ಮೀರ್ ಸಾದಿಕ್ ನಿಮ್ಮೊಂದಿಗೆ ಇದ್ದಾರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
ಬೆಂಗಳೂರು, ಅ. 21: `ಡಾ.ಅಶ್ವತ್ಥ ನಾರಾಯಣ ಅವರೇ ಪಕ್ಷದ್ರೋಹಿ, ಮತ ನೀಡಿದ ಜನರಿಗೆ ವಂಚಿಸಿದ ಮೀರ್ ಸಾದಿಕ್ ನಿಮ್ಮ ಜೊತೆಯಲ್ಲೆ ಇದ್ದಾರೆ. ಕಾಂಗ್ರೆಸ್ ಶಾಸಕರನ್ನು ಖರೀದಿಗೆ ಬಂಡವಾಳ ಹೂಡಿಕೆ ಮಾಡಿ ಮುಂಬೈನಲ್ಲಿ ಸೇವೆ ಮಾಡಿದ್ದಕ್ಕಾಗಿ ನೀವು ಉಪಮುಖ್ಯಮಂತ್ರಿ ಆಗಿದ್ದೀರಿ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮಿಶ್ರ ಸರಕಾರದ ಉಳಿವಿಗಾಗಿ ನಿಮ್ಮ ಅಸಹ್ಯ ರಾಜಕೀಯದ ವಿರುದ್ಧ ಮುಂಬೈನಲ್ಲೆ ಪ್ರತಿಭಟಿಸಿದ್ದರು. ಬೇರೆ ಪಕ್ಷದಲ್ಲಿರುವ ಮೀರ್ ಸಾದಿಕ್ಗಳನ್ನು ಹೆಕ್ಕಿ ಬಿಜೆಪಿಗೆ ಸೇರಿಸಿಕೊಳ್ಳುವುದರಲ್ಲಿ ನೀವು ನಿಷ್ಣಾತರು. ಡಿ.ಕೆ.ಶಿವಕುಮಾರ್ ಅವರ ಕುರಿತು ನೀವು ಮಾಡಿದ ಹೇಳಿಕೆ ನಿಮ್ಮ ಸ್ಥಾನದ ಘನತೆಗೆ ಮಾಡಿದ ಅಪಮಾನ. ರಾಜ ರಾಜೇಶ್ವರಿ ನಗರ ಹಾಗೂ ಶಿರಾದ ಜನತೆ ಉಪ ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
Next Story