ಗಲಭೆ ಪ್ರಕರಣ: ಸಂಪತ್ ರಾಜ್ ಸ್ನೇಹಿತರ ವಿಚಾರಣೆಗೆ ಮುಂದಾದ ಸಿಸಿಬಿ
ಬೆಂಗಳೂರು, ನ.4: ಡಿಜೆ-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರ ಸ್ನೇಹಿತರ ವಿಚಾರಣೆಗೆ ಸಿಸಿಬಿ ಮುಂದಾಗಿದೆ.
ಪ್ರಕರಣ ಬೆಳಕಿಗೆ ಬಂದ ಬೆಳಕಿಗೆ ತನಿಖೆಗೆ ಸಹಕಾರ ನೀಡದೆ, ತಲೆಮರೆಸಿಕೊಂಡಿರುವ ಆರೋಪ ಸಂಪತ್ ರಾಜ್ ಮೇಲಿದ್ದು, ಅವರ ಪತ್ತೆಗಾಗಿ ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಜತೆಗೆ, ಅವರ ಸ್ನೇಹಿತರ ಹೇಳಿಕೆ ದಾಖಲಿಸಿಕೊಳ್ಳಲು ಸಿಸಿಬಿ ನಿರ್ಧರಿಸಿದೆ.
ಮತ್ತೊಂದೆಡೆ ಸಂಪತ್ ರಾಜ್ ಅವರ ಕುಟುಂಬಸ್ಥರ ವಿಚಾರಣೆಯನ್ನು ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಹೊರ ರಾಜ್ಯಕ್ಕೂ ಸಿಸಿಬಿ ಪ್ರತ್ಯೇಕ ತಂಡ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದೆ.
Next Story