ಯಂತ್ರಗಳ ಮೂಲಕ ಸ್ವಚ್ಛಗೊಳಿಸಲಾಗಿದೆಯೇ ಹೊರತು ಕಾರ್ಮಿಕರ ಕೈಯಿಂದ ಅಲ್ಲ: ಜಲಮಂಡಳಿ ಸ್ಪಷ್ಟನೆ
ಬೆಂಗಳೂರು, ಮಾ.26: ನಗರದ ಮಹಾಲಕ್ಷ್ಮಿ ಲೇಔಟ್ನ ಆಂಜನೇಯ ದೇವಸ್ಥಾನದ ಬಳಿ ಮಷಿನ್ಹೋಲ್ನ್ನು ಯಂತ್ರಗಳ ಮೂಲಕ ಸ್ವಚ್ಛಗೊಳಿಸಲಾಗಿದೆಯೇ ಹೊರತು ಕಾರ್ಮಿಕರ ಕೈಯಿಂದ ಸ್ವಚ್ಛಗೊಳಿಸಲಾಗಿಲ್ಲವೆಂದು ಬೆಂಗಳೂರು ಜಲ ಮಂಡಳಿ ಸ್ಪಷ್ಟನೆ ನೀಡಿದೆ.
ವಾರ್ತಾಭಾರತಿ ಪತ್ರಿಕೆಯಲ್ಲಿ ನಿನ್ನೆ(ಮಾ.25) ಪ್ರಕಟವಾದ ವರದಿಗೆ ಸ್ಪಷ್ಟನೆ ನೀಡಿರುವ ಜಲಮಂಡಳಿ, ಮಾ.22ರಂದು ಮಷಿನ್ಹೋಲ್ ಸ್ವಚ್ಛಗೊಳಿಸುವ ಸಂಬಂಧ ಮಹಾಲಕ್ಷ್ಮಿ ಲೇಔಟ್ ಸೇವಾಠಾಣೆಯಲ್ಲಿ ದೂರು ಸ್ವೀಕರಿಸಿ, ಯಂತ್ರಗಳ ಮೂಲಕ ಸ್ವಚ್ಛಗೊಳಿಸಲಾಗಿದೆ. ಹಾಗೂ ಮಷಿನ್ಹೋಲ್ನ ಮೇಲ್ಭಾಗದ ಮುಚ್ಚಳವು ದುಸ್ಥಿತಿಯಲ್ಲಿದ್ದ ಕಾರಣ ಮಾ.25ರಂದು ಗುತ್ತಿಗೆದಾರರ ಮೂಲಕ ಕೂಡಲೇ ಹೊಸದಾದ ರಿಂಗ್ ಕವರ್ ನ್ನು ಅಳವಡಿಸಲಾಗಿದೆ. ಸದರಿ ಸ್ಥಳದಲ್ಲಿ ಕಾರ್ಮಿಕರ ಕೈಯಿಂದ ಮಷಿನ್ಹೋಲ್ ಸ್ವಚ್ಛಗೊಳಿಸಲಾಗಿಲ್ಲವೆಂದು ಪ್ರಕಟನೆಯ ಮೂಲಕ ಮಂಡಳಿ ಸ್ಪಷ್ಟಪಡಿಸಿದೆ.
Next Story