ಬೆಂಗಳೂರು; ನಾಲ್ಕನೇ ದಿನವೂ ಮುಂದುವರಿದ ಐಟಿ ಶೋಧ
ಬೆಂಗಳೂರು, ಅ.10: ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಅವರ ಆಪ್ತ ಎನ್ನಲಾದ ಅರವಿಂದ್ ಒಡೆತನದ ರಾಹುಲ್ ಎಂಟರ್ಪ್ರೈಸಸ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಾಲ್ಕನೇ ದಿನವಾದ ರವಿವಾರವೂ ಶೋಧ ಕಾರ್ಯ ನಡೆಸಿದರು.
ರವಿವಾರ ಬೆಳಗ್ಗೆಯಿಂದಲೇ ಸಹಕಾರ ನಗರದ ರಾಹುಲ್ ಎಂಟರ್ಪ್ರೈಸಸ್ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಲಾಯಿತು.
ಬಿಎಂಟಿಸಿ ಸಿಬ್ಬಂದಿಯೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಎನ್ನಲಾದ ಉಮೇಶ್ ಅವರ ಸೋಮಶೇಖರ್ ಮನೆಯಲ್ಲೇ ಅಧಿಕಾರಿಗಳು ಮೊಕ್ಕಾಂ ಹೂಡಿ ಅನೇಕ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಚಾರ್ಟೆಡ್ ಆಕೌಂಟೆಂಟ್ ಅಮಲಾ ನಿವಾಸದಲ್ಲಿ ವಿವಿಧ ಉದ್ಯಮಗಳು, ಟೆಂಡರ್ಗಳು, ವಿವಿಧ ಖಾಸಗಿ ಕಂಪೆನಿಗಳ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಬಹುತೇಕ ಅಲ್ಲಿಯೂ ದಾಳಿ ಮುಗಿಯುವ ಹಂತಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ.
Next Story