ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ಸೆರೆ
ಬೆಂಗಳೂರು, ಅ.14: ಮಾಸ್ಕ್ ಧರಿಸದೆ ನಗರದಲ್ಲಿ ಓಡಾಡುತ್ತಿದ್ದವರಿಗೆ ಕೇಸ್ ಹಾಕುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಮೂವರನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆರ್.ಟಿ.ನಗರದ ಕಾರ್ಲ್ಮಾರ್ಕ್ಸ್(25), ವಿದ್ಯಾರಣ್ಯಾಪುರದ ಶಿವಕುಮಾರ್(54) ಮತ್ತು ಮನೋರಾಯನ ಪಾಳ್ಯದ ಬಾಬು(40) ಎಂದು ಗುರುತಿಸಲಾಗಿದೆ.
ಗೋಕುಲ ಬ್ರಿಡ್ಜ್ ಕೆಳಗೆ ರೈಲ್ವೆ ಗೇಟ್ ಹತ್ತಿರ ಈ ಮೂವರು ಬಂಧಿತರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಇದನ್ನು ಪ್ರಶ್ನಿಸಿ ದಂಡ ಹಾಕಲು ಪೊಲೀಸರು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Next Story