Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇರಾಕ್: ಪೋಪ್-ಅಲ್‌ಸಿಸ್ತಾನಿ ಮಾತುಕತೆ...

ಇರಾಕ್: ಪೋಪ್-ಅಲ್‌ಸಿಸ್ತಾನಿ ಮಾತುಕತೆ ಶಾಂತಿಸ್ಥಾಪನೆಗೆ ಶ್ರಮಿಸಲು ಇರಾಕಿನ ಮುಸ್ಲಿಂ-ಕ್ರೈಸ್ತರಿಗೆ ಕರೆ

ವಾರ್ತಾಭಾರತಿವಾರ್ತಾಭಾರತಿ6 March 2021 10:17 PM IST
share
ಇರಾಕ್: ಪೋಪ್-ಅಲ್‌ಸಿಸ್ತಾನಿ ಮಾತುಕತೆ ಶಾಂತಿಸ್ಥಾಪನೆಗೆ ಶ್ರಮಿಸಲು ಇರಾಕಿನ ಮುಸ್ಲಿಂ-ಕ್ರೈಸ್ತರಿಗೆ ಕರೆ

 ಉರ್ ಬಯಲುಪ್ರದೇಶ (ಇರಾಕ್),ಮಾ.6: ಇರಾಕ್ ಪ್ರವಾಸದಲ್ಲಿರುವ ಪೋಪ್ ಫ್ರಾನ್ಸಿಸ್ ಹಾಗೂ ಇರಾಕ್‌ನ ಪ್ರಭಾವಿ ಶಿಯಾ ಧರ್ಮಗುರು ಅಯಾತೊಲ್ಲಾ ಅಲಿ ಸಿಸ್ತಾನಿ ಅವರು ಕ್ರೈಸ್ತರು ಹಾಗೂ ಮುಸ್ಲಿಮರ ನಡುವೆ ಶಾಂತಿಯುತ ಸಹಬಾಳ್ವೆಯ ಪ್ರಬಲ ಸಂದೇಶವನ್ನು ಶನಿವಾರ ನೀಡಿದ್ದಾರೆ. ಅಂತರಿಕ ಯುದ್ಧದಿಂದ ಜರ್ಝರಿತ ಗಲ್ಫ್ ರಾಷ್ಟ್ರವಾದ ಇರಾಕ್‌ನಲ್ಲಿ ಸಂಕಷ್ಟಕ್ಕೀಡಾಗಿರುವ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯಕ್ಕೆ ಸಾಂತ್ವನ ನೀಡಬೇಕೆಂದು ಅವರು ಕರೆಕೊಟ್ಟಿದ್ದಾರೆ.

 ಇರಾಕ್‌ನಲ್ಲಿ ಶಿಯಾ ಸಮುದಾಯದ ಪವಿತ್ರ ನಗರವಾದ ನಜಾಫ್‌ಗೆ ಶನಿವಾರ ಆಗಮಿಸಿದ ಪೋಪ್ ಫ್ರಾನ್ಸಿಸ್ ಅವರು ಅಯಾತೊಲ್ಲಾಅಲಿ ಸಿಸ್ತಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇರಾಕ್‌ನ ಅಲ್ಪಸಂಖ್ಯಾತರಾಗಿರುವ ಕ್ರೈಸ್ತರ ರಕ್ಷಣೆಯಲ್ಲಿ ಧಾರ್ಮಿಕ ಸಂಸ್ಥೆಗಳು ಪಾತ್ರವಹಿಸಬೇಕಾಗಿದೆ ಎಂದು ಸಿಸ್ತಾನಿ ಹೇಳಿದರು. ಇರಾಕ್‌ನಲ್ಲಿ ಕ್ರೈಸ್ತರು ಶಾಂತಿಯುತವಾಗಿ ಬದುಕಬೇಕಾಗಿದೆ ಹಾಗೂ ಅವರು ಇತರ ಇರಾಕಿಗಳಷ್ಟೇ ಸಮಾನವಾದ ಅಧಿಕಾರವನ್ನು ಹೊಂದಿದ್ದಾರೆಎಂದು ಸಿಸ್ತಾನಿ ಅಭಿಪ್ರಾಯಿಸಿದರು.

   ಮಾತುಕತೆಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು, ‘ಅತ್ಯಂತ ದುರ್ಬಲರು ಮತ್ತು ಅತ್ಯಂತ ದಬ್ಬಾಳಿಕೆಗೊಳಗಾದವರ ಪರವಾಗಿ ಧ್ವನಿಯನ್ನು ಎತ್ತಿದ್ದಕ್ಕಾಗಿ’ ಅಲ್ ಸಿಸ್ತಾನಿ ಅವರಿಗೆ ಕೃತಜ್ಞತೆ ಅರ್ಪಿಸಿದರು. 90 ವರ್ಷ ವಯಸ್ಸಿನ ಅಲ್ ಸಿಸ್ತಾನಿ ಅವರು ಶಿಯಾ ಮುಸ್ಲಿಂ ಸಮುದಾಯದ ಅತ್ಯಂತ ಹಿರಿಯ ಹಾಗೂ ಪ್ರಭಾವಿ ಧರ್ಮಗುರು ಗಳಲ್ಲೊಬ್ಬರಾಗಿದ್ದಾರೆ.

     ಶನಿವಾರ ಮುಂಜಾನೆ ನಜಾಫ್‌ಗೆ ಆಗಮಿಸಿದ 84 ವರ್ಷ ವಯಸ್ಸಿನ ಪೋಪ್ ಫ್ರಾನ್ಸಿಸ್ ಅವರು ಶಿಯಾ ಸಮುದಾಯದ ಪ್ರಮುಖ ಸ್ಥಳಗಳಲ್ಲೊಂದಾದ ಇಮಾಮ್ ಅಲಿ ಮಸೀದಿಯ ಸಮೀಪದಲ್ಲಿರುವ ಅಲ್‌ಸಿಸ್ತಾನಿಯವರ ನಿವಾಸಕ್ಕೆ ಆಗಮಿಸಿದು.

  ಸಾಂಪ್ರಾದಾಯಿಕ ಇರಾಕಿ ಉಡುಪುಗಳನ್ನು ಧರಿಸಿದ ತಂಡವೊಂದು ಪೋಪ್ ಅವರನ್ನು ಸ್ವಾಗತಿಸಿತು. ಪೋಪ್ ಆಗಮನದ ಹಿನ್ನೆಲೆಯಲ್ಲಿ ಶಾಂತಿಯ ಸಂಕೇತವಾಗಿ ಬಿಳಿ ಪಾರಿವಾಳಗಳನ್ನು ಹಾರಿಬಿಡಲಾಯಿತು.

 ಪೋಪ್ ಹಾಗೂ ಅಲ್‌ಸಿಸ್ತಾನಿ ಅವರ ಮಧ್ಯೆ 40 ನಿಮಿಷಗಳ ಕಾಲ ನಡೆದ ಮಾತುಕತೆ ಅತ್ಯಂತ ಸಕಾರಾತ್ಮಕವಾಗಿತ್ತು ಎಂದು ನಜಾಫ್‌ನ ಧಾರ್ಮಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯವಾಗಿ ಸಂದರ್ಶಕರನ್ನು ಆಸನದಲ್ಲಿ ಕುಳಿತುಕೊಂಡೇ ಬರಮಾಡಿಕೊಳ್ಳುವ ಸಿಸ್ತಾನಿ ಅವರು ಪೋಪ್ ಅವರ ಗೌರವಾರ್ಥವಾಗಿ ತನ್ನ ಕೊಠಡಿಯ ಬಾಗಿಲ ಎದುರು ನಿಂತು ಅವರನ್ನು ಸ್ವಾಗತಸಿದರು.

  ಸಿಸ್ತಾನಿ ಜೊತೆ ಮಾತುಕತೆಯ ಬಳಿಕ ಪೋಪ್ ಅವರು ಪುರಾತನವಾದ ಉರ್ ನಗರಕ್ಕೆ ಭೇಟಿ ನೀಡಿದರು. ಅಲ್ಲಿ ನಡೆದ ಅಂತರ್ ಧರ್ಮೀಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇರಾಕ್‌ನ ಮುಸ್ಲಿಮರು ಹಾಗೂ ಕ್ರೈಸ್ತರು ತಮ್ಮ ನಡುವಿನ ಐತಿಹಾಸಿಕ ವಿದ್ವೇಷಗಳನ್ನು ತೊರೆದು ಶಾಂತಿ ಹಾಗೂ ಏಕತೆಗಾಗಿ ಶ್ರಮಿಸುವತೆ ಕರೆ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X