Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವಿಶ್ರಾಂತ ಪೋಪ್ ಬೆನೆಡಿಕ್ಟ್ ಮೃತಪಟ್ಟ...

ವಿಶ್ರಾಂತ ಪೋಪ್ ಬೆನೆಡಿಕ್ಟ್ ಮೃತಪಟ್ಟ ಬಳಿಕ ವ್ಯಾಟಿಕನ್‌ನಲ್ಲಿ ಅಸಮಾಧಾನ ಸ್ಫೋಟ: ವರದಿ

11 Feb 2023 11:38 PM IST
share
ವಿಶ್ರಾಂತ ಪೋಪ್ ಬೆನೆಡಿಕ್ಟ್ ಮೃತಪಟ್ಟ ಬಳಿಕ ವ್ಯಾಟಿಕನ್‌ನಲ್ಲಿ ಅಸಮಾಧಾನ ಸ್ಫೋಟ: ವರದಿ

ವ್ಯಾಟಿಕನ್ ಸಿಟಿ, ಫೆ.11: ತಮ್ಮ ಪೂರ್ವಾಧಿಕಾರಿ ಬೆನೆಡಿಕ್ಟ್ ಮೃತಪಟ್ಟ ಬಳಿಕ ಪೋಪ್ ಫ್ರಾನ್ಸಿಸ್ ವ್ಯಾಟಿಕನ್‌ನಲ್ಲಿ ‘ಅಂತರ್ಯುದ್ಧ’ ಎದುರಿಸುತ್ತಿದ್ದಾರೆ. ಫ್ರಾನ್ಸಿಸ್ ವಿರುದ್ಧದ ಟೀಕಾಪ್ರಹಾರ ಮತ್ತು ಅಸಮಾಧಾನ ತೀವ್ರಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪೋಪ್ ಫ್ರಾನ್ಸಿಸ್ ಅವರ ಸುಧಾರಣಾ ಕ್ರಮಗಳು, ಅವರ ವಿದೇಶಿ ಸಂಬಂಧಗಳ ನೀತಿಯನ್ನು ಟೀಕಿಸುತ್ತಿರುವವರ ಸಂಖ್ಯೆ ಈಗ ಹೆಚ್ಚಿದೆ. 8 ವರ್ಷ ಪೋಪ್ ಹುದ್ದೆಯಲ್ಲಿದ್ದು 2013ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದ ಬೆನೆಡಿಕ್ಟ್ 96ನೇ ವಯಸ್ಸಿನಲ್ಲಿ ಕಳೆದ ಡಿಸೆಂಬರ್ 31ರಂದು ಮೃತಪಟ್ಟಿದ್ದರು. ತಮ್ಮ ಉತ್ತರಾಧಿಕಾರಿಯಾದ ಪೋಪ್ ಫ್ರಾನ್ಸಿಸ್ ಕೈಗೊಂಡ ಹಲವು ನಿರ್ಧಾರಗಳ ಬಗ್ಗೆ ಬೆನೆಡಿಕ್ಟ್‌ಗೆ ಆತಂಕವಿತ್ತು ಎಂದು ಬೆನೆಡಿಕ್ಟ್ ಅವರ ನಿಕಟವರ್ತಿ ಜಾರ್ಜ್ ಗೇನ್ಸ್‌ವೆನ್ ಹೇಳಿದ್ದಾರೆ.

