-

​ಪಾಕ್ ಜೊತೆ ಉದ್ಯಮ ಬಾಂಧವ್ಯಗಳನ್ನು ಬಲಪಡಿಸಲು ಭಾರತ ಬಯಸುತ್ತಿದೆ: ಭಾರತದ ಉಪಹೈಕಮೀಶನರ್ ಸುರೇಶ್ ಕುಮಾರ್

-

Photo; pti 

ಇಸ್ಲಾಮಾಬಾದ್,ಮಾ.18: ಭಾರತವು ಪಾಕಿಸ್ತಾನದ ಜೊತೆಗೆ ಯಾವುದೇ ರೀತಿಯ ವಾಣಿಜ್ಯ ಸಂಬಂಧಗಳನ್ನು ಸ್ಥಗಿತಗೊಳಿಸಿಲ್ಲ ಹಾಗೂ ಆ ದೇಶದ ಜೊತೆ ಔದ್ಯಮಿಕ ಬಾಂಧವ್ಯಗಳನ್ನು ಸಹಜಗೊಳಿಸುವತ್ತ ಹೆಜ್ಜೆಯಿಡಲು ಬಯಸುತ್ತಿದೆ ಎಂದು ಪಾಕಿಸ್ತಾನದಲ್ಲಿನ ಭಾರತದ ಉಪ ಹೈಕಮೀಶನರ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ‘‘ಇಂದಿನ ಜಗತ್ತಿನಲ್ಲಿ ರಾಜತಾಂತ್ರಿಕತೆಯು ಪ್ರವಾಸೋದ್ಯಮ, ವ್ಯಾಪಾರ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತದೆ. ಯಾಕೆಂದರೆ ಹಣವು ಅದರದ್ದೇ ಆದ ಭಾಷೆಯಲ್ಲಿ ಮಾತನಾಡುತ್ತದೆ ’’ಎಂದವರು ಹೇಳಿದ್ದಾರೆ.

ಲಾಹೋರ್ ವಾಣಿಜ್ಯಹಾಗೂ ಕೈಗಾರಿಕಾ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆಂದು ‘ದಿ ಡಾನ್ ’ ಪತ್ರಿಕೆ ವರದಿ ಮಾಡಿದೆ.

‘‘ಭಾರತವು ಯಾವತ್ತಿಗೂ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧಗಳನ್ನು ಹೊಂದಲು ಬಯಸುತ್ತಿದೆ. ಯಾಕೆಂದರೆ ನಮ್ಮ ಭೌಗೋಳಿಕತೆಯನ್ನು ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ’’ ಎಂದರು. ‘‘ನಾವು ಪಾಕಿಸ್ತಾನದ ಜೊತೆಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿಲ್ಲ. ಆದರೆ ಪಾಕಿಸ್ತಾನವು ಹಾಗೆ ಮಾಡಿತ್ತು.ಉಭಯ ದೇಶಗಳು ನಮ್ಮ ನಡುವಿನ ಸಮಸ್ಯೆಗಳನ್ನು ಹಾಗೂ ಸನ್ನಿವೇಶಗಳನ್ನು ನಾವು ಹೇಗೆ ಬದಲಾಯಿಸಲು ಸಾಧ್ಯವೆಂಬುದನ್ನು ಪರಿಶೀಲಿಸುವುದು ಒಳಿತು’’ ಎಂದು ಕುಮಾರ್ ಅಭಿಪ್ರಾಯಿಸಿದರು.

ಕೋವಿಡ್19 ಸಾಂಕ್ರಾಮಿಕದ ಅವಧಿಯಲ್ಲಿ ಪಾಕಿಸ್ತಾನಿಗಳಿಗೆ ಭಾರತೀಯ ರಾಯಭಾರಿ ಕಚೇರಿಯಿಂದ ನೀಡಲಾದ ವೀಸಾಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದನ್ನು ಅವರು ಒಪ್ಪಿಕೊಂಡರು. ಆದಾಗ್ಯೂ, ವೀಸಾ ಸಂಖ್ಯೆಯಲ್ಲಿ ಈಗ ಹೆಚ್ಚಳವಾಗಿದೆ.ಪ್ರತಿ ವರ್ಷವೂ ಪಾಕಿಸ್ತಾನದ 30 ಸಾವಿರ ಮಂದಿ ವೀಸಾಗಳನ್ನು ನೀಡಲಾಗುತ್ತಿದೆ ಎಂದವರು ಹೇಳಿದರು.

 ಭಾರತ ಸರಕಾರವು ಪಾಕ್ ಪ್ರಜೆಗಳಿಗೆ ಕ್ರೀಡಾ ಹಾಗೂ ವೈದ್ಯಕೀಯ ವೀಸಾಗಳನ್ನು ಕೂಡಾ ನೀಡುತ್ತಿದೆ ಎಂದರು. ಸರಕು ಹಾಗೂ ಸೇವೆಗಳ ಆಮದು ಉತ್ತಮವಲ್ಲವೆಂಬುದನ್ನು ಯಾವಾಗಲೂ ಹೇಳಲಾಗದು.ಹಲವು ಸಂದರ್ಭಗಳಲ್ಲಿ ಅದರಿಂದ ಪ್ರಯೋಜನಗಳೂ ಇವೆ ಎಂದು ಕುಮಾರ್ ಅಭಿಪ್ರಾಯಿಸಿದರು.
ಭಾರತವು ಪ್ರಸಕ್ತ ಚೀನಾದ ಜೊತೆಗೆ 120 ಶತಕೋಟಿ ಡಾಲರ್ ವೌಲ್ಯದ ವ್ಯಾಪಾರವನ್ನು ನಡೆಸುತ್ತಿದೆ ಎಂದರು.

ಲಾಹೋರ್ ಕೈಗಾರಿಕಾ ಹಾಗೂ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕಾಶಿಫ್ ಅನ್ವರ್ ಮಾತನಾಡಿ ಬಾರತ ಮತ್ತು ಪಾಕಿಸ್ತಾನದ ಜೊತೆಗಿನ ಆರ್ಥಿಕ ಬಾಂಧವ್ಯಗಳ ಸುಧಾರಣೆಯು ಒಂದು ಸಂಕೀರ್ಣ ವಿಷಯವಾಗಿದ್ದು, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅಂಶಗಳೊಂದಿಗೆ ಅದಕ್ಕೆ ಸ್ಪಂದಿಸಬೇಕಾಗತ್ತದೆ ಎಂದರು.

 ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವಿನ ಆರ್ಥಿಕ ಸಂಬಂಧದ ಸುಧಾರಣೆಗೆ ಅತಿ ದೊಡ್ಡ ಹೆಜ್ಜೆಯನ್ನಿಡಬೇಕೆಂಬುದೇ ನಮ್ಮ ಅನಿಸಿಕೆಯಾಗಿದೆ. ಇದರಿಂದಾಗಿ ಉಭಯದೇಶಗಳಿಗೆ ಗಣನೀಯ ಪ್ರಮಾಣದ ಆರ್ಥಿಕ ಪ್ರಯೋಜನಗಳು ದೊರೆಯಲಿವೆ’’ ಎಂದು ಕಾಶಿಫ್ ಅನ್ವರ್ ಆಶಾವಾದ ವ್ಯಕ್ತಪಡಿಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top