ದುಷ್ಕರ್ಮಿಗಳಿಂದ ಶ್ರೀಲಂಕಾ ಪ್ರಜೆಯನ್ನು ರಕ್ಷಿಸಲೆತ್ನಿಸಿದ ವ್ಯಕ್ತಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ ಪಾಕ್ ಪ್ರಧಾನಿ
ಧರ್ಮನಿಂದನೆ ಆರೋಪದಲ್ಲಿ ಗುಂಪು ಹತ್ಯೆ ಪ್ರಕರಣ
ಇಸ್ಲಾಮಾಬಾದ್: ಧರ್ಮನಿಂದನೆ ಆರೋಪದಲ್ಲಿ ಶ್ರೀಲಂಕಾ ಪ್ರಜೆ ಹಾಗೂ ಉದ್ಯಮಿ ಪ್ರಿಯಾಂತಾ ದಿಯವದನ ಎಂಬ ವ್ಯಕ್ತಿಯನ್ನು ಥಳಿಸಿ ಕೊಂದ ಘಟನೆ ಪಾಕಿಸ್ತಾನದ ಸಿಯಾಲ್ ಕೋಟ್ ನಲ್ಲಿ ನಡೆದಿತ್ತು. ಇಸ್ಲಾಂ ಧರ್ಮದ ಪೋಸ್ಟರ್ ಗಳನ್ನು ಹರಿದು ಕಸದಬುಟ್ಟಿಗೆ ಎಸೆದಿದ್ದಾನೆಂಬ ವದಂತಿಯ ಮೇರೆಗೆ ಕೃತ್ಯ ನಡೆದಿತ್ತು. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಮಾತ್ರವಲ್ಲದೇ ನೂರಕ್ಕೂ ಹೆಚ್ಚು ಮಂದಿಯನು ಬಂಧಿಸಲಾಗಿತ್ತು. ಇದೀಗ ಪ್ರಕರಣದ ಸಂದರ್ಭದಲ್ಲಿ ವ್ಯಕ್ತಿಯನ್ನು ರಕ್ಷಸಲೆತ್ನಿಸಿದ ಯುವಕನಿಗೆ ಶೌರ್ಯ ಪ್ರಶಸ್ತಿ ನೀಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, "ಸಿಯಾಲ್ ಕೋಟ್ ನಲ್ಲಿ ದುಷ್ಕರ್ಮಿಗಳಿಂದ ಪ್ರಿಯಾಂತ ದಿಯವದನಾರನ್ನು ರಕ್ಷಿಸಲು ತನ್ನ ಪ್ರಾಣವನ್ನು ಒತ್ತೆಯಿಟ್ಟು ಪ್ರಯತ್ನಿಸಿದ ಹಾಗೂ ಜನಸಮೂಹದಿಂದ ಅವರನ್ನು ರಕ್ಷಿಸಲು ತಮ್ಮಿಂದಾಗುವ ಪ್ರಯತ್ನವನ್ನು ಮಾಡಿದ ಮಲಿಕ್ ಅದ್ನಾನ್ ರ ನೈತಿಕ ಸ್ಥೈರ್ಯ, ಶೌರ್ಯಕ್ಕ ರಾಷ್ಟ್ರದ ಪರವಾಗಿ ನಾನು ಸೆಲ್ಯೂಟ್ ಮಾಡುತ್ತಿದ್ದೇನೆ. ಅವರಿಗೆ ತಮ್ಗಾ-ಇ-ಸುಜಾತ್ ಪ್ರಶಸ್ತಿಯನ್ನು ನೀಡಲಾಗುವುದು" ಎಂದು ಟ್ವೀಟ್ ಮಾಡಿದ್ದಾರೆ.
On behalf of the nation I want to salute moral courage & bravery of Malik Adnan who tried his utmost to shelter & save Priyantha Diyawadana from the vigilante mob in Sialkot incl endangering his own life by physically trying to shield victim. We will award him Tamgha i Shujaat
— Imran Khan (@ImranKhanPTI) December 5, 2021
سوروں کے آنے سے قبل وہاں انسان بھی موجود تھے۔پروڈکشن مینجر ملک عدنان اور دیگر پریانتھا کو بچانے چھت پر لے گئے تھے۔
— Muhammad Umair (@MohUmair87) December 4, 2021
ایسے ہیروز کو بھی یاد رکھنا چاہیے جنہوں نے اپنا حق ضرور ادا کیا۔#Sialkot pic.twitter.com/r8vIyUdCel
The only MAN who stood infront of the mob to save priyantha but failed!
— (@Silent_deserts) December 5, 2021
But he tried!#MalikAdnan #سانحہ_سیالکوٹ #Sialkot pic.twitter.com/eTxv7y7W7p