕ ನಿಮ್ನಾಂಗವು ನಿಯಂತ್ರಿಸುತ್ತದೆ. ಶರೀರದ ಅಗತ್ಯಕ್ಕೆ ಸಂಬಂಧಿಸಿ ಶರೀರದಲ್ಲಿ ಲಭ್ಯವಿರುವ ಶಕ್ತಿ ಆಧಾರದಲ್ಲಿ ಈ ಚಯಾಪಚಯ ಪ್ರಕ್ರಿಯೆ ಹೆಚ್ಚು ಅಥವಾ ಕಡಿಮೆ ಆಗುತ್ತಿರುತ್ತದೆ. ಆಹಾರದ ಮೂಲಕ ನಾವು ಪಡೆಯುವ ಶಕ್ತಿಯನ್ನು ಕ್ಯಾಲರಿಗಳಲ್ಲಿ ಅಳೆಯಲಾಗುತ್ತದೆ. ನಾವು ಕುಳಿತಿದ್ದಾಗ ಅಥವಾ ಮಲಗಿದ್ದಾಗ ಕೀಲುಗಳು ಚಲನೆಯಲ್ಲಿ ಇಲ್ಲದಿದ್ದಾಗಲೂ ಮತ್ತು ಸ್ನಾಯುಗಳು ವಿಶ್ರಾಂತಿಯಲ್ಲಿ ಇದ್ದಾಗಲೂ ಶರೀರವು ಕ್ಯಾಲರಿಗಳ ದಹನವನ್ನು ಮುಂದುವರಿಸುತ್ತದೆ.
ನಾವು ಸೇವಿಸುವ ಆಹಾರವು ಶರೀರದ ಶಕ್ತಿ ಅಗತ್ಯಗಳನ್ನು ಪೂರೈಸದಿದ್ದಾಗ ಶರೀರವು ಬುದ್ಧಿವಂತಿಕೆಯಿಂದ ಅದಕ್ಕೆ ಹೊಂದಿಕೊಳ್ಳುತ್ತದೆ. ಚಯಾಪಚಯವನ್ನು ಮಂದಗೊಳಿಸುವ ಮೂಲಕ ಶರೀರವು ಅದನ್ನು ಕಡಿಮೆ ಆಹಾರ ಸೇವನೆಗೆ ಸರಿದೂಗಿಸುತ್ತದೆ. ಅಂದರೆ ಶಕ್ತಿಯ ವ್ಯಯವು ಕಡಿಮೆಯಾಗುತ್ತದೆ ಮತ್ತು ಇದರ ಭಾಗವು ಉಷ್ಣ ಉತ್ಪಾದನೆಯನ್ನು ತಗ್ಗಿಸುತ್ತದೆ, ಇದೇ ಕಾರಣದಿಂದ ಕಡಿಮೆ ಕ್ಯಾಲರಿಗಳ ಡಯಟ್ ನಮ್ಮ ಶರೀರಕ್ಕೆ ಚಳಿ ಮತ್ತು ತಂಪಿನ ಭಾವನೆಯನ್ನುಂಟು ಮಾಡುತ್ತದೆ.
ನಮ್ಮಲ್ಲಿ ಹೆಚ್ಚುವರಿ ಸಂಪತ್ತು ಇದ್ದಾಗ ನಾವು ದುಂದುವೆಚ್ಚ ಮಾಡುತ್ತೇವೆ ಮತ್ತು ಸಂಪತ್ತು ಕುಸಿದಾಗ ಮಿತವ್ಯಯದ ಮಾರ್ಗವನ್ನು ಹುಡುಕುತ್ತೇವೆ. ಆಹಾರವು ಕಡಿಮೆಯಿದ್ದಾಗ ಮುಂದಿನ ಉಳಿವಿಗಾಗಿ ಇಂಧನವನ್ನು ಸಂರಕ್ಷಿಸಲು ಶಕ್ತಿಯ ವ್ಯಯವನ್ನು ತಗ್ಗಿಸಲು ನಮ್ಮ ಮಿದುಳು ಇದೇ ತರ್ಕವನ್ನು ಬಳಸುತ್ತದೆ. ಇದು ಕ್ಷಾಮದ ಸಂದರ್ಭಗಳಲ್ಲಿ ಬದುಕುಳಿಯಲು ಶರೀರವು ಅಳವಡಿಸಿಕೊಂಡಿರುವ ಕಾರ್ಯತಂತ್ರವಾಗಿದೆ. ಇಂದಿನ ಜಗತ್ತಿನಲ್ಲಿ ಅದೃಷ್ಟವಶಾತ್ ಬರಗಾಲಗಳು ಕಡಿಮೆ,ಆದರೆ ತಮ್ಮ ಆಹಾರ ಸೇವನೆ ಕ್ಯಾಲರಿಗಳ ವ್ಯಯಕ್ಕಿಂತ ಹೆಚ್ಚಾಗಿರುವುದರಿಂದ ಶರೀರವು ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ,ಹೀಗಾಗಿ ಹೆಚ್ಚುವರಿ ಕ್ಯಾಲರಿಗಳು ಶರೀರದಲ್ಲಿ ದಾಸ್ತಾನಾಗಿರುತ್ತವೆ ಎಂದು ದೇಹತೂಕವನ್ನು ಗಳಿಸುವ ಹಲವರು ಭಾವಿಸುತ್ತಾರೆ.