ಫ್ರಾನ್ಸಿಸ್ ಅವರ ವಿರುದ್ಧದ ಟೀಕೆಗಳು ಹೊಸದೇನೂ ಅಲ್ಲ. ಫ್ರಾನ್ಸಿಸ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಮತ್ತು ವೈಯಕ್ತಿಕ ವಿಷಯಗಳಿಗೆ ಆದ್ಯತೆ ನೀಡಿ ಧರ್ಮಶಾಸ್ತ್ರದ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಟೀಕೆ ವ್ಯಾಪಕವಾಗಿದೆ. ಈ ಮಧ್ಯೆ, ಆಸ್ಟ್ರೇಲಿಯಾದ ಕಾರ್ಡಿನಲ್ ಬಿಷಪ್ ಜಾರ್ಜ್ ಪೆಲ್ ಗುಪ್ತಹೆಸರಿನಿಂದ ಕಳೆದ ವರ್ಷ ಪ್ರಕಟಿಸಿರುವ ಹಲವು ಲೇಖನಗಳಲ್ಲಿ ಫ್ರಾನ್ಸಿಸ್ ವಿರುದ್ಧ ನೇರ ಆರೋಪ ಮಾಡಲಾಗಿದೆ. ಜರ್ಮನಿಯ ಕಾರ್ಡಿನಲ್ ಗೆರ್ಹಾರ್ಡ್ ಮುಲ್ಲರ್ ಪ್ರಕಟಿಸಿದ ಪುಸ್ತಕದಲ್ಲಿ ಫ್ರಾನ್ಸಿಸ್ ವಿರುದ್ಧ ಮತ್ತಷ್ಟು ಆರೋಪ, ಟೀಕೆ ವ್ಯಕ್ತವಾಗಿದೆ. ಈಗಿನ ಪೋಪ್ ಅವರ ಆಡಳಿತ ಒಂದು ದುರಂತವಾಗಿದೆ ಮತ್ತು ಅವರ ಕಾರ್ಯಾವಧಿಯಲ್ಲಿ ವ್ಯಾಟಿಕನ್‌ನ ರಾಜತಾಂತ್ರಿಕತೆ ಭಾರೀ ವೈಫಲ್ಯ ಕಂಡಿದೆ. ಫ್ರಾನ್ಸಿಸ್ ಅವರು ಸಿದ್ಧಾಂತದ ಗೊಂದಲದಲ್ಲಿದ್ದಾರೆ ಮತ್ತು ತಮ್ಮ ಸುತ್ತಲಿನ ‘ಮ್ಯಾಜಿಕ್ ಸರ್ಕಲ್’ನ ಪ್ರಭಾವದಲ್ಲಿದ್ದಾರೆ ಎಂದು ಮುಲ್ಲರ್ ಟೀಕಿಸಿದ್ದಾರೆ. ಆದರೆ ಮುಲ್ಲರ್ ಅವರ ಹೇಳಿಕೆಯನ್ನು ವ್ಯಾಟಿಕನ್‌ನ ಒಳಗಿರುವ ಕೆಲವರು ವಿರೋಧಿಸಿದ್ದಾರೆ. ‘ನೀವು ಕಾರ್ಡಿನಲ್ ಹುದ್ದೆ ಒಪ್ಪಿಕೊಂಡರೆ ಪೋಪ್‌ರನ್ನು ಬೆಂಬಲಿಸಲು ಮತ್ತು ಅವರಿಗೆ ನೆರವಾಗಲು ಒಪ್ಪಿಕೊಂಡಂತೆ ಆಗುತ್ತದೆ. ಭಿನ್ನಾಭಿಪ್ರಾಯ ಸಹಜ. ಆದರೆ ಟೀಕೆಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದು ಸರಿಯಲ್ಲ ಎಂದು ವ್ಯಾಟಿಕನ್‌ನ ಹಿರಿಯ ಅಧಿಕಾರಿಯೊಬ್ಬರು ಖಂಡಿಸಿದ್ದಾರೆ. ‘ತನ್ನನ್ನು ಟೀಕಿಸುವವರು ಬೆನೆಡಿಕ್ಟ್ ಅವರ ಮರಣದ ಸಂದರ್ಭವನ್ನು ವೈಯಕ್ತಿಕ ಸ್ವಾರ್ಥ ಸಾಧನೆಗೆ ಬಳಸಿಕೊಂಡಿದ್ದಾರೆ. ಅವರು ಚರ್ಚ್‌ಗೆ ಸಂಬಂಧಿಸಿದ ವ್ಯಕ್ತಿಗಳಲ್ಲ,ಲ ಪಕ್ಷಕ್ಕೆ ಸಂಬಂಧಿಸಿದವರು’ ಎಂದು ಪೋಪ್ ಫ್ರಾನ್ಸಿಸ್ ಪ್ರತಿಕ್ರಿಯಿಸಿದ್ದಾರೆ.

ಮುಲ್ಲರ್ ಅವರ ಪುಸ್ತಕವು ಪೋಪ್ ಅವರ ವಿರೋಧಿಗಳ ತಡೆಯಲಾಗದ ಉಲ್ಬಣದಲ್ಲಿ ಹೊಸ ಹಂತವಾಗಿದೆ. ಚರ್ಚ್‌ನ ಹೃದಯಭಾಗದಲ್ಲಿ ಅಂತರ್ಯುದ್ಧವಿದೆ ಮತ್ತು ಅದು ಪೋಪ್ ಅಧಿಕಾರದ ಕೊನೆಯ ದಿನದವರೆಗೆ ಮುಂದುವರಿಯುತ್ತದೆ ಎಂದು ವ್ಯಾಟಿಕನ್ ವಿಷಯದ ತಜ್ಞ ಮಾರ್ಕೊ ಪೊಲಿಟಿ ಹೇಳಿದ್ದಾರೆ.

share
Next Story
X