ಆಹಾರ ಮತ್ತು ಕ್ಯಾಲರಿ ಸೇವನೆಯನ್ನು ಕಡಿಮೆ ಮಾಡುವುದು ಈ ಸಮಸ್ಯೆಗೆ ಪರಿಹಾರ ಎನ್ನುವುದು ಹಲವರ ನಂಬಿಕೆಯಾಗಿದೆ. ತೂಕವನ್ನು ಕಳೆದುಕೊಳ್ಳಲು ಈ ಕಾರ್ಯತಂತ್ರವು ಆರಂಭದಲ್ಲಿ ಉತ್ತಮ ಹೌದು,ಏಕೆಂದರೆ ಅಧಿಕ ಕ್ಯಾಲರಿಗಳ ಆಹಾರ ಸೇವನೆಯಿಂದಾಗಿ ಶರೀರದಲ್ಲಿ ಹೆಚ್ಚು ನೀರಿನ ನಷ್ಟವುಂಟಾಗುತ್ತದೆ. ಡಯಟ್ ನ ಮೊದಲ ಕೆಲವು ವಾರಗಳಲ್ಲಿ ಕ್ಯಾಲರಿಗಳು ಕಡಿಮೆಯಾದಾಗ ಶರೀರವು ನೀರಿನ ತೂಕವನ್ನು ಕಳೆದುಕೊಳ್ಳುತ್ತದೆ. ಭೇದಾತ್ಮಕ ತೂಕ ದೃಷ್ಟಿಕೋನದಲ್ಲಿ ನೀರಿನ ನಷ್ಟಕ್ಕೆ ಸಂಬಂಧಿಸಿದಂತೆ ಕೊಬ್ಬು ಕರಗುವಿಕೆಯು ನಿಧಾನವಾಗುತ್ತದೆ. ಶರೀರವು ಒಮ್ಮೆ ನೀರಿನ ತೂಕವನ್ನು ಕಳೆದುಕೊಂಡರೆ ಕೊಬ್ಬಿನ ತೂಕವು ಅತ್ಯಂತ ನಿಧಾನವಾಗಿ ನಷ್ಟಗೊಳ್ಳುತ್ತದೆ. ಈ ಕ್ರಮೇಣ ಪ್ರಕ್ರಿಯೆಯು ಕಡಿಮೆ ಕ್ಯಾಲರಿಗಳ ಡಯಟ್ ಯಾವುದೇ ಫಲಿತಾಂಶವನ್ನು ನೀಡಿಲ್ಲ ಎಂಬ ಭಾವನೆಯನ್ನು ವ್ಯಕ್ತಿಯಲ್ಲಿ ಉಂಟು ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಮಸ್ತಿಷ್ಕ ನಿಮ್ನಾಂಗವು ಶರೀರದ ಕಾರ್ಯಗಳನ್ನು ನಿಧಾನಿಸುವ ಮೂಲಕ ಶಕ್ತಿಯ ವ್ಯಯವನ್ನು ತಗ್ಗಿಸಿರುತ್ತದೆ ಮತ್ತು ಕೃಶ ಸ್ನಾಯು ಕೋಶಗಳನ್ನು ಕಳಚಿಕೊಳ್ಳುತ್ತದೆ. ಎರಡನೆಯ ಹಂತದಲ್ಲಿ ಶರೀರವು ಆಹಾರ ಬಯಸುವ ವರ್ತನೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಇದು ತನ್ನೊಂದಿಗೆ ದಣಿವು, ಖಿನ್ನತೆಯನ್ನು ತರುತ್ತದೆ. ಕ್ರಮೇಣ ಹೆಚ್ಚಿನ ಹಸಿವು ಮತ್ತು ನಿಧಾನ ಚಯಾಪಚಯದಿಂದಾಗಿ ತೂಕವನ್ನು ಮರುಗಳಿಸಿಕೊಳ್ಳಲು ವ್ಯಕ್ತಿಯು ಅಗತ್ಯ ಕ್ಯಾಲರಿಗಳನ್ನು ಸೇವಿಸುವುದು ಅನಿವಾರ್ಯವಾಗುತ್ತದೆ. ಹೀಗೆ ಡಯಟಿಂಗ್ ನ ಇಂತಹ ಪ್ರತಿ ಹಾನಿಕಾರಕ ಚಕ್ರವು ವ್ಯಕ್ತಿಯು ಕ್ಷಣಿಕವಾಗಿ ನೀರಿನ ತೂಕವನ್ನು ಕಳೆದುಕೊಳ್ಳುತ್ತ ಕೊಬ್ಬನ್ನು ಗಳಿಸಿಕೊಳ್ಳುವಂತೆ ಮಾಡುತ್ತದೆ ಮತ್ತು ಇದೇ ವೇಳೆ ಕೊಬ್ಬಿನ ತೂಕವು ತಾತ್ಕಾಲಿಕವಾಗಿ ಇಳಿಕೆಯಾಗಿದೆ ಎಂಬ ಭಾವನೆಯನ್ನುಂಟು ಮಾಡುತ್ತದೆ.
ಹೀಗಾಗಿ ಸಮೃದ್ಧ ಪ್ರೋಟಿನ್, ಆರೋಗ್ಯಕರ ಕೊಬ್ಬುಗಳು ಮಂದ ಕಾರ್ಬೊಹೈಡ್ರೇಟ್ಗಳನ್ನು ಒಳಗೊಂಡಿರುವ ಡಯಟ್ ನಮಗೆ ಅತ್ಯಂತ ಸೂಕ್ತವಾಗುತ್ತದೆ, ಇವೆಲ್ಲ ರಕ್ತದಲ್ಲಿಯ ಸಕ್ಕರೆ ಮಟ್ಟ ಗಣನೀಯವಾಗಿ ಹೆಚ್ಚದಂತೆ ನೋಡಿಕೊಳ್ಳುತ್ತವೆ.
ಕೃಪೆ: indianexpress.com
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.